ಮೂರು ದಿನಗಳಿಂದ ಉತ್ತಮ ಮಳೆಯಾಗಿರುವ ಖಜೂರಿ, ಮಟಕಿ, ತಡೋಳಾ, ಮುನ್ನೋಳ್ಳಿ, ಹೆಬಳಿ, ನಿಂಬರ್ಗಾ, ಬಟ್ಟರ್ಗಾ, ಹಿತ್ತಲ ಶಿರೂರು, ಚಿಂಚೋಳಿ, ನಿರಗುಡಿ ಗ್ರಾಮದ ರೈತರು ಬಿತ್ತನೆ ಆರಂಭಿಸಿದ್ದಾರೆ. ಮುಂಗಾರು ಬಿತ್ತನೆಗಾಗಿ ಕೃಷಿ ಇಲಾಖೆಯಿಂದ ಆಳಂದ, ಖಜೂರಿ, ನರೋಣಾ, ಮಾದನ ಹಿಪ್ಪರಗಾ, ನಿಂಬರ್ಗಾ ರೈತ ಸಂಪರ್ಕ ಕೇಂದ್ರಗಳಿಂದ ಈಗಾಗಲೇ ಬಿತ್ತನೆ ಬೀಜ ವಿತರಣೆ ಕಾರ್ಯ ನಡೆದಿದೆ. ಕೋವಿಡ್ ಸುರಕ್ಷತೆ ದೃಷ್ಟಿಯಿಂದ ರುದ್ರವಾಡಿ, ಕಿಣಿಸುಲ್ತಾನ , ಅಂಬಲಗಾ, ವಿ.ಕೆ.ಸಲಗರ ಕೃಷಿ ಪ್ರಾಥಮಿಕ ಸಹಕಾರಿ ಸಂಘದಿಂದಲೂ ಬಿತ್ತನೆ ಬೀಜ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.