<p><strong>ತಿಳವಳ್ಳಿ</strong>: ‘ಸಿ.ಎಂ.ಉದಾಸಿಯವರು ಹಾನಗಲ್ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಹಾಗೂಅಭಿವೃದ್ಧಿ ಕೆಲಸಗಳು ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಕೈಹಿಡಿಯಲಿದೆ’ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.</p>.<p>ತಿಳವಳ್ಳಿ ಸಮೀಪದ ಮುಳಥಳ್ಳಿ, ಬ್ಯಾಗವಾದಿ, ಕೆಲವರಕೊಪ್ಪ ಗ್ರಾಮಗಳಲ್ಲಿ ಪಕ್ಷದ ಬಿಜೆಪಿ ಪರ ಪ್ರಚಾರದಲ್ಲಿ ವರರು ಮಾತನಾಡಿದರು.</p>.<p>‘ಸಿದ್ದರಾಮಯ್ಯ ಸಂಗೂರು ಸಕ್ಕರೆ ಕಾರ್ಖಾನೆ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ಸರ್ಕಾರದ ಅವಧಿಯಲ್ಲಿ ಈ ಸಕ್ಕರೆ ಕಾರ್ಖಾನೆ ನೆನಪಿಗೆ ಬರಲಿಲ್ಲ. ಚುನಾವಣೆ ಸಂದರ್ಭದಲ್ಲಿ ಉದಾಸಿ, ಶಿವರಾಜ ಸಜ್ಜನರ ಮೇಲೆಆಪಾದನೆ ಮಾಡುತ್ತಿದ್ದಾರೆ. ಆಪಾದಿಸುವುದೇ ಕಾಂಗ್ರೆಸ್ ಸಂಸ್ಕೃತಿ’ ಎಂದು ಟೀಕಿಸಿದರು.</p>.<p>‘ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಮೇಲೆ ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದರು. ಯಡಿಯೂರಪ್ಪ ಅವರು ವಾಲ್ಮೀಕಿ ಜಯಂತಿ ಆಚರಣೆ ಆರಂಭಿಸಿದರು. ನನ್ನ ಎಲ್ಲ ವಾಲ್ಮೀಕಿಬಂಧುಗಳು ಶಿವರಾಜ ಸಜ್ಜನರಗೆ ಮತನೀಡಬೇಕು’ ಎಂದರು.</p>.<p>ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವಲಿಂಗಪ್ಪ ತಲ್ಲೂರ, ಮಂಜುನಾಥ ಓಲೇಕಾರ, ರಾಮಣ್ಣ ಮಾದಾಪುರ, ಸುಭಾಸ ಗೋರನವರ, ಲಕ್ಷ್ಮಣ ದೊಡ್ಡಲಿಂಗಣ್ಣನವರ, ಶಿವಪ್ಪ ದೊಡ್ಡಲಿಂಗಣ್ಣನವರ, ಪ್ರಭು ಕನ್ನೇಶ್ವರ, ಹನುಮಂತಪ್ಪ ಬುಳ್ಳಣ್ಣನವರ, ಸುರೇಶ ಸುಣಗಾರ, ಅಶೋಕ ಪೂಜಾರ, ಸುರೇಶ ಭಜಂತ್ರಿ, ಸುಧಾ ಮೇಗಳವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿಳವಳ್ಳಿ</strong>: ‘ಸಿ.ಎಂ.ಉದಾಸಿಯವರು ಹಾನಗಲ್ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಹಾಗೂಅಭಿವೃದ್ಧಿ ಕೆಲಸಗಳು ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಕೈಹಿಡಿಯಲಿದೆ’ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.</p>.<p>ತಿಳವಳ್ಳಿ ಸಮೀಪದ ಮುಳಥಳ್ಳಿ, ಬ್ಯಾಗವಾದಿ, ಕೆಲವರಕೊಪ್ಪ ಗ್ರಾಮಗಳಲ್ಲಿ ಪಕ್ಷದ ಬಿಜೆಪಿ ಪರ ಪ್ರಚಾರದಲ್ಲಿ ವರರು ಮಾತನಾಡಿದರು.</p>.<p>‘ಸಿದ್ದರಾಮಯ್ಯ ಸಂಗೂರು ಸಕ್ಕರೆ ಕಾರ್ಖಾನೆ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ಸರ್ಕಾರದ ಅವಧಿಯಲ್ಲಿ ಈ ಸಕ್ಕರೆ ಕಾರ್ಖಾನೆ ನೆನಪಿಗೆ ಬರಲಿಲ್ಲ. ಚುನಾವಣೆ ಸಂದರ್ಭದಲ್ಲಿ ಉದಾಸಿ, ಶಿವರಾಜ ಸಜ್ಜನರ ಮೇಲೆಆಪಾದನೆ ಮಾಡುತ್ತಿದ್ದಾರೆ. ಆಪಾದಿಸುವುದೇ ಕಾಂಗ್ರೆಸ್ ಸಂಸ್ಕೃತಿ’ ಎಂದು ಟೀಕಿಸಿದರು.</p>.<p>‘ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಮೇಲೆ ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದರು. ಯಡಿಯೂರಪ್ಪ ಅವರು ವಾಲ್ಮೀಕಿ ಜಯಂತಿ ಆಚರಣೆ ಆರಂಭಿಸಿದರು. ನನ್ನ ಎಲ್ಲ ವಾಲ್ಮೀಕಿಬಂಧುಗಳು ಶಿವರಾಜ ಸಜ್ಜನರಗೆ ಮತನೀಡಬೇಕು’ ಎಂದರು.</p>.<p>ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವಲಿಂಗಪ್ಪ ತಲ್ಲೂರ, ಮಂಜುನಾಥ ಓಲೇಕಾರ, ರಾಮಣ್ಣ ಮಾದಾಪುರ, ಸುಭಾಸ ಗೋರನವರ, ಲಕ್ಷ್ಮಣ ದೊಡ್ಡಲಿಂಗಣ್ಣನವರ, ಶಿವಪ್ಪ ದೊಡ್ಡಲಿಂಗಣ್ಣನವರ, ಪ್ರಭು ಕನ್ನೇಶ್ವರ, ಹನುಮಂತಪ್ಪ ಬುಳ್ಳಣ್ಣನವರ, ಸುರೇಶ ಸುಣಗಾರ, ಅಶೋಕ ಪೂಜಾರ, ಸುರೇಶ ಭಜಂತ್ರಿ, ಸುಧಾ ಮೇಗಳವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>