ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ,ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರವಿರುದ್ಧ ಯಾರೂ ಷಡ್ಯಂತ್ರ ನಡೆಸಿಲ್ಲ. ಆದರೆ ಅಧಿಕಾರ ಬೇಕು ಎನ್ನುವ ನಿಟ್ಟಿನಲ್ಲಿ ಬಿನ್ನಾಭಿಪ್ರಾಯಗಳು ಸಹಜ. ಸಚಿವ ಸ್ಥಾನ ಪಡೆಯಲು ನಾನಾ ರೀತಿಯ ತಂತ್ರಗಳನ್ನು ಮಾಡುತ್ತಿದ್ದಾರೆ. ಸಚಿವ ಸ್ಥಾನ ಸಿಗದೇ ಇದ್ದರೆ ಕೆಲವರು ಸರ್ಕಾರವನ್ನು ಕೆಡವುತ್ತೇವೆಎಂದು ಆಂತರಿಕವಾಗಿ ಹೇಳುತ್ತಿದ್ದಾರೆ. ಆದರೆ ಭಿನ್ನಾಭಿಪ್ರಾಯ ಶಮನವಾಗಲಿದೆ. ಉಮೇಶ ಕತ್ತಿ ಸಚಿವರಾಗಲಿದ್ದಾರೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.