<p><strong>ಶಿಗ್ಗಾವಿ</strong>: ಸಾಲುಮರದ ತಿಮ್ಮಕ್ಕ ಸೇವೆ ಸ್ಮರಣೆ ಜತೆಗೆ ಪರಿಸರ ಸಂರಕ್ಷಣೆಗೆ ನಮ್ಮ ಕೊಡುಗೆ ನೀಡಲು ಮುಂದಾಗಬೇಕು ಎಂದು ಶಿಕ್ಷಕ ಬಸವರಾಜ ಬಸರಿಕಟ್ಟಿ ಹೇಳಿದರು.</p>.<p>ಪಟ್ಟಣದ ಶಬರಿಗಿರಿಯ ವೈಷ್ಣವಿ ಉದ್ಯಾನದಲ್ಲಿ ಭಾನುವಾರ ಸಾಲು ಮರದ ತಿಮ್ಮಕ್ಕ ಅವರ ಹೆಸರಲ್ಲಿ ಗಿಡ ನೆಡುವ ಮೂಲಕ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ತಿಮ್ಮಕ್ಕ ಅವರ ನಾಡಿಗೆ ನೀಡಿದ ಸೇವೆ ನಿಸ್ವಾರ್ಥ ಸೇವೆಯಾಗಿದ್ದು, ಇತರರಿಗೆ ಮಾದರಿಯಾಗಿದೆ ಎಂದರು.</p>.<p>ಸಾಲುಮರದ ತಿಮ್ಮಕ್ಕ ಅವರು ತಮ್ಮ ಸೇವೆ ಮೂಲಕ ಯುವ ಜನತೆಗೆ ಪರಿಸರ ಸಂಸರಕ್ಷಣೆಯ ಮಹತ್ವ ತಿಳಿಸುವ ಮೂಲಕ ಅಜರಾಮರರಾಗಿದ್ದಾರೆ. ಅಲ್ಲದೇ ಅವರು ನಾವು ನೆಡುವ ಸಸಿಗಳನ್ನು ತಾಳ್ಮೆ ಮತ್ತು ಪ್ರೀತಿಯಿಂದ ಬೆಳೆಸಿ ಪರಿಸರ ಶುದ್ದೀಕರಿಸಲು ಮುಂದಾ ಗಬೇಕು ಎಂದರು.</p>.<p>ಪರಿಸರ ಉಳಿದರೆ ಮಾತ್ರ ಜೀವ ಸಂಕುಲ ಉಳಿಯಲು ಸಾಧ್ಯ ಎಂಬ ಇಡೀ ಮನುಕುಲಕ್ಕೆ ಪಾಠ ಕಲಿಸಿದ್ದಾರೆ. ಇಂದಿನ ಯುವಕರು ಇಂತಹವರನ್ನು ಆದರ್ಶ ವ್ಯಕ್ತಿಗಳನ್ನಾಗಿಸಿಕೊಂಡು ಪೂಜಿಸಬೇಕು ಎಂದರು.</p>.<p>ಮುಖಂಡರಾದ ವೈ. ಎಸ್. ಪಾಟೀಲ, ಮಲ್ಲಪ್ಪ ಚಕ್ರಸಾಲಿ, ಚನ್ನಪ್ಪ ನೆಲೂಗಲ್ಲ, ಶಿವಲಿಂಗಪ್ಪ ಹುರಳಿ, ರಾಜ್ ಡಾನ್ಸ್ ಶಾಲೆ ಸೇರಿದಂತೆ ವಿವಿಧ ಶಾಲೆ ವಿದ್ಯಾರ್ಥಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಗ್ಗಾವಿ</strong>: ಸಾಲುಮರದ ತಿಮ್ಮಕ್ಕ ಸೇವೆ ಸ್ಮರಣೆ ಜತೆಗೆ ಪರಿಸರ ಸಂರಕ್ಷಣೆಗೆ ನಮ್ಮ ಕೊಡುಗೆ ನೀಡಲು ಮುಂದಾಗಬೇಕು ಎಂದು ಶಿಕ್ಷಕ ಬಸವರಾಜ ಬಸರಿಕಟ್ಟಿ ಹೇಳಿದರು.</p>.<p>ಪಟ್ಟಣದ ಶಬರಿಗಿರಿಯ ವೈಷ್ಣವಿ ಉದ್ಯಾನದಲ್ಲಿ ಭಾನುವಾರ ಸಾಲು ಮರದ ತಿಮ್ಮಕ್ಕ ಅವರ ಹೆಸರಲ್ಲಿ ಗಿಡ ನೆಡುವ ಮೂಲಕ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ತಿಮ್ಮಕ್ಕ ಅವರ ನಾಡಿಗೆ ನೀಡಿದ ಸೇವೆ ನಿಸ್ವಾರ್ಥ ಸೇವೆಯಾಗಿದ್ದು, ಇತರರಿಗೆ ಮಾದರಿಯಾಗಿದೆ ಎಂದರು.</p>.<p>ಸಾಲುಮರದ ತಿಮ್ಮಕ್ಕ ಅವರು ತಮ್ಮ ಸೇವೆ ಮೂಲಕ ಯುವ ಜನತೆಗೆ ಪರಿಸರ ಸಂಸರಕ್ಷಣೆಯ ಮಹತ್ವ ತಿಳಿಸುವ ಮೂಲಕ ಅಜರಾಮರರಾಗಿದ್ದಾರೆ. ಅಲ್ಲದೇ ಅವರು ನಾವು ನೆಡುವ ಸಸಿಗಳನ್ನು ತಾಳ್ಮೆ ಮತ್ತು ಪ್ರೀತಿಯಿಂದ ಬೆಳೆಸಿ ಪರಿಸರ ಶುದ್ದೀಕರಿಸಲು ಮುಂದಾ ಗಬೇಕು ಎಂದರು.</p>.<p>ಪರಿಸರ ಉಳಿದರೆ ಮಾತ್ರ ಜೀವ ಸಂಕುಲ ಉಳಿಯಲು ಸಾಧ್ಯ ಎಂಬ ಇಡೀ ಮನುಕುಲಕ್ಕೆ ಪಾಠ ಕಲಿಸಿದ್ದಾರೆ. ಇಂದಿನ ಯುವಕರು ಇಂತಹವರನ್ನು ಆದರ್ಶ ವ್ಯಕ್ತಿಗಳನ್ನಾಗಿಸಿಕೊಂಡು ಪೂಜಿಸಬೇಕು ಎಂದರು.</p>.<p>ಮುಖಂಡರಾದ ವೈ. ಎಸ್. ಪಾಟೀಲ, ಮಲ್ಲಪ್ಪ ಚಕ್ರಸಾಲಿ, ಚನ್ನಪ್ಪ ನೆಲೂಗಲ್ಲ, ಶಿವಲಿಂಗಪ್ಪ ಹುರಳಿ, ರಾಜ್ ಡಾನ್ಸ್ ಶಾಲೆ ಸೇರಿದಂತೆ ವಿವಿಧ ಶಾಲೆ ವಿದ್ಯಾರ್ಥಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>