ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ‘ಬಂಜಾರ ಸಮುದಾಯದ ಜನ ತಲೆ ತಲಾಂತರದಿಂದ ಕಡುಬಡತನದಲ್ಲಿ ಹುಟ್ಟಿ, ಕಷ್ಟ ಕಾರ್ಪಣ್ಯದಿಂದ ದುಡಿದು ಸ್ವಾಭಿಮಾನದ ಜೀವನ ಸಾಗಿಸುತ್ತಿದ್ದಾರೆ. ಆಧುನಿಕ ಯುಗದಲ್ಲಿ ಸಮಾಜದ ಜನರು ದುಶ್ಚಟ ಹಾಗೂ ಮೂಢನಂಬಿಕೆಗಳನ್ನು ಬಿಡಬೇಕು. ಆಧುನಿಕ ಯುಗಕ್ಕೆ ತಕ್ಕಂತೆ ನಡೆದುಕೊಳ್ಳುವಂತೆ ಸಮಾಜದ ಜನರಲ್ಲಿ ನೂತನ ಅಧ್ಯಕ್ಷರು ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.