<p><strong>ಹಾವೇರಿ:</strong> ಇಲ್ಲಿಯ ಹಾವೇರಿ ಹಾಲು ಒಕ್ಕೂಟದ (ಹಾವೆಮುಲ್) ವಾಹನ ಚಾಲಕರು ದಿಢೀರ್ ಪ್ರತಿಭಟನೆ ನಡೆಸುತ್ತಿದ್ದು, ಹಾಲಿನ ಕ್ಯಾನ್ ಇಳಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.</p><p>ಜಿಲ್ಲೆಯ ಹಲವು ಹಾಲು ಉತ್ಪಾದಕರ ಸಂಘದಿಂದ ಹಾಲು ಸಂಗ್ರಹಿಸಿ ಸಾಗಣೆ ಮಾಡುವ ಚಾಲಕರ ಬೇಡಿಕೆ ಈಡೇರಿಸುವಲ್ಲಿ ಒಕ್ಕೂಟ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.</p><p>ಸೋಮವಾರ ಬೆಳಿಗ್ಗೆಯೇ ಕ್ಯಾನ್ ಹಾಗೂ ವಾಹನಗಳ ಸಮೇತ ಒಕ್ಕೂಟದ ಆಡಳಿತ ಕಚೇರಿಗೆ ಬಂದ ಚಾಲಕರು, ಕಚೇರಿ ಎದುರು ಪ್ರತಿಭಟನೆ ನಡೆಸಿದರು.</p><p>'ಮೂರು ತಿಂಗಳ ಹಿಂದೆಯೇ ಟೆಂಡರ್ ಮುಗಿದಿದೆ. ಅಧಿಕಾರಿಗಳು ಹೇಳಿದ್ದಕ್ಕೆ ಮೂರು ತಿಂಗಳಿನಿಂದ ಟೆಂಡರ್ ಇಲ್ಲದೇ ಹಾಲಿನ ಕ್ಯಾನ್ ತರುತ್ತಿದ್ದೇವೆ. ಹೆಚ್ಚುವರಿ ಕಿ.ಮೀ. ಓಡಿಸಿದರೂ ಹಣ ನೀಡುತ್ತಿಲ್ಲ' ಎಂದು ಚಾಲಕರು ಆರೋಪಿಸಿದರು.</p><p>'ಒಕ್ಕೂಟದ 54 ಮಾರ್ಗಗಳಲ್ಲಿ ವಾಹನಗಳು ಓಡಾಡುತ್ತಿವೆ. ಇದಕ್ಕಾಗಿ ಮರು ಟೆಂಡರ್ ಕರೆಯಲಾಗಿದೆ. ಈ ಪೈಕಿ ಮೂವರಿಗೆ ಮಾತ್ರ ಟೆಂಡರ್ ಆದೇಶ ನೀಡಲಾಗಿದೆ. ಒಂದೇ ಅರ್ಜಿ ಇರುವ ಕಾರಣಕ್ಕೆ ಉಳಿದ ಮಾರ್ಗಗಳ ಟೆಂಡರ್ ಅರ್ಧಕ್ಕೆ ನಿಲ್ಲಿಸಲಾಗಿದೆ. ಇದರಿಂದ ಚಾಲಕರಿಗೆ ಅನ್ಯಾಯವಾಗಿದೆ. ಕೂಡಲೇ ಎಲ್ಲರಿಗೂ ಟೆಂಡರ್ ನೀಡಬೇಕು' ಎಂದು ಚಾಲಕರು ಆಗ್ರಹಿಸಿದರು.</p><p>ಚಾಲಕರ ಜೊತೆ ಮಾತನಾಡಿದ ಎಂ.ಡಿ. ಪ್ರದೀಪ್ ಎಸ್.ಎಂ. 'ಟೆಂಡರ್ ನಿಯಮದಂತೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಮಂಗಳವಾರ ಆಡಳಿತ ಮಂಡಳಿ ಸಭೆಯಿದ್ದು, ಈ ಬಗ್ಗೆ ಚರ್ಚಿಸಲಾಗುವುದು' ಎಂದರು.</p><p>ಇದಕ್ಕೆ ಒಪ್ಪದ ಚಾಲಕರು, ಕಚೇರಿಯಲ್ಲಿಯೇ ಪ್ರತಿಭಟನೆ ಮುಂದುವರಿಸಿದ್ದಾರೆ. 'ಎಲ್ಲ ಕ್ಯಾನ್ ಇಳಿಸಿ ಹೋಗುತ್ತೇವೆ. ನೀವು ಏನಾದರೂ ಮಾಡಿಕೊಳ್ಳಿ' ಎಂದು ಪಟ್ಟು ಹಿಡಿದಿದ್ದಾರೆ. ಎಂ.ಡಿ. ಪ್ರದೀಪ್ ಅವರು ಚಾಲಕರ ಮನವೊಲಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ಇಲ್ಲಿಯ ಹಾವೇರಿ ಹಾಲು ಒಕ್ಕೂಟದ (ಹಾವೆಮುಲ್) ವಾಹನ ಚಾಲಕರು ದಿಢೀರ್ ಪ್ರತಿಭಟನೆ ನಡೆಸುತ್ತಿದ್ದು, ಹಾಲಿನ ಕ್ಯಾನ್ ಇಳಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.</p><p>ಜಿಲ್ಲೆಯ ಹಲವು ಹಾಲು ಉತ್ಪಾದಕರ ಸಂಘದಿಂದ ಹಾಲು ಸಂಗ್ರಹಿಸಿ ಸಾಗಣೆ ಮಾಡುವ ಚಾಲಕರ ಬೇಡಿಕೆ ಈಡೇರಿಸುವಲ್ಲಿ ಒಕ್ಕೂಟ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.</p><p>ಸೋಮವಾರ ಬೆಳಿಗ್ಗೆಯೇ ಕ್ಯಾನ್ ಹಾಗೂ ವಾಹನಗಳ ಸಮೇತ ಒಕ್ಕೂಟದ ಆಡಳಿತ ಕಚೇರಿಗೆ ಬಂದ ಚಾಲಕರು, ಕಚೇರಿ ಎದುರು ಪ್ರತಿಭಟನೆ ನಡೆಸಿದರು.</p><p>'ಮೂರು ತಿಂಗಳ ಹಿಂದೆಯೇ ಟೆಂಡರ್ ಮುಗಿದಿದೆ. ಅಧಿಕಾರಿಗಳು ಹೇಳಿದ್ದಕ್ಕೆ ಮೂರು ತಿಂಗಳಿನಿಂದ ಟೆಂಡರ್ ಇಲ್ಲದೇ ಹಾಲಿನ ಕ್ಯಾನ್ ತರುತ್ತಿದ್ದೇವೆ. ಹೆಚ್ಚುವರಿ ಕಿ.ಮೀ. ಓಡಿಸಿದರೂ ಹಣ ನೀಡುತ್ತಿಲ್ಲ' ಎಂದು ಚಾಲಕರು ಆರೋಪಿಸಿದರು.</p><p>'ಒಕ್ಕೂಟದ 54 ಮಾರ್ಗಗಳಲ್ಲಿ ವಾಹನಗಳು ಓಡಾಡುತ್ತಿವೆ. ಇದಕ್ಕಾಗಿ ಮರು ಟೆಂಡರ್ ಕರೆಯಲಾಗಿದೆ. ಈ ಪೈಕಿ ಮೂವರಿಗೆ ಮಾತ್ರ ಟೆಂಡರ್ ಆದೇಶ ನೀಡಲಾಗಿದೆ. ಒಂದೇ ಅರ್ಜಿ ಇರುವ ಕಾರಣಕ್ಕೆ ಉಳಿದ ಮಾರ್ಗಗಳ ಟೆಂಡರ್ ಅರ್ಧಕ್ಕೆ ನಿಲ್ಲಿಸಲಾಗಿದೆ. ಇದರಿಂದ ಚಾಲಕರಿಗೆ ಅನ್ಯಾಯವಾಗಿದೆ. ಕೂಡಲೇ ಎಲ್ಲರಿಗೂ ಟೆಂಡರ್ ನೀಡಬೇಕು' ಎಂದು ಚಾಲಕರು ಆಗ್ರಹಿಸಿದರು.</p><p>ಚಾಲಕರ ಜೊತೆ ಮಾತನಾಡಿದ ಎಂ.ಡಿ. ಪ್ರದೀಪ್ ಎಸ್.ಎಂ. 'ಟೆಂಡರ್ ನಿಯಮದಂತೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಮಂಗಳವಾರ ಆಡಳಿತ ಮಂಡಳಿ ಸಭೆಯಿದ್ದು, ಈ ಬಗ್ಗೆ ಚರ್ಚಿಸಲಾಗುವುದು' ಎಂದರು.</p><p>ಇದಕ್ಕೆ ಒಪ್ಪದ ಚಾಲಕರು, ಕಚೇರಿಯಲ್ಲಿಯೇ ಪ್ರತಿಭಟನೆ ಮುಂದುವರಿಸಿದ್ದಾರೆ. 'ಎಲ್ಲ ಕ್ಯಾನ್ ಇಳಿಸಿ ಹೋಗುತ್ತೇವೆ. ನೀವು ಏನಾದರೂ ಮಾಡಿಕೊಳ್ಳಿ' ಎಂದು ಪಟ್ಟು ಹಿಡಿದಿದ್ದಾರೆ. ಎಂ.ಡಿ. ಪ್ರದೀಪ್ ಅವರು ಚಾಲಕರ ಮನವೊಲಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>