<p><strong>ಮಡಿಕೇರಿ</strong>: ದಿನದಿಂದ ದಿನಕ್ಕೆ ಕನಿಷ್ಠ ತಾಪಮಾನದಲ್ಲಿ ಇಳಿಕೆಯಾಗುತ್ತಿದ್ದು, ಕಾಫಿನಾಡಿನ ಜನತೆ ಮಾರ್ಗಶಿರ ಮಾಸಕ್ಕೂ ಮುನ್ನ ಗಡಗಡ ನಡುಗುವಂತಾಗಿದೆ. ಕಳೆದ ವರ್ಷದ ಇದೇ ಸಮಯಕ್ಕೆ ಹೋಲಿಸಿದರೆ ಈ ಬಾರಿ ಚಳಿ ಭಾರಿ ಪ್ರಮಾಣದಲ್ಲೇ ಹೆಚ್ಚಾಗಿದೆ.</p>.<p>ಸಾಮಾನ್ಯವಾಗಿ ಕಾರ್ತೀಕ ಮಾಸದ ಅಮಾವಾಸೆ ಕಳೆದ ಬಳಿಕ ಬರುವ ಮಾರ್ಗಶಿರ ಮಾಸದಲ್ಲಿ ಹೆಚ್ಚಿನ ಚಳಿ ಇರುತ್ತಿತ್ತು. ಕಳೆದ ವರ್ಷ ಡಿಸೆಂಬರ್ ಅಂತ್ಯದಲ್ಲಿ ಚಳಿ ಹೆಚ್ಚಾಗಿತ್ತು. ಆದರೆ, ಈ ಬಾರಿ ಕಾರ್ತೀಕ ಮಾಸದ ಅಂತ್ಯದ ಹೊತ್ತಿಗೆ ನಡುಗಿಸುವ ಚಳಿ ಆವರಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಚಳಿ ಹೆಚ್ಚಲಿದೆ ಎಂಬ ಮುನ್ಸೂಚನೆಯನ್ನೂ ಹವಾಮಾನ ಇಲಾಖೆ ನೀಡಿದೆ.</p>.<p>ಗೋಣಿಕೊಪ್ಪಲಿನಲ್ಲಿ 11.09 ಡಿಗ್ರಿ ಸೆಲ್ಸಿಯಸ್ನಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ. ಮಡಿಕೇರಿಯ ಉಷ್ಣಾಂಶ ಸೋಮವಾರ 13 ಡಿಗ್ರಿಗೆ ಇಳಿದಿತ್ತು.</p>.<p>ಚಳಿಯ ಜತೆಗೆ ಮಂಗಳವಾರ ರಾತ್ರಿಯಿಂದಲೇ ತುಂತುರು ಮಳೆ ಅಲ್ಲಲ್ಲಿ ಬೀಳಲಾರಂಭಿಸಿದೆ. ಇನ್ನೆರಡು ದಿನಗಳಲ್ಲಿ ಸಾಧಾರಣ ಮಳೆ ಬೀಳುವ ಸಾಧ್ಯತೆಯೂ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.</p>.<p>’ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿ ಯಿಸಿದ ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ವಿಜ್ಞಾನದ ವಿಷಯ ತಜ್ಞ ಹರೀಶ್, ‘ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಇದರಿಂದ ನ. 24ರಿಂದ ಮಳೆಯಾಗುವ ನಿರೀಕ್ಷೆ ಇದೆ. ತಾಪಮಾನವೂ ಕುಸಿತ ಕಾಣಲಿದೆ’ ಎಂದು ಹೇಳಿದರು.</p>.<p>ಕಪಾಟು ಸೇರಿದ್ದ ಸ್ವೆಟರ್, ಟೋಪಿಗಳು ಹೊರ ಬಂದಿವೆ. ವೃದ್ಧರು ಹೊರಬರಲು ಹಿಂದೇಟು ಹಾಕು ವಂತಾಗಿದೆ. ದಿನಪತ್ರಿಕೆ ಹಾಕುವವರು ನಡುಗುತ್ತಲೇ ಮನೆಮನೆಗೆ ಪತ್ರಿಕೆ ಹಾಕುವಂತಾಗಿದೆ. ಶಾಲಾ ಮಕ್ಕಳೂ ಸ್ವೆಟರ್ ಧರಿಸಿಯೇ ಹೊರಡಬೇಕಾದ ಅನಿವಾರ್ಯತೆ ಇದೆ.</p>.<p>ಬೆಳಿಗ್ಗೆ ಹೊತ್ತು ಅಭ್ಯಾಸ ಮಾಡುವ ಕ್ರೀಡಾಪಟುಗಳೂ ಚಳಿಗೆ ತತ್ತರಿಸಿದ್ದಾರೆ. ಕಳೆದ 4 ದಿನಗಳಿಂದ ನಡುಗಿಸುತ್ತಿರುವ ಚಳಿಯಿಂದ ಜನರು ಹೈರಣಾಗಿದ್ದಾರೆ.</p>.<p>ಜಿಲ್ಲೆಯಲ್ಲಿ ಕಾಫಿ ಕೊಯ್ಲು ನಡೆಯುತ್ತಿದ್ದು ಕಾರ್ಮಿಕರಿಗೂ ಚಳಿ ಮೈನಡುಗಿಸುತ್ತಿದೆ. ಬೇಗನೆ ಕೆಲಸ ಮುಗಿಸಿ, ಕಾರ್ಮಿಕರು ಮನೆಗೆ ತೆರಳುತ್ತಿದ್ದಾರೆ. ಕಣದಲ್ಲಿ ಕಾಫಿ ಒಣಗಿಸುವ ಕಾರ್ಮಿಕರು ಸಂಜೆ – ರಾತ್ರಿ ಬೆಂಕಿ ಹಾಕಿಕೊಂಡು ಚಳಿ ಕಾಯಿಸಿ ಕೊಳ್ಳುವ ದೃಶ್ಯ ಸಾಮಾನ್ಯ ವಾಗಿದೆ.</p>.<p>ಇಲ್ಲಿಗೆ ಬರುವ ಪ್ರವಾಸಿಗರಿಗೂ ಚಳ ಕಚಗುಳಿ ಇಟ್ಟಿದೆ. ನಸುಕಿನಲ್ಲಿ ಆವರಿಸುವ ಮಂಜಿನ ನಡುವ ರಾಜಾಸೀಟು ಸೇರಿದಂತೆ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಜನರು ಬರುತ್ತಿದ್ದಾರೆ.</p>.<p class="Briefhead"><strong>‘ಮತ್ತಷ್ಟು ಕುಸಿಯಲಿದೆ ತಾಪಮಾನ’</strong></p>.<p>ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ ಮತ್ತಷ್ಟು ಕುಸಿಯಲಿದೆ ಜತೆಗೆ ಸರಾಸರಿಗಿಂತಲೂ ಅಧಿಕ ಮಳೆ ಬೀಳಲಿದೆ ಎಂದು ಮೈಸೂರು ಸಮೀಪದ ನಾಗನಹಳ್ಳಿಯಲ್ಲಿರುವ ಭಾರತೀಯ ಹವಾಮಾನ ಇಲಾಖೆಯ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗ ತಿಳಿಸಿದೆ.</p>.<p>ನ. 23ರಿಂದ ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಗರಿಷ್ಠ ತಾಪಮಾನ 26ನ್ನು ದಾಟುವುದಿಲ್ಲ. ನ. 25ರಿಂದ ಡಿಸೆಂಬರ್ 1ರವರೆಗೂ ಸರಾಸರಿಗಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದೆ ಎಂದು ಮುನ್ಸೂಚನೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ</strong>: ದಿನದಿಂದ ದಿನಕ್ಕೆ ಕನಿಷ್ಠ ತಾಪಮಾನದಲ್ಲಿ ಇಳಿಕೆಯಾಗುತ್ತಿದ್ದು, ಕಾಫಿನಾಡಿನ ಜನತೆ ಮಾರ್ಗಶಿರ ಮಾಸಕ್ಕೂ ಮುನ್ನ ಗಡಗಡ ನಡುಗುವಂತಾಗಿದೆ. ಕಳೆದ ವರ್ಷದ ಇದೇ ಸಮಯಕ್ಕೆ ಹೋಲಿಸಿದರೆ ಈ ಬಾರಿ ಚಳಿ ಭಾರಿ ಪ್ರಮಾಣದಲ್ಲೇ ಹೆಚ್ಚಾಗಿದೆ.</p>.<p>ಸಾಮಾನ್ಯವಾಗಿ ಕಾರ್ತೀಕ ಮಾಸದ ಅಮಾವಾಸೆ ಕಳೆದ ಬಳಿಕ ಬರುವ ಮಾರ್ಗಶಿರ ಮಾಸದಲ್ಲಿ ಹೆಚ್ಚಿನ ಚಳಿ ಇರುತ್ತಿತ್ತು. ಕಳೆದ ವರ್ಷ ಡಿಸೆಂಬರ್ ಅಂತ್ಯದಲ್ಲಿ ಚಳಿ ಹೆಚ್ಚಾಗಿತ್ತು. ಆದರೆ, ಈ ಬಾರಿ ಕಾರ್ತೀಕ ಮಾಸದ ಅಂತ್ಯದ ಹೊತ್ತಿಗೆ ನಡುಗಿಸುವ ಚಳಿ ಆವರಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಚಳಿ ಹೆಚ್ಚಲಿದೆ ಎಂಬ ಮುನ್ಸೂಚನೆಯನ್ನೂ ಹವಾಮಾನ ಇಲಾಖೆ ನೀಡಿದೆ.</p>.<p>ಗೋಣಿಕೊಪ್ಪಲಿನಲ್ಲಿ 11.09 ಡಿಗ್ರಿ ಸೆಲ್ಸಿಯಸ್ನಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ. ಮಡಿಕೇರಿಯ ಉಷ್ಣಾಂಶ ಸೋಮವಾರ 13 ಡಿಗ್ರಿಗೆ ಇಳಿದಿತ್ತು.</p>.<p>ಚಳಿಯ ಜತೆಗೆ ಮಂಗಳವಾರ ರಾತ್ರಿಯಿಂದಲೇ ತುಂತುರು ಮಳೆ ಅಲ್ಲಲ್ಲಿ ಬೀಳಲಾರಂಭಿಸಿದೆ. ಇನ್ನೆರಡು ದಿನಗಳಲ್ಲಿ ಸಾಧಾರಣ ಮಳೆ ಬೀಳುವ ಸಾಧ್ಯತೆಯೂ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.</p>.<p>’ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿ ಯಿಸಿದ ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ವಿಜ್ಞಾನದ ವಿಷಯ ತಜ್ಞ ಹರೀಶ್, ‘ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಇದರಿಂದ ನ. 24ರಿಂದ ಮಳೆಯಾಗುವ ನಿರೀಕ್ಷೆ ಇದೆ. ತಾಪಮಾನವೂ ಕುಸಿತ ಕಾಣಲಿದೆ’ ಎಂದು ಹೇಳಿದರು.</p>.<p>ಕಪಾಟು ಸೇರಿದ್ದ ಸ್ವೆಟರ್, ಟೋಪಿಗಳು ಹೊರ ಬಂದಿವೆ. ವೃದ್ಧರು ಹೊರಬರಲು ಹಿಂದೇಟು ಹಾಕು ವಂತಾಗಿದೆ. ದಿನಪತ್ರಿಕೆ ಹಾಕುವವರು ನಡುಗುತ್ತಲೇ ಮನೆಮನೆಗೆ ಪತ್ರಿಕೆ ಹಾಕುವಂತಾಗಿದೆ. ಶಾಲಾ ಮಕ್ಕಳೂ ಸ್ವೆಟರ್ ಧರಿಸಿಯೇ ಹೊರಡಬೇಕಾದ ಅನಿವಾರ್ಯತೆ ಇದೆ.</p>.<p>ಬೆಳಿಗ್ಗೆ ಹೊತ್ತು ಅಭ್ಯಾಸ ಮಾಡುವ ಕ್ರೀಡಾಪಟುಗಳೂ ಚಳಿಗೆ ತತ್ತರಿಸಿದ್ದಾರೆ. ಕಳೆದ 4 ದಿನಗಳಿಂದ ನಡುಗಿಸುತ್ತಿರುವ ಚಳಿಯಿಂದ ಜನರು ಹೈರಣಾಗಿದ್ದಾರೆ.</p>.<p>ಜಿಲ್ಲೆಯಲ್ಲಿ ಕಾಫಿ ಕೊಯ್ಲು ನಡೆಯುತ್ತಿದ್ದು ಕಾರ್ಮಿಕರಿಗೂ ಚಳಿ ಮೈನಡುಗಿಸುತ್ತಿದೆ. ಬೇಗನೆ ಕೆಲಸ ಮುಗಿಸಿ, ಕಾರ್ಮಿಕರು ಮನೆಗೆ ತೆರಳುತ್ತಿದ್ದಾರೆ. ಕಣದಲ್ಲಿ ಕಾಫಿ ಒಣಗಿಸುವ ಕಾರ್ಮಿಕರು ಸಂಜೆ – ರಾತ್ರಿ ಬೆಂಕಿ ಹಾಕಿಕೊಂಡು ಚಳಿ ಕಾಯಿಸಿ ಕೊಳ್ಳುವ ದೃಶ್ಯ ಸಾಮಾನ್ಯ ವಾಗಿದೆ.</p>.<p>ಇಲ್ಲಿಗೆ ಬರುವ ಪ್ರವಾಸಿಗರಿಗೂ ಚಳ ಕಚಗುಳಿ ಇಟ್ಟಿದೆ. ನಸುಕಿನಲ್ಲಿ ಆವರಿಸುವ ಮಂಜಿನ ನಡುವ ರಾಜಾಸೀಟು ಸೇರಿದಂತೆ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಜನರು ಬರುತ್ತಿದ್ದಾರೆ.</p>.<p class="Briefhead"><strong>‘ಮತ್ತಷ್ಟು ಕುಸಿಯಲಿದೆ ತಾಪಮಾನ’</strong></p>.<p>ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ ಮತ್ತಷ್ಟು ಕುಸಿಯಲಿದೆ ಜತೆಗೆ ಸರಾಸರಿಗಿಂತಲೂ ಅಧಿಕ ಮಳೆ ಬೀಳಲಿದೆ ಎಂದು ಮೈಸೂರು ಸಮೀಪದ ನಾಗನಹಳ್ಳಿಯಲ್ಲಿರುವ ಭಾರತೀಯ ಹವಾಮಾನ ಇಲಾಖೆಯ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗ ತಿಳಿಸಿದೆ.</p>.<p>ನ. 23ರಿಂದ ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಗರಿಷ್ಠ ತಾಪಮಾನ 26ನ್ನು ದಾಟುವುದಿಲ್ಲ. ನ. 25ರಿಂದ ಡಿಸೆಂಬರ್ 1ರವರೆಗೂ ಸರಾಸರಿಗಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದೆ ಎಂದು ಮುನ್ಸೂಚನೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>