<p><strong>ಹಾನಗಲ್:</strong> ಇಲ್ಲಿಯ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ನಡೆದ ಲೋಕಾಯುಕ್ತ ಪೊಲೀಸರ ಜನಸಂಪರ್ಕ ಸಭೆಯಲ್ಲಿ 16 ದೂರುಗಳು ಸಲ್ಲಿಕೆಯಾದವು. </p>.<p>‘ಶಿವಮೊಗ್ಗ – ತಡಸ ರಸ್ತೆಯ ಕರಗುದರಿ ಕ್ರಾಸ್ನಲ್ಲಿ ಸ್ಥಾಪಿಸಲಾದ ಟೋಲ್ಗೇಟ್ ಅಕ್ರಮವಾಗಿದ್ದು, ಅದನ್ನು ತೆರವು ಮಾಡಬೇಕು’ ಎಂದು ಜನರು ಅರ್ಜಿ ಸಲ್ಲಿಸಿದರು.</p>.<p>‘ಹಳೆಯ ರಸ್ತೆಗೆ ಹೊಸ ಕರವೆಂದು ಟೋಲ್ಗೇಟ್ ಸ್ಥಾಪಿಸಲಾಗಿದೆ. ಇದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು. ಅದನ್ನು ಲೆಕ್ಕಿಸದೇ ಟೋಲ್ ಸಂಗ್ರಹಣೆ ನಡೆಸಲಾಗುತ್ತಿದೆ. ಇದು ನಿಯಮಬಾಹಿರ’ ಎಂದು ಜನರು ದೂರಿದರು.</p>.<p>ಮದ್ಯ ಅಕ್ರಮ ಮಾರಾಟ, ವಿದ್ಯಾರ್ಥಿ ನಿಲಯಗಳ ನಿರ್ವಹಣೆಯಲ್ಲಿ ಲೋಪ, ತಾಲ್ಲೂಕು ಪಂಚಾಯಿತಿಯ ವಾಣಿಜ್ಯ ಮಳಿಗೆಗಳ ವಿಚಾರಗಳ ಬಗ್ಗೆಯೂ ಜನರು ದೂರು ನೀಡಿದರು.</p>.<p>ಕೆರೆ ಒತ್ತುವರಿ, ಕಂದಾಯ ಭೂ ಅಳತೆ, ರಸ್ತೆ ಸೇರಿದಂತೆ ಹಲವು ವೈಯಕ್ತಿಕ ಸಮಸ್ಯೆಗಳ ಬಗ್ಗೆಯೂ ಜನರು ಅರ್ಜಿ ಸಲ್ಲಿಸಿದರು.</p>.<p>‘ಗ್ರಾಮೀಣ ಭಾಗದಲ್ಲಿ ಮದ್ಯ ಅಕ್ರಮ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಸಣ್ಣಪುಟ್ಟ ಅಂಗಡಿಯಲ್ಲೂ ಮದ್ಯ ಮಾರಲಾಗುತ್ತಿದೆ. ಇದನ್ನು ತಡೆಯಬೇಕಾದ ಅಬಕಾರಿ ಇಲಾಖೆ ಮೌನವಾಗಿದೆ’ ಎಂದು ಜನರು ದೂರಿದರು.</p>.<p>‘ಪಟ್ಟಣದ ತಾಲ್ಲೂಕು ಪಂಚಾಯಿತಿಯ ವಾಣಿಜ್ಯ ಮಳಿಗೆಗಳ ಬಾಡಿಗೆ ಅವಧಿ ಮುಗಿದು 10 ವರ್ಷವಾಗಿದೆ. ಮಳಿಗೆಗಳ ಮರು ಹರಾಜು ಆಗಿಲ್ಲ. ಈಗಿರುವ ಬಾಡಿಗೆದಾರರು ಮತ್ತೊಬ್ಬರಿಗೆ ಹೆಚ್ಚಿನ ದರಕ್ಕೆ ಮರು ಬಾಡಿಗೆ ನೀಡಿ ಹಣ ಪಡೆಯುತ್ತಿದ್ದಾರೆ. ಇದು ಅಕ್ರಮ’ ಎಂದು ಜನರು ದೂರಿದರು.</p>.<p>ಲೋಕಾಯುಕ್ತ ಡಿವೈಎಸ್ಪಿ ಮಧುಸೂದನ, ಇನ್ಸ್ಪೆಕ್ಟರ್ ದಾದಾವಲಿ, ಮಂಜುನಾಥ ಪಂಡಿತ, ಬಸವರಾಜ ಹಳವಣ್ಣನವರ, ತಹಶೀಲ್ದಾರ್ ರೇಣುಕಾ ಎಸ್. ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾನಗಲ್:</strong> ಇಲ್ಲಿಯ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ನಡೆದ ಲೋಕಾಯುಕ್ತ ಪೊಲೀಸರ ಜನಸಂಪರ್ಕ ಸಭೆಯಲ್ಲಿ 16 ದೂರುಗಳು ಸಲ್ಲಿಕೆಯಾದವು. </p>.<p>‘ಶಿವಮೊಗ್ಗ – ತಡಸ ರಸ್ತೆಯ ಕರಗುದರಿ ಕ್ರಾಸ್ನಲ್ಲಿ ಸ್ಥಾಪಿಸಲಾದ ಟೋಲ್ಗೇಟ್ ಅಕ್ರಮವಾಗಿದ್ದು, ಅದನ್ನು ತೆರವು ಮಾಡಬೇಕು’ ಎಂದು ಜನರು ಅರ್ಜಿ ಸಲ್ಲಿಸಿದರು.</p>.<p>‘ಹಳೆಯ ರಸ್ತೆಗೆ ಹೊಸ ಕರವೆಂದು ಟೋಲ್ಗೇಟ್ ಸ್ಥಾಪಿಸಲಾಗಿದೆ. ಇದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು. ಅದನ್ನು ಲೆಕ್ಕಿಸದೇ ಟೋಲ್ ಸಂಗ್ರಹಣೆ ನಡೆಸಲಾಗುತ್ತಿದೆ. ಇದು ನಿಯಮಬಾಹಿರ’ ಎಂದು ಜನರು ದೂರಿದರು.</p>.<p>ಮದ್ಯ ಅಕ್ರಮ ಮಾರಾಟ, ವಿದ್ಯಾರ್ಥಿ ನಿಲಯಗಳ ನಿರ್ವಹಣೆಯಲ್ಲಿ ಲೋಪ, ತಾಲ್ಲೂಕು ಪಂಚಾಯಿತಿಯ ವಾಣಿಜ್ಯ ಮಳಿಗೆಗಳ ವಿಚಾರಗಳ ಬಗ್ಗೆಯೂ ಜನರು ದೂರು ನೀಡಿದರು.</p>.<p>ಕೆರೆ ಒತ್ತುವರಿ, ಕಂದಾಯ ಭೂ ಅಳತೆ, ರಸ್ತೆ ಸೇರಿದಂತೆ ಹಲವು ವೈಯಕ್ತಿಕ ಸಮಸ್ಯೆಗಳ ಬಗ್ಗೆಯೂ ಜನರು ಅರ್ಜಿ ಸಲ್ಲಿಸಿದರು.</p>.<p>‘ಗ್ರಾಮೀಣ ಭಾಗದಲ್ಲಿ ಮದ್ಯ ಅಕ್ರಮ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಸಣ್ಣಪುಟ್ಟ ಅಂಗಡಿಯಲ್ಲೂ ಮದ್ಯ ಮಾರಲಾಗುತ್ತಿದೆ. ಇದನ್ನು ತಡೆಯಬೇಕಾದ ಅಬಕಾರಿ ಇಲಾಖೆ ಮೌನವಾಗಿದೆ’ ಎಂದು ಜನರು ದೂರಿದರು.</p>.<p>‘ಪಟ್ಟಣದ ತಾಲ್ಲೂಕು ಪಂಚಾಯಿತಿಯ ವಾಣಿಜ್ಯ ಮಳಿಗೆಗಳ ಬಾಡಿಗೆ ಅವಧಿ ಮುಗಿದು 10 ವರ್ಷವಾಗಿದೆ. ಮಳಿಗೆಗಳ ಮರು ಹರಾಜು ಆಗಿಲ್ಲ. ಈಗಿರುವ ಬಾಡಿಗೆದಾರರು ಮತ್ತೊಬ್ಬರಿಗೆ ಹೆಚ್ಚಿನ ದರಕ್ಕೆ ಮರು ಬಾಡಿಗೆ ನೀಡಿ ಹಣ ಪಡೆಯುತ್ತಿದ್ದಾರೆ. ಇದು ಅಕ್ರಮ’ ಎಂದು ಜನರು ದೂರಿದರು.</p>.<p>ಲೋಕಾಯುಕ್ತ ಡಿವೈಎಸ್ಪಿ ಮಧುಸೂದನ, ಇನ್ಸ್ಪೆಕ್ಟರ್ ದಾದಾವಲಿ, ಮಂಜುನಾಥ ಪಂಡಿತ, ಬಸವರಾಜ ಹಳವಣ್ಣನವರ, ತಹಶೀಲ್ದಾರ್ ರೇಣುಕಾ ಎಸ್. ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>