<p><strong>ಹಾವೇರಿ:</strong> ತಾಲ್ಲೂಕಿನ ನೆಗಳೂರು ಗ್ರಾಮದಲ್ಲಿ ಈದ್ ಮಿಲಾದ್ ಆಚರಿಸಿದ ಮುಸ್ಲಿಂ ಸಮುದಾಯದ ಮುಖಂಡರು, ಗ್ರಾಮದಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಭಾವೈಕ್ಯ ಮೆರೆದರು.</p>.<p>ಸಾಮೂಹಿಕ ಮೆರವಣಿಗೆಯುಲ್ಲಿ ಹಿಂದೂ ಮುಖಂಡರು, ಮುಸ್ಲಿಮರಿಗೆ ಹಬ್ಬದ ಶುಭಾಶಯ ಕೋರಿದರು. ಮಾರ್ಗಮಧ್ಯೆ ಸರ್ವಧರ್ಮ ಗಣಪತಿ, ಹಿಂದೂ ಮಹಾಗಣಪತಿ ಹಾಗೂ ಓಣಿಯ ಗಣಪತಿ ಮೂರ್ತಿಗಳಿದ್ದ ಪೆಂಡಾಲ್ಗೆ ಭೇಟಿ ನೀಡಿದರು. ಮಂಡಳಿಗಳ ಪದಾಧಿಕಾರಿಗಳು ಆತ್ಮಿಯವಾಗಿ ಸ್ವಾಗತಿಸಿದರು.</p>.<p>‘ನೆಗಳೂರಿನಲ್ಲಿ ಹಿಂದೂ–ಮುಸ್ಲಿಮರು, ಅಣ್ಣ–ತಮ್ಮಂದಿರಂತೆ ಬಾಳುತ್ತಿದ್ದೇವೆ. ಪ್ರವಾದಿ ಮುಹಮದ್ ಜನ್ಮದಿನವನ್ನು ಗಣೇಶ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಆಚರಿಸಿದ್ದೇವೆ’ ಎಂದು ಅಂಜುಮನ್ ಸಮಿತಿಯ ಉಪಾಧ್ಯಕ್ಷ ಹುಚ್ಚುಸಾಬ್ ನದಾಫ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಅಜುಂಮನ್ ಕಮಿಟಿ ಅಧ್ಯಕ್ಷ ಸುಲೇಮಾನ್ ಸುಂಕದ, ಗೌಸಿಯಾ ಕಮಿಟಿ ಅಧ್ಯಕ್ಷ ನಿಸ್ಸಾರ್ಅಹ್ಮದ್ ಮುಲ್ಲಾ, ಮುಖಂಡರಾದ ಸಂಜಯಗಾಂಧಿ ಸಂಜೀವಣ್ಣನವರ, ಮಾಸು ಸುರಣಗಿ, ರಫೀಕ್ ಕುದರಿ, ಹುಸೇನಸಾಬ್ ತೆಲಗಿ, ರಮೇಶ ಹಳ್ಳಾಕಾರ, ರಾಮನಗೌಡ ರೊಡ್ಡಗೌಡರ, ದಾನಪ್ಪ ಸುಕುಳಿ ಇದ್ದರು.</p>.<p>ನರೇಗಲ್ನಲ್ಲಿ ಮಾಲಾರ್ಪಣೆ: ಜಿಲ್ಲೆಯ ನರೇಗಲ್ ಗ್ರಾಮದಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಮುಸ್ಲಿಂ ಮುಖಂಡರು, ಮಹಾ ಮಂಡಳ ಸದಸ್ಯರ ಮೂಲಕ ಗಣಪತಿ ಮೂರ್ತಿಗೆ ಮಾಲಾರ್ಪಣೆ ಮಾಡಿಸಿ ಸೌಹಾರ್ದ ಸಂದೇಶ ಸಾರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ತಾಲ್ಲೂಕಿನ ನೆಗಳೂರು ಗ್ರಾಮದಲ್ಲಿ ಈದ್ ಮಿಲಾದ್ ಆಚರಿಸಿದ ಮುಸ್ಲಿಂ ಸಮುದಾಯದ ಮುಖಂಡರು, ಗ್ರಾಮದಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಭಾವೈಕ್ಯ ಮೆರೆದರು.</p>.<p>ಸಾಮೂಹಿಕ ಮೆರವಣಿಗೆಯುಲ್ಲಿ ಹಿಂದೂ ಮುಖಂಡರು, ಮುಸ್ಲಿಮರಿಗೆ ಹಬ್ಬದ ಶುಭಾಶಯ ಕೋರಿದರು. ಮಾರ್ಗಮಧ್ಯೆ ಸರ್ವಧರ್ಮ ಗಣಪತಿ, ಹಿಂದೂ ಮಹಾಗಣಪತಿ ಹಾಗೂ ಓಣಿಯ ಗಣಪತಿ ಮೂರ್ತಿಗಳಿದ್ದ ಪೆಂಡಾಲ್ಗೆ ಭೇಟಿ ನೀಡಿದರು. ಮಂಡಳಿಗಳ ಪದಾಧಿಕಾರಿಗಳು ಆತ್ಮಿಯವಾಗಿ ಸ್ವಾಗತಿಸಿದರು.</p>.<p>‘ನೆಗಳೂರಿನಲ್ಲಿ ಹಿಂದೂ–ಮುಸ್ಲಿಮರು, ಅಣ್ಣ–ತಮ್ಮಂದಿರಂತೆ ಬಾಳುತ್ತಿದ್ದೇವೆ. ಪ್ರವಾದಿ ಮುಹಮದ್ ಜನ್ಮದಿನವನ್ನು ಗಣೇಶ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಆಚರಿಸಿದ್ದೇವೆ’ ಎಂದು ಅಂಜುಮನ್ ಸಮಿತಿಯ ಉಪಾಧ್ಯಕ್ಷ ಹುಚ್ಚುಸಾಬ್ ನದಾಫ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಅಜುಂಮನ್ ಕಮಿಟಿ ಅಧ್ಯಕ್ಷ ಸುಲೇಮಾನ್ ಸುಂಕದ, ಗೌಸಿಯಾ ಕಮಿಟಿ ಅಧ್ಯಕ್ಷ ನಿಸ್ಸಾರ್ಅಹ್ಮದ್ ಮುಲ್ಲಾ, ಮುಖಂಡರಾದ ಸಂಜಯಗಾಂಧಿ ಸಂಜೀವಣ್ಣನವರ, ಮಾಸು ಸುರಣಗಿ, ರಫೀಕ್ ಕುದರಿ, ಹುಸೇನಸಾಬ್ ತೆಲಗಿ, ರಮೇಶ ಹಳ್ಳಾಕಾರ, ರಾಮನಗೌಡ ರೊಡ್ಡಗೌಡರ, ದಾನಪ್ಪ ಸುಕುಳಿ ಇದ್ದರು.</p>.<p>ನರೇಗಲ್ನಲ್ಲಿ ಮಾಲಾರ್ಪಣೆ: ಜಿಲ್ಲೆಯ ನರೇಗಲ್ ಗ್ರಾಮದಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಮುಸ್ಲಿಂ ಮುಖಂಡರು, ಮಹಾ ಮಂಡಳ ಸದಸ್ಯರ ಮೂಲಕ ಗಣಪತಿ ಮೂರ್ತಿಗೆ ಮಾಲಾರ್ಪಣೆ ಮಾಡಿಸಿ ಸೌಹಾರ್ದ ಸಂದೇಶ ಸಾರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>