ಕೊಪ್ಪದಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ವಾಹನದಲ್ಲಿ ದಾಖಲೆ ರಹಿತ ನಗದು ಪತ್ತೆಯಾಯಿತು. ದಾವಾ ನುಬು ಎಂಬುವರ ಬಳಿಯಿದ್ದ ಹಣವನ್ನು ಚುನಾವಣಾಧಿಕಾರಿ ಪೂವಯ್ಯ ನೇತೃತ್ವದಲ್ಲಿ ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ತಪಾಸಣಾ ಕೇಂದ್ರದ ಪೊಲೀಸ್ ಸಿಬ್ಬಂದಿ ಉಮಾ, ಅರುಣ್, ಶಶಿಕುಮಾರ್, ಜಯಪ್ರಕಾಶ್ ಇದ್ದರು.