ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಗೆಲುವಿಗೆ ಮೈಸೂರಿನ 6 ಕ್ಷೇತ್ರಗಳಿಗೂ ಹೆಚ್ಚು ಲೀಡ್ ಕೊಟ್ಟಿದ್ದು ಕೊಡಗು ಜಿಲ್ಲೆ. ಹೀಗಾಗಿ, ಕಾಂಗ್ರೆಸ್ ಇಲ್ಲಿ ಸಂಪೂರ್ಣ ವಿಫಲವಾಗಿತ್ತು. ಇದರ ಬೆನ್ನಲ್ಲೇ ಬಂದ ರಾಜ್ಯ ವಿಧಾನಪರಿಷತ್ತಿನ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲೂ ಕಾಂಗ್ರೆಸ್ ನಿರಾಶದಾಯಕ ಪ್ರದರ್ಶನ ನೀಡಿದೆ. ಪಕ್ಷದ ಅಭ್ಯರ್ಥಿ, ಕೊಡಗಿನ ಕೆ.ಕೆ.ಮಂಜುನಾಥ್ಕುಮಾರ್ ಸೋಲು, ಕಾಂಗ್ರೆಸ್ಗೆ 2ನೇ ಸತತ ಸೋಲು.