<p><strong>ಮಡಿಕೇರಿ:</strong> ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶುಕ್ರವಾರ ವೈವಿಧ್ಯಮಯವಾದ ನೃತ್ಯ ಪ್ರದರ್ಶನಗೊಂಡವು.</p>.<p>ಮೊದಲಿಗೆ ಕುಶಾಲನಗರದ ಕುಂದನ ನೃತ್ಯಾಲಯದಿಂದ ನೃತ್ಯ ವೈವಿಧ್ಯವು ಇಡೀ ಕಾರ್ಯಕ್ರಮಕ್ಕೆ ಶಾಸ್ತ್ರೀಯ ಮುನ್ನುಡಿ ಬರೆಯಿತು. ಒಂದರ ಮೇಲೊಂದರಂತೆ ಕಲಾವಿದರು ವೇದಿಕೆಯಲ್ಲಿ ಪ್ರದರ್ಶಿಸಿದ ಶಾಸ್ತ್ರೀಯ ನೃತ್ಯಗಳು ನಾಟ್ಯಲೋಕವನ್ನೇ ಸೃಷ್ಟಿಸಿತು.</p>.<p>ನಂತರ ಕುಶಾಲನಗರದ ಶಿವಾಧಾರೆ ಸ್ಕೂಲ್ ಆಫ್ ಡ್ಯಾನ್ಸ್ ಸಂಸ್ಥೆಯ ಕಲಾವಿದರು ಸಾಂಸ್ಕೃತಿಕ ವೈಭವವನ್ನು ಪ್ರಸ್ತುತಪಡಿಸಿದರು.</p>.<p>ಮಡಿಕೇರಿಯ ಪೊಮ್ಮಾಲೆ ಪೊಮ್ಮಕ್ಕಡ ಕೂಟದವರು ಪ್ರದರ್ಶಿಸಿದ ನೃತ್ಯ ವೈವಿಧ್ಯವು ಜನಮನಸೂರೆಗೊಂಡಿತು. ಕೊಡಗಿನ ಸಾಂಸ್ಕೃತಿಕ ರಂಗನ್ನು ತುಂಬಿತು.</p>.<p>ಕುಶಾಲನಗರದ ಭಾರತೀಯ ಸಂಗೀತ ನೃತ್ಯ ಕಲಾ ಶಾಲೆಯ ಕಲಾವಿದರು ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸಿದರು. ಕನ್ನಡ ಸಿರಿ ಕಲಾವೃಂದದ ಕಲಾವಿದರು ನೀಡಿದ ಸಂಗೀತ ರಸಮಂಜರಿಯು ಪ್ರೇಕ್ಷಕರನ್ನು ಗಾನದ ಅಲೆಯಲ್ಲಿ ತೇಲುವಂತೆ ಮಾಡಿತು.</p>.<p>ಮಡಿಕೇರಿಯ ‘ಡ್ರೀಮ್ ಅಚೀವರ್ಸ್’ ಮೂರ್ನಾಡುವಿನ ‘ಸ್ಟೆಪ್ ಆಫ್ ಶ್ಯಾಡೊ ಡ್ಯಾನ್ಸ್’ತಂಡದವರೂ ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.</p>.<p>ಕಾರ್ಯಕ್ರಮದಲ್ಲಿ ಮಾತನಾಡಿದ ಜನಪದ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ, ‘ನಿರಾಕಾರವನ್ನು ಅರ್ಥಮಾಡಿಕೊಂಡು ಆಂತರ್ಯದಲ್ಲಿ ಆರಾಧಿಸಬೇಕು. ಆಂತರ್ಯದಲ್ಲೇ ಭಗವಂತ ಇದ್ದಾನೆ. ಇದು ಸರ್ವಧರ್ಮದ ಆಚರಣೆ ಆಗಲಿ’ ಎಂದು ಹೇಳಿದರು.</p>.<p>ಕಾಂಗ್ರೆಸ್ನ ಹಿರಿಯ ಮುಖಂಡರಾದ ಕೆ.ಪಿ.ಚಂದ್ರಕಲಾ ಅವರು, ‘ಮೈಸೂರು ದಸರೆಗೆ ಕಡಿಮೆ ಇಲ್ಲ. ದೀಪಾಲಂಕಾರ ಚೆನ್ನಾಗಿದೆ’ ಎಂದರು.</p>.<p>ಮುಖಂಡ ಎಚ್.ಎಂ.ನಂದಕುಮಾರ್ ಮಾತಾಡಿ, ‘ಇದು ನಾಡಹಬ್ಬ, ಜಾತಿ, ಧರ್ಮ ಮೀರಿದ ಏಕತೆ, ಭಾವೈಕ್ಯತೆಯಿಂದ ಹಬ್ಬ ಆಚರಿಸುವ’ ಎಂದು ಹೇಳಿದರು.</p>.<p>‘ಮುಡಾ’ ಅಧ್ಯಕ್ಷ ಬಿ.ವೈ.ರಾಜೇಶ್ ಅವರು ‘ಮಡಿಕೇರಿ ದಸರಾ ಬದಲಾವಣೆ ಪರ್ವ ಕಾಣುತ್ತಿದೆ’ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶುಕ್ರವಾರ ವೈವಿಧ್ಯಮಯವಾದ ನೃತ್ಯ ಪ್ರದರ್ಶನಗೊಂಡವು.</p>.<p>ಮೊದಲಿಗೆ ಕುಶಾಲನಗರದ ಕುಂದನ ನೃತ್ಯಾಲಯದಿಂದ ನೃತ್ಯ ವೈವಿಧ್ಯವು ಇಡೀ ಕಾರ್ಯಕ್ರಮಕ್ಕೆ ಶಾಸ್ತ್ರೀಯ ಮುನ್ನುಡಿ ಬರೆಯಿತು. ಒಂದರ ಮೇಲೊಂದರಂತೆ ಕಲಾವಿದರು ವೇದಿಕೆಯಲ್ಲಿ ಪ್ರದರ್ಶಿಸಿದ ಶಾಸ್ತ್ರೀಯ ನೃತ್ಯಗಳು ನಾಟ್ಯಲೋಕವನ್ನೇ ಸೃಷ್ಟಿಸಿತು.</p>.<p>ನಂತರ ಕುಶಾಲನಗರದ ಶಿವಾಧಾರೆ ಸ್ಕೂಲ್ ಆಫ್ ಡ್ಯಾನ್ಸ್ ಸಂಸ್ಥೆಯ ಕಲಾವಿದರು ಸಾಂಸ್ಕೃತಿಕ ವೈಭವವನ್ನು ಪ್ರಸ್ತುತಪಡಿಸಿದರು.</p>.<p>ಮಡಿಕೇರಿಯ ಪೊಮ್ಮಾಲೆ ಪೊಮ್ಮಕ್ಕಡ ಕೂಟದವರು ಪ್ರದರ್ಶಿಸಿದ ನೃತ್ಯ ವೈವಿಧ್ಯವು ಜನಮನಸೂರೆಗೊಂಡಿತು. ಕೊಡಗಿನ ಸಾಂಸ್ಕೃತಿಕ ರಂಗನ್ನು ತುಂಬಿತು.</p>.<p>ಕುಶಾಲನಗರದ ಭಾರತೀಯ ಸಂಗೀತ ನೃತ್ಯ ಕಲಾ ಶಾಲೆಯ ಕಲಾವಿದರು ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸಿದರು. ಕನ್ನಡ ಸಿರಿ ಕಲಾವೃಂದದ ಕಲಾವಿದರು ನೀಡಿದ ಸಂಗೀತ ರಸಮಂಜರಿಯು ಪ್ರೇಕ್ಷಕರನ್ನು ಗಾನದ ಅಲೆಯಲ್ಲಿ ತೇಲುವಂತೆ ಮಾಡಿತು.</p>.<p>ಮಡಿಕೇರಿಯ ‘ಡ್ರೀಮ್ ಅಚೀವರ್ಸ್’ ಮೂರ್ನಾಡುವಿನ ‘ಸ್ಟೆಪ್ ಆಫ್ ಶ್ಯಾಡೊ ಡ್ಯಾನ್ಸ್’ತಂಡದವರೂ ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.</p>.<p>ಕಾರ್ಯಕ್ರಮದಲ್ಲಿ ಮಾತನಾಡಿದ ಜನಪದ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ, ‘ನಿರಾಕಾರವನ್ನು ಅರ್ಥಮಾಡಿಕೊಂಡು ಆಂತರ್ಯದಲ್ಲಿ ಆರಾಧಿಸಬೇಕು. ಆಂತರ್ಯದಲ್ಲೇ ಭಗವಂತ ಇದ್ದಾನೆ. ಇದು ಸರ್ವಧರ್ಮದ ಆಚರಣೆ ಆಗಲಿ’ ಎಂದು ಹೇಳಿದರು.</p>.<p>ಕಾಂಗ್ರೆಸ್ನ ಹಿರಿಯ ಮುಖಂಡರಾದ ಕೆ.ಪಿ.ಚಂದ್ರಕಲಾ ಅವರು, ‘ಮೈಸೂರು ದಸರೆಗೆ ಕಡಿಮೆ ಇಲ್ಲ. ದೀಪಾಲಂಕಾರ ಚೆನ್ನಾಗಿದೆ’ ಎಂದರು.</p>.<p>ಮುಖಂಡ ಎಚ್.ಎಂ.ನಂದಕುಮಾರ್ ಮಾತಾಡಿ, ‘ಇದು ನಾಡಹಬ್ಬ, ಜಾತಿ, ಧರ್ಮ ಮೀರಿದ ಏಕತೆ, ಭಾವೈಕ್ಯತೆಯಿಂದ ಹಬ್ಬ ಆಚರಿಸುವ’ ಎಂದು ಹೇಳಿದರು.</p>.<p>‘ಮುಡಾ’ ಅಧ್ಯಕ್ಷ ಬಿ.ವೈ.ರಾಜೇಶ್ ಅವರು ‘ಮಡಿಕೇರಿ ದಸರಾ ಬದಲಾವಣೆ ಪರ್ವ ಕಾಣುತ್ತಿದೆ’ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>