<p><strong>ಹಾವೇರಿ</strong>: ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ‘ಪ್ರದರ್ಶನ ಕಲೆಯ ಸ್ನಾತಕೋತ್ತರ ಪದವಿ’ (ಮಾಸ್ಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್) ಕೋರ್ಸ್ಗೆ ಪ್ರವೇಶಾತಿ ಪಡೆದು ಮೂರು ತಿಂಗಳು ಕಳೆದರೂ, ತರಗತಿ ಆರಂಭವಾಗದ ಕಾರಣ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ.</p>.<p>ವಿಶ್ವವಿದ್ಯಾಲಯವು 2019–20ನೇ ಸಾಲಿನ ನೂತನ ಕೋರ್ಸ್ ‘ಎಂಪಿಎ (ರಂಗ ಕಲೆ)’ ಪ್ರವೇಶಾತಿಗೆ ಪ್ರಕಟಣೆ ನೀಡಿತ್ತು. ಅದರಂತೆ ಆರು ವಿದ್ಯಾರ್ಥಿಗಳು ಜುಲೈ– ಆಗಸ್ಟ್ ತಿಂಗಳಲ್ಲಿ ₹4,620 ಶುಲ್ಕ ತುಂಬಿ ಪ್ರವೇಶ ಪಡೆದರು. ಸೆಪ್ಟೆಂಬರ್ನಿಂದ ಆರಂಭವಾಗಬೇಕಿದ್ದ ತರಗತಿಗಳು ಇದುವರೆಗೂ ಆರಂಭವಾಗಿಲ್ಲ.ಈ ಬಗ್ಗೆ ಹಲವು ಬಾರಿ ಕುಲಪತಿ ಪ್ರೊ.ಡಿ.ಬಿ.ನಾಯ್ಕ್ ಅವರನ್ನು ಭೇಟಿ ಮಾಡಿ, ಕೋರ್ಸ್ ಆರಂಭಿಸುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂಬುದು ವಿದ್ಯಾರ್ಥಿಗಳ ಅಳಲು.</p>.<p>ಜಾನಪದ ರಂಗಭೂಮಿ, ಭಾರತೀಯ ರಂಗಭೂಮಿ, ಕರ್ನಾಟಕ ರಂಗಭೂಮಿ, ಅಭಿನಯದ ಪರಿಚಯ ಸೇರಿದಂತೆ ರಂಗಕಲೆಯ ಬಗ್ಗೆ ಸಮಗ್ರ ಜ್ಞಾನ ನೀಡುವ ಕೋರ್ಸ್ ಇದಾಗಿದೆ.</p>.<p>‘ಕೋರ್ಸ್ ಆರಂಭಿಸಲು ಕನಿಷ್ಠ 10 ವಿದ್ಯಾರ್ಥಿಗಳು ಬೇಕು. 6 ವಿದ್ಯಾರ್ಥಿಗಳು ಮಾತ್ರ ಪ್ರವೇಶಾತಿ ಪಡೆದಿರುವುದರಿಂದ ವಿಳಂಬವಾಗಿದೆ ಎಂದು ವಿಶ್ವವಿದ್ಯಾಲಯದ ಸಿಬ್ಬಂದಿ ಆರಂಭದಲ್ಲಿ ಸಬೂಬು ಹೇಳಿದರು. ಆದರೆ, ಕೋರ್ಸ್ಗೆ ಸೇರಲು ಸಿದ್ಧವಾಗಿರುವ 7 ವಿದ್ಯಾರ್ಥಿಗಳಿಗೆ ಸಿಬ್ಬಂದಿಯೇ ಪ್ರವೇಶ ನಿರಾಕರಿಸುತ್ತಿದ್ದಾರೆ. ಇದರಿಂದ ಒಟ್ಟು 13 ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ’ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.</p>.<p>‘ಎಂಪಿಎ ಬದಲಾಗಿ ಎಂ.ಎ– ಜನಪದ ಕಲೆ ಕೋರ್ಸ್’ಗೆ ಪ್ರವೇಶ ಪಡೆಯಿರಿ ಅಥವಾ ಮುಂದಿನ ವರ್ಷದವರೆಗೂ ಕಾಯಿರಿ. ಇಲ್ಲದಿದ್ದರೆ ಕಟ್ಟಿರುವ ಶುಲ್ಕ ಹಿಂಪಡೆಯಿರಿ’ ಎಂದು ವಿಶ್ವವಿದ್ಯಾಲಯ ಹೇಳುತ್ತಿರುವುದರಿಂದ ನಮಗೆ ದಿಕ್ಕೇ ತೋಚದಂತಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿದ್ಯಾರ್ಥಿನಿ ನೋವು ತೋಡಿಕೊಂಡಿದ್ದಾರೆ.</p>.<p>‘ಬಿ.ಎ. (ಡ್ರಾಮಾ), ಬಿ.ಕಾಂ, ಬಿ.ಎಸ್ಸಿ ಓದಿರುವ ನಾವು ರಂಗಭೂಮಿಯ ಬಗ್ಗೆ ಆಸಕ್ತಿ ಹೊಂದಿದ್ದೇವೆ. ಹಾಗಾಗಿ, ಇಷ್ಟಪಟ್ಟು ಈ ಕೋರ್ಸ್ ಆಯ್ಕೆ ಮಾಡಿಕೊಂಡಿದ್ದೇವೆ. ಇದಾದರೆ, ಬಿ.ಇಡಿ ಕಾಲೇಜುಗಳಲ್ಲಿ ‘ಡ್ರಾಮಾ ಟೀಚರ್’ ಅಥವಾ ವಿವಿಗಳಲ್ಲಿ ಪ್ರಾಧ್ಯಾಪಕರಾಗಬಹುದು. ರಂಗಕಲೆಯ ಬಗ್ಗೆ ಪಿಎಚ್.ಡಿ ಮಾಡಲು ಅನುಕೂಲ ಆಗಲಿದೆ.ಈಗಾಗಲೇ 3 ತಿಂಗಳು ವಿಳಂಬವಾಗಿರುವುದರಿಂದ ಬೇರೆ ಕಡೆಯೂ ಪ್ರವೇಶಾತಿ ಪಡೆಯಲು ಸಾಧ್ಯವಿಲ್ಲ. ಒಂದು ವರ್ಷ ನಿರುಪಯುಕ್ತವಾದರೆ ನಮ್ಮ ಭವಿಷ್ಯವೇನು’ ಎಂದು ‘ಪ್ರಜಾವಾಣಿ’ಯೊಂದಿಗೆ ಎಂಪಿಎ ವಿದ್ಯಾರ್ಥಿಗಳು ಕಷ್ಟ ತೋಡಿಕೊಂಡರು.</p>.<p><strong>‘ಇನ್ನೂ ಅನುಮತಿ ಸಿಕ್ಕಿಲ್ಲ’</strong><br />‘ಎಂ.ಪಿ.ಎ’ ಕೋರ್ಸ್ ಆರಂಭಿಸಲು ಸರ್ಕಾರದಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಹಾಗಾಗಿ ಎಂಪಿಎ ಕೋರ್ಸ್ ವಿದ್ಯಾರ್ಥಿಗಳು ಜನಪದ ಕಲೆ ಕೋರ್ಸ್ಗೆ ಪ್ರವೇಶಾತಿ ಪಡೆಯಲು ಅವಕಾಶ ಕಲ್ಪಿಸಿದ್ದೇವೆ. ಬೇಕೆಂದರೆ ಪದವಿ ಪ್ರಮಾಣ ಪತ್ರದಲ್ಲಿ ಜನಪದ ಕಲೆಯ ಜತೆಗೆ ಆವರಣದಲ್ಲಿ ‘ಎಂಪಿಎ’ ಎಂದು ಕೊಡುತ್ತೇವೆ.<br /><em><strong>–ಪ್ರೊ.ಚಂದ್ರಶೇಖರ್, ಕುಲಸಚಿವ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ</strong>: ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ‘ಪ್ರದರ್ಶನ ಕಲೆಯ ಸ್ನಾತಕೋತ್ತರ ಪದವಿ’ (ಮಾಸ್ಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್) ಕೋರ್ಸ್ಗೆ ಪ್ರವೇಶಾತಿ ಪಡೆದು ಮೂರು ತಿಂಗಳು ಕಳೆದರೂ, ತರಗತಿ ಆರಂಭವಾಗದ ಕಾರಣ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ.</p>.<p>ವಿಶ್ವವಿದ್ಯಾಲಯವು 2019–20ನೇ ಸಾಲಿನ ನೂತನ ಕೋರ್ಸ್ ‘ಎಂಪಿಎ (ರಂಗ ಕಲೆ)’ ಪ್ರವೇಶಾತಿಗೆ ಪ್ರಕಟಣೆ ನೀಡಿತ್ತು. ಅದರಂತೆ ಆರು ವಿದ್ಯಾರ್ಥಿಗಳು ಜುಲೈ– ಆಗಸ್ಟ್ ತಿಂಗಳಲ್ಲಿ ₹4,620 ಶುಲ್ಕ ತುಂಬಿ ಪ್ರವೇಶ ಪಡೆದರು. ಸೆಪ್ಟೆಂಬರ್ನಿಂದ ಆರಂಭವಾಗಬೇಕಿದ್ದ ತರಗತಿಗಳು ಇದುವರೆಗೂ ಆರಂಭವಾಗಿಲ್ಲ.ಈ ಬಗ್ಗೆ ಹಲವು ಬಾರಿ ಕುಲಪತಿ ಪ್ರೊ.ಡಿ.ಬಿ.ನಾಯ್ಕ್ ಅವರನ್ನು ಭೇಟಿ ಮಾಡಿ, ಕೋರ್ಸ್ ಆರಂಭಿಸುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂಬುದು ವಿದ್ಯಾರ್ಥಿಗಳ ಅಳಲು.</p>.<p>ಜಾನಪದ ರಂಗಭೂಮಿ, ಭಾರತೀಯ ರಂಗಭೂಮಿ, ಕರ್ನಾಟಕ ರಂಗಭೂಮಿ, ಅಭಿನಯದ ಪರಿಚಯ ಸೇರಿದಂತೆ ರಂಗಕಲೆಯ ಬಗ್ಗೆ ಸಮಗ್ರ ಜ್ಞಾನ ನೀಡುವ ಕೋರ್ಸ್ ಇದಾಗಿದೆ.</p>.<p>‘ಕೋರ್ಸ್ ಆರಂಭಿಸಲು ಕನಿಷ್ಠ 10 ವಿದ್ಯಾರ್ಥಿಗಳು ಬೇಕು. 6 ವಿದ್ಯಾರ್ಥಿಗಳು ಮಾತ್ರ ಪ್ರವೇಶಾತಿ ಪಡೆದಿರುವುದರಿಂದ ವಿಳಂಬವಾಗಿದೆ ಎಂದು ವಿಶ್ವವಿದ್ಯಾಲಯದ ಸಿಬ್ಬಂದಿ ಆರಂಭದಲ್ಲಿ ಸಬೂಬು ಹೇಳಿದರು. ಆದರೆ, ಕೋರ್ಸ್ಗೆ ಸೇರಲು ಸಿದ್ಧವಾಗಿರುವ 7 ವಿದ್ಯಾರ್ಥಿಗಳಿಗೆ ಸಿಬ್ಬಂದಿಯೇ ಪ್ರವೇಶ ನಿರಾಕರಿಸುತ್ತಿದ್ದಾರೆ. ಇದರಿಂದ ಒಟ್ಟು 13 ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ’ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.</p>.<p>‘ಎಂಪಿಎ ಬದಲಾಗಿ ಎಂ.ಎ– ಜನಪದ ಕಲೆ ಕೋರ್ಸ್’ಗೆ ಪ್ರವೇಶ ಪಡೆಯಿರಿ ಅಥವಾ ಮುಂದಿನ ವರ್ಷದವರೆಗೂ ಕಾಯಿರಿ. ಇಲ್ಲದಿದ್ದರೆ ಕಟ್ಟಿರುವ ಶುಲ್ಕ ಹಿಂಪಡೆಯಿರಿ’ ಎಂದು ವಿಶ್ವವಿದ್ಯಾಲಯ ಹೇಳುತ್ತಿರುವುದರಿಂದ ನಮಗೆ ದಿಕ್ಕೇ ತೋಚದಂತಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿದ್ಯಾರ್ಥಿನಿ ನೋವು ತೋಡಿಕೊಂಡಿದ್ದಾರೆ.</p>.<p>‘ಬಿ.ಎ. (ಡ್ರಾಮಾ), ಬಿ.ಕಾಂ, ಬಿ.ಎಸ್ಸಿ ಓದಿರುವ ನಾವು ರಂಗಭೂಮಿಯ ಬಗ್ಗೆ ಆಸಕ್ತಿ ಹೊಂದಿದ್ದೇವೆ. ಹಾಗಾಗಿ, ಇಷ್ಟಪಟ್ಟು ಈ ಕೋರ್ಸ್ ಆಯ್ಕೆ ಮಾಡಿಕೊಂಡಿದ್ದೇವೆ. ಇದಾದರೆ, ಬಿ.ಇಡಿ ಕಾಲೇಜುಗಳಲ್ಲಿ ‘ಡ್ರಾಮಾ ಟೀಚರ್’ ಅಥವಾ ವಿವಿಗಳಲ್ಲಿ ಪ್ರಾಧ್ಯಾಪಕರಾಗಬಹುದು. ರಂಗಕಲೆಯ ಬಗ್ಗೆ ಪಿಎಚ್.ಡಿ ಮಾಡಲು ಅನುಕೂಲ ಆಗಲಿದೆ.ಈಗಾಗಲೇ 3 ತಿಂಗಳು ವಿಳಂಬವಾಗಿರುವುದರಿಂದ ಬೇರೆ ಕಡೆಯೂ ಪ್ರವೇಶಾತಿ ಪಡೆಯಲು ಸಾಧ್ಯವಿಲ್ಲ. ಒಂದು ವರ್ಷ ನಿರುಪಯುಕ್ತವಾದರೆ ನಮ್ಮ ಭವಿಷ್ಯವೇನು’ ಎಂದು ‘ಪ್ರಜಾವಾಣಿ’ಯೊಂದಿಗೆ ಎಂಪಿಎ ವಿದ್ಯಾರ್ಥಿಗಳು ಕಷ್ಟ ತೋಡಿಕೊಂಡರು.</p>.<p><strong>‘ಇನ್ನೂ ಅನುಮತಿ ಸಿಕ್ಕಿಲ್ಲ’</strong><br />‘ಎಂ.ಪಿ.ಎ’ ಕೋರ್ಸ್ ಆರಂಭಿಸಲು ಸರ್ಕಾರದಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಹಾಗಾಗಿ ಎಂಪಿಎ ಕೋರ್ಸ್ ವಿದ್ಯಾರ್ಥಿಗಳು ಜನಪದ ಕಲೆ ಕೋರ್ಸ್ಗೆ ಪ್ರವೇಶಾತಿ ಪಡೆಯಲು ಅವಕಾಶ ಕಲ್ಪಿಸಿದ್ದೇವೆ. ಬೇಕೆಂದರೆ ಪದವಿ ಪ್ರಮಾಣ ಪತ್ರದಲ್ಲಿ ಜನಪದ ಕಲೆಯ ಜತೆಗೆ ಆವರಣದಲ್ಲಿ ‘ಎಂಪಿಎ’ ಎಂದು ಕೊಡುತ್ತೇವೆ.<br /><em><strong>–ಪ್ರೊ.ಚಂದ್ರಶೇಖರ್, ಕುಲಸಚಿವ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>