‘ನಾವು ಬೇರೆ ರಾಜ್ಯದಿಂದ ಉತ್ಸವಕ್ಕೆ ಬರುತ್ತೇವೆ. ನಮಗೆ ತೊಟ್ಟಿಲು ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ದೊರೆಯುತ್ತಿಲ್ಲ. ಸಮಿತಿಯವರು ಎಲ್ಲರಿಗೆ ದತ್ತ ಜನ್ಮೋತ್ಸವ ಹಾಗೂ ತೊಟ್ಟಿಲು ಕಾರ್ಯಕ್ರಮ ಕಾಣುವಂತೆ ವ್ಯವಸ್ಥೆ ಮಾಡಬೇಕು’ ಎಂದು ಮುಂಬೈ ಹಾಗೂ ಹೈದರಾಬಾದ್ನಿಂದ ಬಂದಿದ್ದ ಯಾತ್ರಿಕರು ಹೇಳಿದರು.
ತೊಟ್ಟಿಲೋತ್ಸವ ವೀಕ್ಷಿಸಲು ಗುರುವಾರ 3 ಲಕ್ಷಕ್ಕಿಂತಲೂ ಹೆಚ್ಚು ಭಕ್ತರು ಬಂದಿದ್ದರು ಎಂದು ಭದ್ರತೆಯ ಉಸ್ತುವಾರಿ ಹೊತ್ತಿದ್ದ ಪೊಲೀಸರು ತಿಳಿಸಿದರು.