<p><strong>ವಾಡಿ:</strong> ಪಟ್ಟಣದ ರಾಷ್ಟ್ರೀಯ ಹೆದ್ದಾರಿ 150 ನಿಜಾಮ್ ಗೇಟ್ನ ಎರಡು ಕಡೆ ರಸ್ತೆ ಸಂಪೂರ್ಣ ಹಾಳಾಗಿದ್ದು, ಹಾಳಾದ ರಸ್ತೆಯಿಂದ ಮೇಲೆ ಏಳುವ ಧೂಳು ವಾಹನ ಸವಾರರು ಮತ್ತು ಜನರ ಉಸಿರುಗಟ್ಟಿಸುತ್ತಿದೆ. ಧೂಳಿನಿಂದ ಜನರು ಕಂಗೆಡುತ್ತಿದ್ದು ಹೆದ್ದಾರಿ ಪ್ರಾಧಿಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.</p>.<p>ಕ್ಷಣಕ್ಷಣಕ್ಕೂ ಇಲ್ಲಿ ರೈಲ್ವೆ ಗೇಟ್ ಹಾಕಲಾಗತ್ತಿದ್ದು, ತಾಸುಗಟ್ಟಲೆ ವಾಹನಗಳು ಧೂಳಿನ ಮಧ್ಯೆ ಸಾಲುಗಟ್ಟಿ ನಿಲ್ಲುವುದು ಸಾಮಾನ್ಯವಾಗಿದೆ. ರಸ್ತೆಗೆ ಅಡ್ಡಲಾಗಿ ಹಾಕಿರುವ ರೈಲ್ವೆ ಹಳಿಗಳು ರಸ್ತೆಗಿಂತ ಎತ್ತರವಾಗಿದ್ದು, ಹೆಜ್ಜೆಹೆಜ್ಜೆಗೂ ತೊಂದರೆ ಅನುಭವಿಸುವಂತಾಗಿದೆ.</p>.<p>ಬಲರಾಮ್ ಚೌಕ್ನಿಂದ ರೈಲ್ವೆ ಗೇಟ್ನ ಎರಡು ಕಡೆ 1 ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದ್ದು, ಹೆದ್ದಾರಿ ಪ್ರಾಧಿಕಾರವು ಕನಿಷ್ಠ ರಸ್ತೆ ದುರಸ್ತಿ ಮಾಡದೇ ನಿರ್ಲಕ್ಷ್ಯ ವಹಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.</p>.<p>4 ವರ್ಷದಿಂದ ಸಾರ್ವಜನಿಕರು ಹದಗೆಟ್ಟ ರಸ್ತೆ ಮತ್ತು ಧೂಳಿನ ಗೋಳು ಸಹಿಸಿಕೊಂಡು ಬರುತ್ತಿದ್ದು, ಪರಿಹಾರ ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಇರುವುದರಿಂದ ನಿತ್ಯ ಸಾವಿರಾರು ಲಾರಿಗಳು, ಸರ್ಕಾರಿ ಬಸ್ಗಳು, ಕಾರುಗಳು, ಟಿಪ್ಪರ್ಗಳು ಸೇರಿದಂತೆ ದ್ವಿಚಕ್ರ ವಾಹನಗಳು ಈ ರಸ್ತೆಯಲ್ಲಿ ನಿತ್ಯ ಓಡಾಡುತ್ತವೆ.</p>.<p>ರಸ್ತೆ ಮೇಲ್ಸೇತುವೆ ಕಾಮಗಾರಿ ಆರಂಭಕ್ಕೆ ಸಿದ್ಧತೆ ನಡೆದಿದ್ದು, ಕಾಮಗಾರಿ ಮುಗಿಯಲು ಕನಿಷ್ಠ 1 ವರ್ಷ ಬೇಕು. ಅಲ್ಲಿಯವರೆಗೂ ತಾತ್ಕಾಲಿಕ ರಸ್ತೆ ನಿರ್ಮಿಸಿ ಧೂಳು ಮೇಲೇಳದ ರೀತಿಯಲ್ಲಿ ಕ್ರಮ ವಹಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.</p>.<div><blockquote>ಕಳೆದ 5 ವರ್ಷಗಳಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು ವಾಹನಗಳು ಓಡಾಡಲು ಕನಿಷ್ಠ ಉತ್ತಮ ರಸ್ತೆ ನಿರ್ಮಿಸದೇ ಆಡಳಿತ ಬೇಜವಾಬ್ದಾರಿ ಮಾಡುತ್ತಿದೆ</blockquote><span class="attribution"> ಮಲ್ಲಿಕಾರ್ಜುನ ಮಾಲಿಪಾಟೀಲ ಬಲರಾಮ ಚೌಕ್ ನಿವಾಸಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಡಿ:</strong> ಪಟ್ಟಣದ ರಾಷ್ಟ್ರೀಯ ಹೆದ್ದಾರಿ 150 ನಿಜಾಮ್ ಗೇಟ್ನ ಎರಡು ಕಡೆ ರಸ್ತೆ ಸಂಪೂರ್ಣ ಹಾಳಾಗಿದ್ದು, ಹಾಳಾದ ರಸ್ತೆಯಿಂದ ಮೇಲೆ ಏಳುವ ಧೂಳು ವಾಹನ ಸವಾರರು ಮತ್ತು ಜನರ ಉಸಿರುಗಟ್ಟಿಸುತ್ತಿದೆ. ಧೂಳಿನಿಂದ ಜನರು ಕಂಗೆಡುತ್ತಿದ್ದು ಹೆದ್ದಾರಿ ಪ್ರಾಧಿಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.</p>.<p>ಕ್ಷಣಕ್ಷಣಕ್ಕೂ ಇಲ್ಲಿ ರೈಲ್ವೆ ಗೇಟ್ ಹಾಕಲಾಗತ್ತಿದ್ದು, ತಾಸುಗಟ್ಟಲೆ ವಾಹನಗಳು ಧೂಳಿನ ಮಧ್ಯೆ ಸಾಲುಗಟ್ಟಿ ನಿಲ್ಲುವುದು ಸಾಮಾನ್ಯವಾಗಿದೆ. ರಸ್ತೆಗೆ ಅಡ್ಡಲಾಗಿ ಹಾಕಿರುವ ರೈಲ್ವೆ ಹಳಿಗಳು ರಸ್ತೆಗಿಂತ ಎತ್ತರವಾಗಿದ್ದು, ಹೆಜ್ಜೆಹೆಜ್ಜೆಗೂ ತೊಂದರೆ ಅನುಭವಿಸುವಂತಾಗಿದೆ.</p>.<p>ಬಲರಾಮ್ ಚೌಕ್ನಿಂದ ರೈಲ್ವೆ ಗೇಟ್ನ ಎರಡು ಕಡೆ 1 ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದ್ದು, ಹೆದ್ದಾರಿ ಪ್ರಾಧಿಕಾರವು ಕನಿಷ್ಠ ರಸ್ತೆ ದುರಸ್ತಿ ಮಾಡದೇ ನಿರ್ಲಕ್ಷ್ಯ ವಹಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.</p>.<p>4 ವರ್ಷದಿಂದ ಸಾರ್ವಜನಿಕರು ಹದಗೆಟ್ಟ ರಸ್ತೆ ಮತ್ತು ಧೂಳಿನ ಗೋಳು ಸಹಿಸಿಕೊಂಡು ಬರುತ್ತಿದ್ದು, ಪರಿಹಾರ ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಇರುವುದರಿಂದ ನಿತ್ಯ ಸಾವಿರಾರು ಲಾರಿಗಳು, ಸರ್ಕಾರಿ ಬಸ್ಗಳು, ಕಾರುಗಳು, ಟಿಪ್ಪರ್ಗಳು ಸೇರಿದಂತೆ ದ್ವಿಚಕ್ರ ವಾಹನಗಳು ಈ ರಸ್ತೆಯಲ್ಲಿ ನಿತ್ಯ ಓಡಾಡುತ್ತವೆ.</p>.<p>ರಸ್ತೆ ಮೇಲ್ಸೇತುವೆ ಕಾಮಗಾರಿ ಆರಂಭಕ್ಕೆ ಸಿದ್ಧತೆ ನಡೆದಿದ್ದು, ಕಾಮಗಾರಿ ಮುಗಿಯಲು ಕನಿಷ್ಠ 1 ವರ್ಷ ಬೇಕು. ಅಲ್ಲಿಯವರೆಗೂ ತಾತ್ಕಾಲಿಕ ರಸ್ತೆ ನಿರ್ಮಿಸಿ ಧೂಳು ಮೇಲೇಳದ ರೀತಿಯಲ್ಲಿ ಕ್ರಮ ವಹಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.</p>.<div><blockquote>ಕಳೆದ 5 ವರ್ಷಗಳಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು ವಾಹನಗಳು ಓಡಾಡಲು ಕನಿಷ್ಠ ಉತ್ತಮ ರಸ್ತೆ ನಿರ್ಮಿಸದೇ ಆಡಳಿತ ಬೇಜವಾಬ್ದಾರಿ ಮಾಡುತ್ತಿದೆ</blockquote><span class="attribution"> ಮಲ್ಲಿಕಾರ್ಜುನ ಮಾಲಿಪಾಟೀಲ ಬಲರಾಮ ಚೌಕ್ ನಿವಾಸಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>