<p><strong>ಗುತ್ತಲ</strong>: ಅಕ್ಕೂರ ಮತ್ತು ಮರಡೂರ ಗ್ರಾಮಗಳ ಮಧ್ಯೆ ವದರಾ ನದಿಗೆ ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್ ಮೇಲಿಂದ ನದಿಗೆ ಟ್ರ್ಯಾಕ್ಟರ್ ಬಿದ್ದ ಘಟನೆ ಮಂಗಳವಾರ ನಡೆದಿದೆ.</p>.<p>ಮಾರಾಟಕ್ಕೆಂದು ಟ್ರ್ಯಾಕ್ಟರ್ ಮೇಲೆ ಮರಡೂರ ಗ್ರಾಮದಿಂದ 5 ಚೀಲ ಹಸಿಮೆಣಸಿಕಾಯಿ ಹಾಕಿಕೊಂಡು ಅಕ್ಕೂರ ಗ್ರಾಮಕ್ಕೆ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದೆ.</p>.<p>ಅಗ್ನಿಶಾಮಕ ದಳದ ಸಿಬ್ಬಂದಿ ಬರುವ ಮುನ್ನವೇ ನೂರಾರು ರೈತರು ಒಂದು ದಡದಿಂದ ಇನ್ನೊಂದು ದಡಕ್ಕೆ ಹಗ್ಗ ಹಾಕಿ, ಹಗ್ಗದ ತುದಿಗೆ ಕ್ಯಾನ್ ಕಟ್ಟಿ ಬಿಟ್ಟಿದ್ದಾರೆ. ನದಿಗೆ ಬಿದ್ದ ದೀಪಕ್ ದೊಡ್ಡಗೌಡ್ರ ಮತ್ತು ಸಂತೋಷ ಪಾಟೀಲ್ ಅವರನ್ನು ರಕ್ಷಣೆ ಮಾಡಲಾಗಿದೆ.</p>.<p>ನದಿಗೆ ಬಿದ್ದ ಇಬ್ಬರನ್ನು ರಕ್ಷಣೆ ಮಾಡಲು ನದಿಗೆ ಹಾರಿದ ಫಕ್ಕೀರಪ್ಪ ಕಾಕೋಳ ಪವಾಡ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.</p>.<p>ಬ್ಯಾರೇಜಿಗೆ ತಡೆಗೋಡೆ ಇಲ್ಲದ ಕಾರಣ ಈ ದುರಂತ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುತ್ತಲ</strong>: ಅಕ್ಕೂರ ಮತ್ತು ಮರಡೂರ ಗ್ರಾಮಗಳ ಮಧ್ಯೆ ವದರಾ ನದಿಗೆ ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್ ಮೇಲಿಂದ ನದಿಗೆ ಟ್ರ್ಯಾಕ್ಟರ್ ಬಿದ್ದ ಘಟನೆ ಮಂಗಳವಾರ ನಡೆದಿದೆ.</p>.<p>ಮಾರಾಟಕ್ಕೆಂದು ಟ್ರ್ಯಾಕ್ಟರ್ ಮೇಲೆ ಮರಡೂರ ಗ್ರಾಮದಿಂದ 5 ಚೀಲ ಹಸಿಮೆಣಸಿಕಾಯಿ ಹಾಕಿಕೊಂಡು ಅಕ್ಕೂರ ಗ್ರಾಮಕ್ಕೆ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದೆ.</p>.<p>ಅಗ್ನಿಶಾಮಕ ದಳದ ಸಿಬ್ಬಂದಿ ಬರುವ ಮುನ್ನವೇ ನೂರಾರು ರೈತರು ಒಂದು ದಡದಿಂದ ಇನ್ನೊಂದು ದಡಕ್ಕೆ ಹಗ್ಗ ಹಾಕಿ, ಹಗ್ಗದ ತುದಿಗೆ ಕ್ಯಾನ್ ಕಟ್ಟಿ ಬಿಟ್ಟಿದ್ದಾರೆ. ನದಿಗೆ ಬಿದ್ದ ದೀಪಕ್ ದೊಡ್ಡಗೌಡ್ರ ಮತ್ತು ಸಂತೋಷ ಪಾಟೀಲ್ ಅವರನ್ನು ರಕ್ಷಣೆ ಮಾಡಲಾಗಿದೆ.</p>.<p>ನದಿಗೆ ಬಿದ್ದ ಇಬ್ಬರನ್ನು ರಕ್ಷಣೆ ಮಾಡಲು ನದಿಗೆ ಹಾರಿದ ಫಕ್ಕೀರಪ್ಪ ಕಾಕೋಳ ಪವಾಡ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.</p>.<p>ಬ್ಯಾರೇಜಿಗೆ ತಡೆಗೋಡೆ ಇಲ್ಲದ ಕಾರಣ ಈ ದುರಂತ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>