ಮೇ 21ರಂದು ಶಿವಲಿಂಗೇಶ್ವರ ಮಠದ ಹತ್ತಿರ ವಾರದ ಸಂತೆಯ ಕಸವನ್ನು ಪಂಚಾಯತಿ ಸಿಬ್ಬಂದಿಯೊಂದಿಗೆ ರಸ್ತೆ ಸ್ವಚ್ಛಗೊಳಿಸುತ್ತಿದ್ದ ಪಂಚಾಯಿತಿ ಉಪಾಧ್ಯಕ್ಷ ಶಿವಲಿಂಗಪ್ಪ ಇಂಗಳೆ ಅವರ ಮೇಲೆ ಗ್ರಾಮದ ಲಿಂಗರಾಜ ಜಗದೇವಪ್ಪ, ಗುರುರಾಜ ಅಪ್ಪಶ್ಯಾ, ಬಸವರಾಜ ದಾಸಿಮಯ್ಯ ಹಾಗೂ ಹಣಮಂತ ರುಕ್ಕಪ್ಪ ಸೇರಿಕೊಂಡು ದಾರಿಯಲ್ಲಿ ಕಸದ ವಾಹನ ನಿಂತಿದ್ದನ್ನು ಪ್ರಶ್ನಿಸಿ, ಹಲ್ಲೆ ನಡೆಸಿದ್ದಾರೆ. ಬಳಿಕ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ತೀವ್ರ ಒಳಪೆಟ್ಟು ಆಗಿರುವುದರಿಂದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.