ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸಮೀಪದ ಬೇತು ಗ್ರಾಮದ ತೋಟವೊಂದರಲ್ಲಿ ಹೆಚ್ಚಿನ ಮಳೆಯಿಂದ ಕಾಫಿ ಕಪ್ಪಾಗಿರುವುದು
ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಗ್ರಾಮದಲ್ಲಿ ಮಳೆ ಹೆಚ್ಚಳದಿಂದಾಗಿ ಅರೇಬಿಕಾ ಕಾಫಿಗೆ ಕೊಳೆರೋಗ ಕಾಣಿಸಿಕೊಂಡು ಫಸಲು ಉದುರಿರುವುದನ್ನು ಬೆಳೆಗಾರರು ತೋರಿಸುತ್ತಿರುವುದು
ದಕ್ಷಿಣ ಕೊಡಗಿನಲ್ಲಿ ಮಳೆ ಹೆಚ್ಚಾಗಿ ಕಾಫಿ ಮಾತ್ರವಲ್ಲ ಅಡಿಕೆ ಕಾಳುಮೆಣಸುಗಳಿಗೆ ಹಲವೆಡೆ ಕೊಳೆ ರೋಗ ಕಾಣಿಸಿಕೊಂಡಿದೆ. ಏನು ಮಾಡಬೇಕೇಂದು ತೋಚುತ್ತಿಲ್ಲ. ಬೆಳೆಗಾರರು ಆತಂಕಗೊಂಡಿದ್ದಾರೆ
ಹರೀಶ್ ಮಾದಪ್ಪ ಕೊಡಗು ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ
ಈಗಾಗಲೇ ಕಾಳು ಮೆಣಸಿನ ಫಸಲಿನ ದಾರ ಬಂದಿದ್ದು ಸಾಕಷ್ಟು ನೆಲಕಚ್ಚಿವೆ. ಮುಂದಿನ ದಿನಗಳಲ್ಲಿ ಶೀತ ಹೆಚ್ಚಾದಲ್ಲಿ ಕಾಳು ಮೆಣಸಿನ ಹೊಸ ದಾರ ಬರುವುದಿಲ್ಲ. ಇರುವ ದಾರವೂ ಫಸಲು ಕಚ್ಚುವುದಿಲ್ಲ
ಮೋಹನ್ ಬೋಪಣ್ಣ ಬಿಳಿಗೇರಿ ಬೆಳೆಗಾರ
ಈ ವರ್ಷ ನಮ್ಮ ಭಾಗದಲ್ಲಿ ಒಳ್ಳೆಯ ಕಾಫಿ ನಿರೀಕ್ಷೆ ಮಾಡಿದ್ದೆವು. ಆದರೆ ಬಿಡುವಿಲ್ಲದೆ ಮಳೆ ಸುರಿಯುತಿರುವುದರಿಂದ ಗಿಡಗಳಲ್ಲಿ ಕೊಳೆರೋಗ ಬಂದಿದ್ದು ಶೀತ ಹೆಚ್ಚಾಗಿ ಕಾಫಿ ಉದುರುತ್ತಿದೆ
ಗೀಜಿಗಂಡ ಲೋಕೇಶ್ ಗರ್ವಾಲೆ ಗ್ರಾಮ
ನಿರಂತರವಾಗಿ ಮಳೆಯಿಂದ ಅತಿಯಾದ ತೇವಾಂಶ ಇರುವ ತಗ್ಗುಪ್ರದೇಶದ ಕೆಲವೆಡೆ ಕಾಫಿ ಉದುರುವಿಕೆ ಕಂಡು ಬಂದಿದೆ. ಕಾಫಿ ಮಂಡಳಿ ವತಿಯಿಂದ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ