<p><strong>ಹಾನಗಲ್:</strong> ಬಡತವನ್ನೂ ಮೆಟ್ಟಿ, ಟೀಕೆ ಟಿಪ್ಪಣೆಗಳನ್ನು ದೂರ ಸರಿಸಿ ಆಕಾಶದೆತ್ತರಕ್ಕೆ ಬೆಳೆದ ಗಂಗೂಬಾಯಿ ಹಾನಗಲ್ ಈ ನೆಲದ ಸಂಗೀತದ ನಕ್ಷತ್ರ ಎಂದು ಸಾಹಿತಿ ಮಲ್ಲಿಕಾರ್ಜುನ ಸಿದ್ದಣ್ಣವರ ಹೇಳಿದರು.</p>.<p>ಇಲ್ಲಿನ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕ ಸಂಯುಕ್ತವಾಗಿ ಶುಕ್ರವಾರ ಆಯೋಜಿಸಿದ ಪದ್ಮವಿಭೂಷಣ ಗಂಗೂಬಾಯಿ ಹಾನಗಲ್ಲ ಅವರ ಕುರಿತ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.</p>.<p>ಸಂಗೀತದ ವೈಭವ ಕಟ್ಟಿದ ಸಂಗೀತ ಸಾಮ್ರಾಜ್ಞಿ ಗಂಗೂಬಾಯಿ ಹಾನಗಲ್ಲ. 14 ರಾಷ್ಟ್ರಗಳಲ್ಲಿ ಸ್ವರ ಸಂಗೀತದ ಮಾಧುರ್ಯ ಬಿತ್ತಿ ಬೆಳೆದು, ಜಗದಗಲ ಉತ್ಕೃಷ್ಟ ಗಾನ ಹಂಚಿದ ಗಾನ ಗಂಧರ್ವ ಎಂದು ಹೇಳಿದರು.</p>.<p>ಗಂಗೂಬಾಯಿ ಅವರ ನೆನಪಿಗಾಗಿ ಹಾನಗಲ್ನ ಅವರ ಮನೆ ಸ್ಮಾರಕವಾಗಬೇಕು. ಇಲ್ಲಿ ಪ್ರತಿವರ್ಷ ಅವರ ಹೆಸರಿನಲ್ಲಿ ಸಂಗೀತ ಕಛೇರಿ ನಡೆಯಬೇಕು. ಅವರ ಪ್ರತಿಮೆ ಅನಾವರಣಗೊಳ್ಳಬೇಕು. ನಾಳಿನ ಪೀಳಿಗೆಗೆ ಹಾನಗಲ್ನ ಗಂಗೂಬಾಯಿ ಸಂಗೀತದ ಮೇರು ವ್ಯಕ್ತಿತ್ವವಾಗಿ ಪರಿಚಯವಾಗಬೇಕು ಎಂದರು. </p>.<p>ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಾವೇರಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪ್ರೊ.ಎಸ್.ಟಿ.ಬಾಗಲಕೋಟೆ ಮಾತನಾಡಿ, ಬದುಕನ್ನೇ ಸಂಗೀತಮಯ ಮಾಡಿಕೊಂಡು, ಸರಳತೆಯನ್ನು ಮೈಗೂಡಿಸಿಕೊಂಡು, ಜಗಕೆ ಜೋಗುಳ ಹಾಡಿದ ತಾಯಿ ಗಂಗೂಬಾಯಿ ಹಾನಗಲ್ಲ ಈ ನೆಲದ ಹೆಮ್ಮೆ ಎಂದರು.</p>.<p>ಪ್ರಾಚಾರ್ಯ ಎನ್.ಸದಾಶಿವಪ್ಪ ಮಾತನಾಡಿ, ಮಧುರ ಮಾತು, ಮನಸ್ಸಿನ, ಸಂಗೀತ ಕ್ಷೇತ್ರದ ದೃವತಾರೆ ಗಂಗೂಬಾಯಿ ಹಾನಗಲ್ಲ. ನಮ್ಮ ಹಾನಗಲ್ಲ ನೆಲದವರು ಎಂಬ ಹೆಮ್ಮೆ ಅಭಿಮಾನಪಡುವಂತಹದ್ದು ಎಂದರು.</p>.<p>ವೇದಿಕೆಯಲ್ಲಿ ಸಾಹಿತಿಗಳಾದ ಮಾರುತಿ ಶಿಡ್ಲಾಪೂರ, ಉದಯ ನಾಸಿಕ್, ಕಸಾಪ ನಗರ ಘಟಕದ ಅಧ್ಯಕ್ಷ ವಿಶ್ವನಾಥ ಬೋಂದಾಡೆ, ಐಕ್ಯೂಎಸಿ ಸಂಚಾಲಕ ಟಿ.ಟಿ.ಹರೀಶ, ಪ್ರಾಧ್ಯಾಪಕ ಪ್ರಕಾಶ ಹುಲ್ಲೂರ ಇದ್ದರು.</p>.<p>ಇದೇ ಸಂದರ್ಭದಲ್ಲಿ ಸಾಹಿತಿ ಮಲ್ಲಿಕಾರ್ಜುನ ಸಿದ್ದಣ್ಣವರ ಅವರ ‘ಜಗಕೆ ಜೋಗುಳ ಹಾಡಿದ ತಾಯಿ’ ಕೃತಿಯ ಎರಡನೇ ಮುದ್ರಣದ ಬಿಡುಗಡೆ ನಡೆಯಿತು. ಗಂಗೂಬಾಯಿ ಹಾನಗಲ್ಲ ಅವರ ಕುರಿತು ಕಿರುನಾಟಕವನ್ನು ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಪ್ರದರ್ಶಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾನಗಲ್:</strong> ಬಡತವನ್ನೂ ಮೆಟ್ಟಿ, ಟೀಕೆ ಟಿಪ್ಪಣೆಗಳನ್ನು ದೂರ ಸರಿಸಿ ಆಕಾಶದೆತ್ತರಕ್ಕೆ ಬೆಳೆದ ಗಂಗೂಬಾಯಿ ಹಾನಗಲ್ ಈ ನೆಲದ ಸಂಗೀತದ ನಕ್ಷತ್ರ ಎಂದು ಸಾಹಿತಿ ಮಲ್ಲಿಕಾರ್ಜುನ ಸಿದ್ದಣ್ಣವರ ಹೇಳಿದರು.</p>.<p>ಇಲ್ಲಿನ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕ ಸಂಯುಕ್ತವಾಗಿ ಶುಕ್ರವಾರ ಆಯೋಜಿಸಿದ ಪದ್ಮವಿಭೂಷಣ ಗಂಗೂಬಾಯಿ ಹಾನಗಲ್ಲ ಅವರ ಕುರಿತ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.</p>.<p>ಸಂಗೀತದ ವೈಭವ ಕಟ್ಟಿದ ಸಂಗೀತ ಸಾಮ್ರಾಜ್ಞಿ ಗಂಗೂಬಾಯಿ ಹಾನಗಲ್ಲ. 14 ರಾಷ್ಟ್ರಗಳಲ್ಲಿ ಸ್ವರ ಸಂಗೀತದ ಮಾಧುರ್ಯ ಬಿತ್ತಿ ಬೆಳೆದು, ಜಗದಗಲ ಉತ್ಕೃಷ್ಟ ಗಾನ ಹಂಚಿದ ಗಾನ ಗಂಧರ್ವ ಎಂದು ಹೇಳಿದರು.</p>.<p>ಗಂಗೂಬಾಯಿ ಅವರ ನೆನಪಿಗಾಗಿ ಹಾನಗಲ್ನ ಅವರ ಮನೆ ಸ್ಮಾರಕವಾಗಬೇಕು. ಇಲ್ಲಿ ಪ್ರತಿವರ್ಷ ಅವರ ಹೆಸರಿನಲ್ಲಿ ಸಂಗೀತ ಕಛೇರಿ ನಡೆಯಬೇಕು. ಅವರ ಪ್ರತಿಮೆ ಅನಾವರಣಗೊಳ್ಳಬೇಕು. ನಾಳಿನ ಪೀಳಿಗೆಗೆ ಹಾನಗಲ್ನ ಗಂಗೂಬಾಯಿ ಸಂಗೀತದ ಮೇರು ವ್ಯಕ್ತಿತ್ವವಾಗಿ ಪರಿಚಯವಾಗಬೇಕು ಎಂದರು. </p>.<p>ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಾವೇರಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪ್ರೊ.ಎಸ್.ಟಿ.ಬಾಗಲಕೋಟೆ ಮಾತನಾಡಿ, ಬದುಕನ್ನೇ ಸಂಗೀತಮಯ ಮಾಡಿಕೊಂಡು, ಸರಳತೆಯನ್ನು ಮೈಗೂಡಿಸಿಕೊಂಡು, ಜಗಕೆ ಜೋಗುಳ ಹಾಡಿದ ತಾಯಿ ಗಂಗೂಬಾಯಿ ಹಾನಗಲ್ಲ ಈ ನೆಲದ ಹೆಮ್ಮೆ ಎಂದರು.</p>.<p>ಪ್ರಾಚಾರ್ಯ ಎನ್.ಸದಾಶಿವಪ್ಪ ಮಾತನಾಡಿ, ಮಧುರ ಮಾತು, ಮನಸ್ಸಿನ, ಸಂಗೀತ ಕ್ಷೇತ್ರದ ದೃವತಾರೆ ಗಂಗೂಬಾಯಿ ಹಾನಗಲ್ಲ. ನಮ್ಮ ಹಾನಗಲ್ಲ ನೆಲದವರು ಎಂಬ ಹೆಮ್ಮೆ ಅಭಿಮಾನಪಡುವಂತಹದ್ದು ಎಂದರು.</p>.<p>ವೇದಿಕೆಯಲ್ಲಿ ಸಾಹಿತಿಗಳಾದ ಮಾರುತಿ ಶಿಡ್ಲಾಪೂರ, ಉದಯ ನಾಸಿಕ್, ಕಸಾಪ ನಗರ ಘಟಕದ ಅಧ್ಯಕ್ಷ ವಿಶ್ವನಾಥ ಬೋಂದಾಡೆ, ಐಕ್ಯೂಎಸಿ ಸಂಚಾಲಕ ಟಿ.ಟಿ.ಹರೀಶ, ಪ್ರಾಧ್ಯಾಪಕ ಪ್ರಕಾಶ ಹುಲ್ಲೂರ ಇದ್ದರು.</p>.<p>ಇದೇ ಸಂದರ್ಭದಲ್ಲಿ ಸಾಹಿತಿ ಮಲ್ಲಿಕಾರ್ಜುನ ಸಿದ್ದಣ್ಣವರ ಅವರ ‘ಜಗಕೆ ಜೋಗುಳ ಹಾಡಿದ ತಾಯಿ’ ಕೃತಿಯ ಎರಡನೇ ಮುದ್ರಣದ ಬಿಡುಗಡೆ ನಡೆಯಿತು. ಗಂಗೂಬಾಯಿ ಹಾನಗಲ್ಲ ಅವರ ಕುರಿತು ಕಿರುನಾಟಕವನ್ನು ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಪ್ರದರ್ಶಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>