<p><strong>ಕುಶಾಲನಗರ</strong>: ಪಟ್ಟಣದಲ್ಲಿ ಕೊಡಗು ಜಿಲ್ಲಾ ಸೀರ್ವಿ ಸಮಾಜ ಹಾಗೂ ರಾಜಸ್ಥಾನ ಮೂಲದವರು ಶುಕ್ರವಾರ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.</p>.<p>ಇಲ್ಲಿನ ಮಾರುಕಟ್ಟೆ ರಸ್ತೆಯಲ್ಲಿರುವ ಶ್ರೀಮಾತಾ ದೇವಸ್ಥಾನದ ಸಮುದಾಯದ ಭವನದಲ್ಲಿ ಹೋಳಿ ಹಬ್ಬದ ಅಂಗವಾಗಿ ಸಮಾಜದವರು ಪರಸ್ಪರ ಬಣ್ಣ ಎರಚಿ, ಸಿಹಿ ವಿತರಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.</p>.<p>ಬಣ್ಣದ ಹೋಳಿ ಆಚರಣೆ ಮುನ್ನ ದಿನ ರಾತ್ರಿ ‘ಹೋಳಿಕಾ ದಹನ’ ಕಾರ್ಯಕ್ರಮ ನಡೆಯಿತು. ಶುಕ್ರವಾರ ಬೆಳಗ್ಗೆ ಚಾಮುಂಡಿ ಪೂಜೆ, ಸಾಂಪ್ರದಾಯಿಕ ಡೂಂಡ್ ಆಚರಣೆ ಸೇರಿದಂತೆ ಭಜನೆ, ಪ್ರಾರ್ಥನೆ ನಡೆಯಿತು.</p>.<p>ಸಮುದಾಯವರು ಪರಸ್ಪರ ಬಣ್ಣ ಹಚ್ಚಿ, ಬಣ್ಣದ ನೀರಿನ ಓಕುಳಿ ಆಟವಾಡಿ ಹಬ್ಬದ ಶುಭಾಶಯ ಕೋರಿ ನೃತ್ಯ ಮಾಡಿ ಸಂಭ್ರಮಿಸಿದರು. ತಮ್ಮ ದೈನಂದಿನ ವಹಿವಾಟು ಬದಿಗೊತ್ತಿ ಸಾಮೂಹಿಕ ಸಹಭೋಜನ ಮೂಲಕ ಹೋಳಿ ಹಬ್ಬ ಆಚರಿಸಿದರು.</p>.<p>ಕೂಡಿಗೆ, ಹೆಬ್ಬಾಲೆ, ಮಂಜೂರು ಗ್ರಾಮದಲ್ಲಿ ಕೂಡ ರಾಜಸ್ಥಾನದವರು ಪರಸ್ಪರ ಬಣ್ಣ ಎರಚಿ, ಸಿಹಿ ವಿತರಣೆ ಮಾಡಿ ಸಂಭ್ರಮಿಸಿದರು.</p><p>ಈ ಸಂದರ್ಭ ಸಮಾಜದ ಅಧ್ಯಕ್ಷ ಕಿಶನ್ ಲಾಲ್, ಪ್ರಮುಖರಾದ ಓಂಪ್ರಕಾಶ್, ದಿನೇಶ್, ರಾಜೇಶ್, ರಾಜುರಾಂ, ಖಾನಾರಾಂ, ಧರ್ಮಿಚಂದ್, ನೇಮಿಚಂದ್, ಮೋಹನ್ ಲಾಲ್, ಅನಿತಾ, ಕಂಚನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಶಾಲನಗರ</strong>: ಪಟ್ಟಣದಲ್ಲಿ ಕೊಡಗು ಜಿಲ್ಲಾ ಸೀರ್ವಿ ಸಮಾಜ ಹಾಗೂ ರಾಜಸ್ಥಾನ ಮೂಲದವರು ಶುಕ್ರವಾರ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.</p>.<p>ಇಲ್ಲಿನ ಮಾರುಕಟ್ಟೆ ರಸ್ತೆಯಲ್ಲಿರುವ ಶ್ರೀಮಾತಾ ದೇವಸ್ಥಾನದ ಸಮುದಾಯದ ಭವನದಲ್ಲಿ ಹೋಳಿ ಹಬ್ಬದ ಅಂಗವಾಗಿ ಸಮಾಜದವರು ಪರಸ್ಪರ ಬಣ್ಣ ಎರಚಿ, ಸಿಹಿ ವಿತರಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.</p>.<p>ಬಣ್ಣದ ಹೋಳಿ ಆಚರಣೆ ಮುನ್ನ ದಿನ ರಾತ್ರಿ ‘ಹೋಳಿಕಾ ದಹನ’ ಕಾರ್ಯಕ್ರಮ ನಡೆಯಿತು. ಶುಕ್ರವಾರ ಬೆಳಗ್ಗೆ ಚಾಮುಂಡಿ ಪೂಜೆ, ಸಾಂಪ್ರದಾಯಿಕ ಡೂಂಡ್ ಆಚರಣೆ ಸೇರಿದಂತೆ ಭಜನೆ, ಪ್ರಾರ್ಥನೆ ನಡೆಯಿತು.</p>.<p>ಸಮುದಾಯವರು ಪರಸ್ಪರ ಬಣ್ಣ ಹಚ್ಚಿ, ಬಣ್ಣದ ನೀರಿನ ಓಕುಳಿ ಆಟವಾಡಿ ಹಬ್ಬದ ಶುಭಾಶಯ ಕೋರಿ ನೃತ್ಯ ಮಾಡಿ ಸಂಭ್ರಮಿಸಿದರು. ತಮ್ಮ ದೈನಂದಿನ ವಹಿವಾಟು ಬದಿಗೊತ್ತಿ ಸಾಮೂಹಿಕ ಸಹಭೋಜನ ಮೂಲಕ ಹೋಳಿ ಹಬ್ಬ ಆಚರಿಸಿದರು.</p>.<p>ಕೂಡಿಗೆ, ಹೆಬ್ಬಾಲೆ, ಮಂಜೂರು ಗ್ರಾಮದಲ್ಲಿ ಕೂಡ ರಾಜಸ್ಥಾನದವರು ಪರಸ್ಪರ ಬಣ್ಣ ಎರಚಿ, ಸಿಹಿ ವಿತರಣೆ ಮಾಡಿ ಸಂಭ್ರಮಿಸಿದರು.</p><p>ಈ ಸಂದರ್ಭ ಸಮಾಜದ ಅಧ್ಯಕ್ಷ ಕಿಶನ್ ಲಾಲ್, ಪ್ರಮುಖರಾದ ಓಂಪ್ರಕಾಶ್, ದಿನೇಶ್, ರಾಜೇಶ್, ರಾಜುರಾಂ, ಖಾನಾರಾಂ, ಧರ್ಮಿಚಂದ್, ನೇಮಿಚಂದ್, ಮೋಹನ್ ಲಾಲ್, ಅನಿತಾ, ಕಂಚನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>