<p><strong>ಕಲಬುರ್ಗಿ: </strong>ಬಳ್ಳಾರಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಕಾಲೇಜನ್ನು ಆರಂಭಿಸಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಅವರನ್ನು ಆಹ್ವಾನಿಸಲು ದೆಹಲಿಗೆ ತೆರಳಿದ್ದೆ. ಉಳಿದದ್ದು ಮಾಧ್ಯಮಗಳ ಸೃಷ್ಟಿ ಎಂದು ರಾಜ್ಯ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಸ್ಪಷ್ಟಪಡಿಸಿದರು.</p>.<p>ನಗರದಲ್ಲಿ ಕ್ರೆಡೆಲ್ ಪ್ರಾದೇಶಿಕ ಕಚೇರಿಯ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ನೊಂದಿಗೆ ನಾನು ಯಾವುದೇ ಮಾತುಕತೆ ನಡೆಸಿಲ್ಲ. ಪ್ರತಿ 15 ದಿನಗಳಿಗೊಮ್ಮೆ ದೆಹಲಿಗೆ ಹೋಗುತ್ತೇನೆ. ಇದರಲ್ಲಿ ಇಲಾಖೆ ಹಾಗೂ ವೈಯಕ್ತಿಕ ಕೆಲಸಗಳೂ ಇರುತ್ತವೆ. ಗುರುವಾರವೂ ದೆಹಲಿಗೆ ಹೋಗುತ್ತೇನೆ ಎಂದರು.</p>.<p>ಅಕ್ರಮ ಗಣಿಗಾರಿಕೆ ಹಾಗೂ ಮರಳು ದಂದೆ ನಡೆಯುತ್ತಿರುವುದು ನಿಜ. ಇದನ್ನು ತಡೆಗಟ್ಟಲು 50 ಕೆ.ಜಿ. ಪ್ಯಾಕೆಟ್ ಹಾಗೂ 1 ಟನ್ ಮರಳಿನ ಜಂಬೊ ಪ್ಯಾಕೆಟ್ ಗಳಲ್ಲಿ ಮರಳನ್ನು ಪೂರೈಸಲಾಗುವುದು. ಇಲಾಖೆ ಅನುಮತಿ ನೀಡಿದ ಮರಳು ಬ್ಲಾಕ್ ಗಳಿಂದ ಸಂಗ್ರಹಿಸುವುದರಿಂದ ಉತ್ತಮ ಗುಣಮಟ್ಟದ ಮರಳನ್ನು ಗ್ರಾಹಕರಿಗೆ ಪೂರೈಸಬಹುದಾಗಿದೆ ಎಂದು ಹೇಳಿದರು.</p>.<p>ರಾಜ್ಯದಲ್ಲಿ ಪ್ರತಿವರ್ಷ 280 ಮಿಲಿಯನ್ ಟನ್ ಮರಳು ಅಗತ್ಯವಿದೆ. ಇವುಗಳನ್ನು ರಾಜ್ಯದಲ್ಲಿ ಅನುಮತಿ ನೀಡಲಾದ 219 ಮರಳು ಬ್ಲಾಕ್ ಗಳಿಂದ ಸಂಗ್ರಹಿಸಿ ರಾಜ್ಯದ 500 ಡಿಪೊಗಳಲ್ಲಿ ಮಾರಾಟ ಮಾಡಲಾಗುವುದು. ಬೆಲೆಯೂ ಹೆಚ್ಚಳವಾಗುವುದಿಲ್ಲ. ಈಗಾಗಲೇ ಮರಳು ಪ್ಯಾಕಿಂಗ್ ಗೆ ಟೆಂಡರ್ ಕರೆಯಲಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ: </strong>ಬಳ್ಳಾರಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಕಾಲೇಜನ್ನು ಆರಂಭಿಸಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಅವರನ್ನು ಆಹ್ವಾನಿಸಲು ದೆಹಲಿಗೆ ತೆರಳಿದ್ದೆ. ಉಳಿದದ್ದು ಮಾಧ್ಯಮಗಳ ಸೃಷ್ಟಿ ಎಂದು ರಾಜ್ಯ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಸ್ಪಷ್ಟಪಡಿಸಿದರು.</p>.<p>ನಗರದಲ್ಲಿ ಕ್ರೆಡೆಲ್ ಪ್ರಾದೇಶಿಕ ಕಚೇರಿಯ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ನೊಂದಿಗೆ ನಾನು ಯಾವುದೇ ಮಾತುಕತೆ ನಡೆಸಿಲ್ಲ. ಪ್ರತಿ 15 ದಿನಗಳಿಗೊಮ್ಮೆ ದೆಹಲಿಗೆ ಹೋಗುತ್ತೇನೆ. ಇದರಲ್ಲಿ ಇಲಾಖೆ ಹಾಗೂ ವೈಯಕ್ತಿಕ ಕೆಲಸಗಳೂ ಇರುತ್ತವೆ. ಗುರುವಾರವೂ ದೆಹಲಿಗೆ ಹೋಗುತ್ತೇನೆ ಎಂದರು.</p>.<p>ಅಕ್ರಮ ಗಣಿಗಾರಿಕೆ ಹಾಗೂ ಮರಳು ದಂದೆ ನಡೆಯುತ್ತಿರುವುದು ನಿಜ. ಇದನ್ನು ತಡೆಗಟ್ಟಲು 50 ಕೆ.ಜಿ. ಪ್ಯಾಕೆಟ್ ಹಾಗೂ 1 ಟನ್ ಮರಳಿನ ಜಂಬೊ ಪ್ಯಾಕೆಟ್ ಗಳಲ್ಲಿ ಮರಳನ್ನು ಪೂರೈಸಲಾಗುವುದು. ಇಲಾಖೆ ಅನುಮತಿ ನೀಡಿದ ಮರಳು ಬ್ಲಾಕ್ ಗಳಿಂದ ಸಂಗ್ರಹಿಸುವುದರಿಂದ ಉತ್ತಮ ಗುಣಮಟ್ಟದ ಮರಳನ್ನು ಗ್ರಾಹಕರಿಗೆ ಪೂರೈಸಬಹುದಾಗಿದೆ ಎಂದು ಹೇಳಿದರು.</p>.<p>ರಾಜ್ಯದಲ್ಲಿ ಪ್ರತಿವರ್ಷ 280 ಮಿಲಿಯನ್ ಟನ್ ಮರಳು ಅಗತ್ಯವಿದೆ. ಇವುಗಳನ್ನು ರಾಜ್ಯದಲ್ಲಿ ಅನುಮತಿ ನೀಡಲಾದ 219 ಮರಳು ಬ್ಲಾಕ್ ಗಳಿಂದ ಸಂಗ್ರಹಿಸಿ ರಾಜ್ಯದ 500 ಡಿಪೊಗಳಲ್ಲಿ ಮಾರಾಟ ಮಾಡಲಾಗುವುದು. ಬೆಲೆಯೂ ಹೆಚ್ಚಳವಾಗುವುದಿಲ್ಲ. ಈಗಾಗಲೇ ಮರಳು ಪ್ಯಾಕಿಂಗ್ ಗೆ ಟೆಂಡರ್ ಕರೆಯಲಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>