ಎಂಬಿಎ ವಿಭಾಗದಲ್ಲಿ ಪ್ರಿಯಾಂಕಾ ವೀರಭದ್ರಪ್ಪ ಅವರು ಎಂಟು ಚಿನ್ನದ ಪದಕ, ರಾಜ್ಯಶಾಸ್ತ್ರ ವಿಭಾಗದಲ್ಲಿ ರಾಯಚೂರಿನ ಲಕ್ಷ್ಮಿ ಲಕ್ಷ್ಮಣ ಆರು ಚಿನ್ನದ ಪದಕ, ಸಮಾಜ ಕಾರ್ಯ ವಿಭಾಗದಲ್ಲಿ ಅಂಬಿಕಾ ಶಿವಾನಂದ ಆರು ಚಿನ್ನದ ಪದಕ, ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಅಮೀನಾ ಅಂಜುಮ್ ಆರು ಚಿನ್ನದ ಪದಕ, ರಸಾಯನವಿಜ್ಞಾನ ವಿಭಾಗದಲ್ಲಿ ಶ್ರಾವಣಿ ಕೃಷ್ಣಾರೆಡ್ಡಿ ಐದು ಚಿನ್ನದ ಪದಕ, ಜೀವರಸಾಯನಶಾಸ್ತ್ರ ವಿಭಾಗದಲ್ಲಿ ಅಕ್ಕಮಹಾದೇವಿ ಅವರು ಐದು ಚಿನ್ನದ ಪದಕ ಹಾಗೂ ಬಿ.ಕಾಂ.ನಲ್ಲಿ ಅತಿ ಹೆಚ್ಚು ಅಂಕ ಪಡೆದಿದ್ದಕ್ಕೆ ಭಾಗ್ಯವಂತಿ ಅವರಿಗೆ ಐದು ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು.