<p><strong>ಹಾವೇರಿ:</strong> ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಯ ಕಾಲು ಭಾಗದಷ್ಟೂ ಮಳೆಯಾಗಿಲ್ಲ. ನಾಲ್ಕೈದು ದಿನಗಳಿಂದ ತುಂತುರು ಶುರುವಾಗಿದ್ದು ಕೆಲವೆಡೆ ರೈತರು ಬಿತ್ತನೆ ಶುರು ಮಾಡಿದ್ದಾರೆ. ಆದರೆ, ಇನ್ನೂ ಕೆಲವು ಗ್ರಾಮಗಳ ರೈತರು ಬಿತ್ತನೆಗೆ ಎಲ್ಲ ಸಿದ್ಧತೆ ಮಾಡಿಕೊಂಡು ಮಳೆಯ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.</p>.<p>2019ರ ವಾರ್ಷಿಕ ವಾಡಿಕೆ ಮಳೆ 779.6ಮಿ.ಮೀ ಇದೆ. ಆದರೆ, ಜನವರಿಯಿಂದ ಇಲ್ಲಿಯವರೆಗೆ ಕೇವಲ 101 ಮಿ.ಮೀ ಮಳೆಯಾಗಿದೆ. ಕಳೆದ ವರ್ಷದ ಜೂನ್ ತಿಂಗಳಲ್ಲಿ 94.90 ಮಿ.ಮೀ ಮಳೆಯಾಗಿ, ಜಿಲ್ಲೆಯ ಎಲ್ಲ ಕಡೆಯೂ ಕೃಷಿ ಚಟುವಟಿಕೆ ನಡೆದಿದ್ದವು.ಆದರೆ, ಈ ಬಾರಿ ಜೂನ್ ಮುಗಿಯಲು ಎರಡು ದಿನ ಬಾಕಿ ಇದ್ದರೂ ಮಳೆ ಪ್ರಮಾಣ 47.51 ಮಿ.ಮೀನಲ್ಲೇ ಇದೆ. </p>.<p>ಕೃಷಿ ಇಲಾಖೆಯು ಮುಂಗಾರು ಹಂಗಾಮಿಗೆ ಒಟ್ಟು 3,32,826 ಹೆಕ್ಟೇರ್ಪ್ರದೇಶವನ್ನು ಬಿತ್ತನೆಗೆ ಗುರಿ ಹಾಕಿಕೊಂಡಿದೆ. ಈವರೆಗೆ 18,135 ಹೆಕ್ಟೆರ್ ಪ್ರದೇಶದಲ್ಲಿ ಏಕದಳ, ದ್ವಿದಳ, ಎಣ್ಣೆಕಾಳು ಬಿತ್ತನೆ ಹಾಗೂ ವಾಣಿಜ್ಯ ಬೆಳೆಯನ್ನು ಹಾಕಲಾಗಿದೆ.</p>.<p>ಹೈಬ್ರಿಡ್ ಜೋಳ, ಹೈಬ್ರಿಡ ಗೋವಿನ ಜೋಳ, ಭತ್ತ, ತೊಗರಿ, ಹೆಸರು, ಸೋಯಾಅವರೆ, ಶೇಂಗಾ, ಅಲಸಂಧಿ, ಸೂರ್ಯಕಾಂತಿ, ನವಣೆಯ 33,925 ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆ ಇದೆ. ಆದರೆ, 18,096 ಕ್ವಿಂಟಲ್ ಸರಬರಾಜಾಗಿದ್ದು, 7,537 ಕ್ವಿಂಟಲ್ ಬೀಜಗಳನ್ನು ಮಾತ್ರ ರೈತರಿಗೆ ವಿತರಣೆ ಮಾಡಲಾಗಿದೆ.</p>.<p>‘ರೈತರಿಗೆ ಪೂರೈಸಲು ಅಗತ್ಯವಿರುವಷ್ಟು ಗೊಬ್ಬರವನ್ನು ಈಗಾಗಲೇ ಸಂಗ್ರಹ ಮಾಡಿಟ್ಟುಕೊಳ್ಳಲಾಗಿದೆ.ಒಟ್ಟು 46,335 ಟನ್ ಗೊಬ್ಬರ ಸಂಗ್ರಹಣೆ ಇದ್ದು, ಈವರೆಗೆ 6,813 ಟನ್ ವಿತರಣೆ ಮಾಡಲಾಗಿದೆ’ ಎಂದು ಕೃಷಿ ಇಲಾಖೆಯ ಕೊಪ್ಪದ ತಿಳಿಸಿದರು.</p>.<p>‘ಬೇಸಿಗೆಯಲ್ಲಿ ಜನ–ಜಾನುವರುಗಳಿಗೆ ಕುಡಿಯುವುದಕ್ಕೂ ನೀರಿರಲಿಲ್ಲ. ಈಗ ಮಳೆಗಾಲ ಆರಂಭವಾದರೂ ಬವಣೆ ತಪ್ಪಿಲ್ಲ. ಮುಂಗಾರು ಹಂಗಾಮಿಗೆ ಮಳೆ ಕೈಕೊಟ್ಟಿದ್ದರಿಂದ, ಜನ ಮತ್ತೆ ಕಂಗಾಲಾಗಿದ್ದಾರೆ. ಈ ಹೊತ್ತಿಗಾಗಲೇ ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿರಬೇಕಿತ್ತು’ ಎಂದು ರೈತ ಮಲ್ಲಿಕಾರ್ಜುನ ಹೇಳಿದರು.</p>.<p>*<br />ಹಾನಗಲ್, ಶಿಗ್ಗಾವಿ ಭಾಗದಲ್ಲಿ ಅಲ್ಪ ಪ್ರಮಾಣಲ್ಲಿ ಮಳೆಯಾಗಿದ್ದು ಬಿತ್ತನೆ ಆರಂಭಿಸಿದ್ದಾರೆ. ಇಲಾಖೆ ಎಲ್ಲ ರೀತಿಯಿಂದ ಕೃಷಿ ಚಟುವಟಿಕೆಗೆ ಸನ್ನದ್ಧವಾಗಿದೆ.<br /><em><strong>–ಬಿ.ಮಂಜುನಾಥ, ಕೃಷಿ ಇಲಾಖೆ ಜಂಟಿ ನಿರ್ದೇಶಕರು</strong></em></p>.<p>*<br />ತಡವಾಗಿ ಮಳೆ ಸುರಿಯುತ್ತಿರುವುದರಿಂದ ರೈತರು ಈಗ ಬೀಜ ಬಿತ್ತನೆ ಮಾಡುತ್ತಿದ್ದಾರೆ. ಬಿತ್ತನೆ ಬಳಿಕ ಮಳೆ ಕೊರತೆಯಾಗದಂತೆ ಸರ್ಕಾರ ಮೋಡ ಬಿತ್ತನೆ ಕಾರ್ಯ ಆರಂಭಿಸಬೇಕು.<br /><em><strong>–ವೀರಭದ್ರಪ್ಪ ಗುಡಗೇರಿ, ರೈತ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಯ ಕಾಲು ಭಾಗದಷ್ಟೂ ಮಳೆಯಾಗಿಲ್ಲ. ನಾಲ್ಕೈದು ದಿನಗಳಿಂದ ತುಂತುರು ಶುರುವಾಗಿದ್ದು ಕೆಲವೆಡೆ ರೈತರು ಬಿತ್ತನೆ ಶುರು ಮಾಡಿದ್ದಾರೆ. ಆದರೆ, ಇನ್ನೂ ಕೆಲವು ಗ್ರಾಮಗಳ ರೈತರು ಬಿತ್ತನೆಗೆ ಎಲ್ಲ ಸಿದ್ಧತೆ ಮಾಡಿಕೊಂಡು ಮಳೆಯ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.</p>.<p>2019ರ ವಾರ್ಷಿಕ ವಾಡಿಕೆ ಮಳೆ 779.6ಮಿ.ಮೀ ಇದೆ. ಆದರೆ, ಜನವರಿಯಿಂದ ಇಲ್ಲಿಯವರೆಗೆ ಕೇವಲ 101 ಮಿ.ಮೀ ಮಳೆಯಾಗಿದೆ. ಕಳೆದ ವರ್ಷದ ಜೂನ್ ತಿಂಗಳಲ್ಲಿ 94.90 ಮಿ.ಮೀ ಮಳೆಯಾಗಿ, ಜಿಲ್ಲೆಯ ಎಲ್ಲ ಕಡೆಯೂ ಕೃಷಿ ಚಟುವಟಿಕೆ ನಡೆದಿದ್ದವು.ಆದರೆ, ಈ ಬಾರಿ ಜೂನ್ ಮುಗಿಯಲು ಎರಡು ದಿನ ಬಾಕಿ ಇದ್ದರೂ ಮಳೆ ಪ್ರಮಾಣ 47.51 ಮಿ.ಮೀನಲ್ಲೇ ಇದೆ. </p>.<p>ಕೃಷಿ ಇಲಾಖೆಯು ಮುಂಗಾರು ಹಂಗಾಮಿಗೆ ಒಟ್ಟು 3,32,826 ಹೆಕ್ಟೇರ್ಪ್ರದೇಶವನ್ನು ಬಿತ್ತನೆಗೆ ಗುರಿ ಹಾಕಿಕೊಂಡಿದೆ. ಈವರೆಗೆ 18,135 ಹೆಕ್ಟೆರ್ ಪ್ರದೇಶದಲ್ಲಿ ಏಕದಳ, ದ್ವಿದಳ, ಎಣ್ಣೆಕಾಳು ಬಿತ್ತನೆ ಹಾಗೂ ವಾಣಿಜ್ಯ ಬೆಳೆಯನ್ನು ಹಾಕಲಾಗಿದೆ.</p>.<p>ಹೈಬ್ರಿಡ್ ಜೋಳ, ಹೈಬ್ರಿಡ ಗೋವಿನ ಜೋಳ, ಭತ್ತ, ತೊಗರಿ, ಹೆಸರು, ಸೋಯಾಅವರೆ, ಶೇಂಗಾ, ಅಲಸಂಧಿ, ಸೂರ್ಯಕಾಂತಿ, ನವಣೆಯ 33,925 ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆ ಇದೆ. ಆದರೆ, 18,096 ಕ್ವಿಂಟಲ್ ಸರಬರಾಜಾಗಿದ್ದು, 7,537 ಕ್ವಿಂಟಲ್ ಬೀಜಗಳನ್ನು ಮಾತ್ರ ರೈತರಿಗೆ ವಿತರಣೆ ಮಾಡಲಾಗಿದೆ.</p>.<p>‘ರೈತರಿಗೆ ಪೂರೈಸಲು ಅಗತ್ಯವಿರುವಷ್ಟು ಗೊಬ್ಬರವನ್ನು ಈಗಾಗಲೇ ಸಂಗ್ರಹ ಮಾಡಿಟ್ಟುಕೊಳ್ಳಲಾಗಿದೆ.ಒಟ್ಟು 46,335 ಟನ್ ಗೊಬ್ಬರ ಸಂಗ್ರಹಣೆ ಇದ್ದು, ಈವರೆಗೆ 6,813 ಟನ್ ವಿತರಣೆ ಮಾಡಲಾಗಿದೆ’ ಎಂದು ಕೃಷಿ ಇಲಾಖೆಯ ಕೊಪ್ಪದ ತಿಳಿಸಿದರು.</p>.<p>‘ಬೇಸಿಗೆಯಲ್ಲಿ ಜನ–ಜಾನುವರುಗಳಿಗೆ ಕುಡಿಯುವುದಕ್ಕೂ ನೀರಿರಲಿಲ್ಲ. ಈಗ ಮಳೆಗಾಲ ಆರಂಭವಾದರೂ ಬವಣೆ ತಪ್ಪಿಲ್ಲ. ಮುಂಗಾರು ಹಂಗಾಮಿಗೆ ಮಳೆ ಕೈಕೊಟ್ಟಿದ್ದರಿಂದ, ಜನ ಮತ್ತೆ ಕಂಗಾಲಾಗಿದ್ದಾರೆ. ಈ ಹೊತ್ತಿಗಾಗಲೇ ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿರಬೇಕಿತ್ತು’ ಎಂದು ರೈತ ಮಲ್ಲಿಕಾರ್ಜುನ ಹೇಳಿದರು.</p>.<p>*<br />ಹಾನಗಲ್, ಶಿಗ್ಗಾವಿ ಭಾಗದಲ್ಲಿ ಅಲ್ಪ ಪ್ರಮಾಣಲ್ಲಿ ಮಳೆಯಾಗಿದ್ದು ಬಿತ್ತನೆ ಆರಂಭಿಸಿದ್ದಾರೆ. ಇಲಾಖೆ ಎಲ್ಲ ರೀತಿಯಿಂದ ಕೃಷಿ ಚಟುವಟಿಕೆಗೆ ಸನ್ನದ್ಧವಾಗಿದೆ.<br /><em><strong>–ಬಿ.ಮಂಜುನಾಥ, ಕೃಷಿ ಇಲಾಖೆ ಜಂಟಿ ನಿರ್ದೇಶಕರು</strong></em></p>.<p>*<br />ತಡವಾಗಿ ಮಳೆ ಸುರಿಯುತ್ತಿರುವುದರಿಂದ ರೈತರು ಈಗ ಬೀಜ ಬಿತ್ತನೆ ಮಾಡುತ್ತಿದ್ದಾರೆ. ಬಿತ್ತನೆ ಬಳಿಕ ಮಳೆ ಕೊರತೆಯಾಗದಂತೆ ಸರ್ಕಾರ ಮೋಡ ಬಿತ್ತನೆ ಕಾರ್ಯ ಆರಂಭಿಸಬೇಕು.<br /><em><strong>–ವೀರಭದ್ರಪ್ಪ ಗುಡಗೇರಿ, ರೈತ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>