<p><strong>ಸೋಮವಾರಪೇಟೆ:</strong> ಮಾಗಡಿ - ಜಾಲ್ಸುರು ರಾಜ್ಯ ಹೆದ್ದಾರಿ 85 ರ ಅಲೆಕಟ್ಟೆ - ತೋಳುರುಶೆಟ್ಟಳ್ಳಿ - ಕೂತಿ ಮಾರ್ಗ ರಸ್ತೆಯ ಸುಮಾರು ₹ 20 ಕೋಟಿ ವೆಚ್ಚದ ರಸ್ತೆ ವಿಸ್ತರಣೆ ಹಾಗೂ ಡಾಂಬರೀಕರಣ ಕೆಲಸ ತಡವಾಗುತ್ತಿರುವ ಬಗ್ಗೆ ತಾಲ್ಲೂಕು ಅಭಿವೃದ್ದಿ ಹೋರಾಟ ಸಮಿತಿ ಹಾಗೂ ಕೂತಿ, ತೋಳೂರುಶೆಟ್ಟಳ್ಳಿ ಗ್ರಾಮಸ್ಥರ ಸಮ್ಮುಖದಲ್ಲಿ ಸೋಮವಾರ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲ ಎಂಜಿನಿಯರ್ ಕಚೇರಿಯಲ್ಲಿ ಸಭೆ ನಡೆಯಿತು.</p>.<p>ಸಮಿತಿಯ ಅರುಣ್ ಕೊತ್ನಳ್ಳಿ ಮಾತನಾಡಿ, ‘ಕೂತಿ ಮಾರ್ಗದ ಅಲೆಕಟ್ಟೆ - ಹರಪಳ್ಳಿವರೆಗೆ 8 ಕಿ.ಮೀ ರಸ್ತೆಯನ್ನು ಜನವರಿ ತಿಂಗಳಿನಲ್ಲಿ ಮ್ಯಾಪಿಂಗ್ ಮಾಡಲಾಗಿದೆ. ಆದರೆ, 2.3 ಕಿ.ಮೀ ರಸ್ತೆಯಲ್ಲಿ ಮಾತ್ರ ಕೆಲಸ ನಡೆಯುತ್ತಿದೆ. ತಕ್ಷಣದಿಂದಲೆ ಇದನ್ನು ನಿಲ್ಲಿಸಿ ಯೋಜನಾ ವರದಿಯಂತೆ ಕಾಮಗಾರಿ ಮಾಡಬೇಕು’ ಎಂದು ಅಗ್ರಹಿಸಿದರು.</p>.<p>ಸಾಮಾಜಿಕ ಕಾರ್ಯಕರ್ತ ಬಗ್ಗನ ಅನಿಲ್ ಮಾತನಾಡಿ, ‘ರಸ್ತೆ ಸರಿಯಾಗಿ ವಿಸ್ತರಣೆ ಮಾಡಿಲ್ಲ. ರಸ್ತೆಯನ್ನು ಸಮತಟ್ಟು ಮಾಡದೇ ಸರಿಯಾದ ಪ್ರಮಾಣದಲ್ಲಿ ವೆಟ್ ಮಿಕ್ಸ್ ಹಾಕದೆ ಕಳಪೆಯ ವೇಟ್ ಮಿಕ್ಸ್ ಹಾಕಿ ಕೆಲಸ ಮಾಡಲಾಗುತ್ತಿದೆ’ ಎಂದು ದೂರಿದರು.</p>.<p>ಕಾರ್ಯಪಾಲ ಎಂಜಿನಿಯರ್ ವೆಂಕಟೇಶ್ ನಾಯಕ ಮಾತನಾಡಿ, ‘ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲನೆ ನಡೆಸಲಾಗಿದೆ. ತಕ್ಷಣದಿಂದಲೆ ಸರಿಪಡಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಮೇ 14ರಂದು ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಸಿ ಸ್ಥಳೀಯ ಗ್ರಾಮಸ್ಥರ ಸಮುಖದಲ್ಲಿ ಚರ್ಚೆ ನಡೆಸಿ ಪರಿಶೀಲನೆ ಮಾಡಲಾಗುವುದು’ ಎಂದರು.</p>.<p>ಈ ವೇಳೆ ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಆದರ್ಶ್, ಜೀವನ್, ಕೂತಿ ಗ್ರಾಮದ ಅಧ್ಯಕ್ಷ ಎಚ್.ಎಂ.ಜಯರಾಮ್, ಕೆ.ಡಿ.ಗಿರೀಶ್, ಯಾದವ್ ಕುಮಾರ್, ಕೆ.ಸಿ.ಉದಯ್ ಕುಮಾರ್, ಎಚ್.ಡಿ.ಮೋಹನ್ ತೋಳೂರುಶೆಟ್ಟಳ್ಳಿಯ ಸಿ.ಕೆ.ಶಿವಕುಮಾರ್, ಮಾಚಯ್ಯ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೋಮವಾರಪೇಟೆ:</strong> ಮಾಗಡಿ - ಜಾಲ್ಸುರು ರಾಜ್ಯ ಹೆದ್ದಾರಿ 85 ರ ಅಲೆಕಟ್ಟೆ - ತೋಳುರುಶೆಟ್ಟಳ್ಳಿ - ಕೂತಿ ಮಾರ್ಗ ರಸ್ತೆಯ ಸುಮಾರು ₹ 20 ಕೋಟಿ ವೆಚ್ಚದ ರಸ್ತೆ ವಿಸ್ತರಣೆ ಹಾಗೂ ಡಾಂಬರೀಕರಣ ಕೆಲಸ ತಡವಾಗುತ್ತಿರುವ ಬಗ್ಗೆ ತಾಲ್ಲೂಕು ಅಭಿವೃದ್ದಿ ಹೋರಾಟ ಸಮಿತಿ ಹಾಗೂ ಕೂತಿ, ತೋಳೂರುಶೆಟ್ಟಳ್ಳಿ ಗ್ರಾಮಸ್ಥರ ಸಮ್ಮುಖದಲ್ಲಿ ಸೋಮವಾರ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲ ಎಂಜಿನಿಯರ್ ಕಚೇರಿಯಲ್ಲಿ ಸಭೆ ನಡೆಯಿತು.</p>.<p>ಸಮಿತಿಯ ಅರುಣ್ ಕೊತ್ನಳ್ಳಿ ಮಾತನಾಡಿ, ‘ಕೂತಿ ಮಾರ್ಗದ ಅಲೆಕಟ್ಟೆ - ಹರಪಳ್ಳಿವರೆಗೆ 8 ಕಿ.ಮೀ ರಸ್ತೆಯನ್ನು ಜನವರಿ ತಿಂಗಳಿನಲ್ಲಿ ಮ್ಯಾಪಿಂಗ್ ಮಾಡಲಾಗಿದೆ. ಆದರೆ, 2.3 ಕಿ.ಮೀ ರಸ್ತೆಯಲ್ಲಿ ಮಾತ್ರ ಕೆಲಸ ನಡೆಯುತ್ತಿದೆ. ತಕ್ಷಣದಿಂದಲೆ ಇದನ್ನು ನಿಲ್ಲಿಸಿ ಯೋಜನಾ ವರದಿಯಂತೆ ಕಾಮಗಾರಿ ಮಾಡಬೇಕು’ ಎಂದು ಅಗ್ರಹಿಸಿದರು.</p>.<p>ಸಾಮಾಜಿಕ ಕಾರ್ಯಕರ್ತ ಬಗ್ಗನ ಅನಿಲ್ ಮಾತನಾಡಿ, ‘ರಸ್ತೆ ಸರಿಯಾಗಿ ವಿಸ್ತರಣೆ ಮಾಡಿಲ್ಲ. ರಸ್ತೆಯನ್ನು ಸಮತಟ್ಟು ಮಾಡದೇ ಸರಿಯಾದ ಪ್ರಮಾಣದಲ್ಲಿ ವೆಟ್ ಮಿಕ್ಸ್ ಹಾಕದೆ ಕಳಪೆಯ ವೇಟ್ ಮಿಕ್ಸ್ ಹಾಕಿ ಕೆಲಸ ಮಾಡಲಾಗುತ್ತಿದೆ’ ಎಂದು ದೂರಿದರು.</p>.<p>ಕಾರ್ಯಪಾಲ ಎಂಜಿನಿಯರ್ ವೆಂಕಟೇಶ್ ನಾಯಕ ಮಾತನಾಡಿ, ‘ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲನೆ ನಡೆಸಲಾಗಿದೆ. ತಕ್ಷಣದಿಂದಲೆ ಸರಿಪಡಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಮೇ 14ರಂದು ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಸಿ ಸ್ಥಳೀಯ ಗ್ರಾಮಸ್ಥರ ಸಮುಖದಲ್ಲಿ ಚರ್ಚೆ ನಡೆಸಿ ಪರಿಶೀಲನೆ ಮಾಡಲಾಗುವುದು’ ಎಂದರು.</p>.<p>ಈ ವೇಳೆ ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಆದರ್ಶ್, ಜೀವನ್, ಕೂತಿ ಗ್ರಾಮದ ಅಧ್ಯಕ್ಷ ಎಚ್.ಎಂ.ಜಯರಾಮ್, ಕೆ.ಡಿ.ಗಿರೀಶ್, ಯಾದವ್ ಕುಮಾರ್, ಕೆ.ಸಿ.ಉದಯ್ ಕುಮಾರ್, ಎಚ್.ಡಿ.ಮೋಹನ್ ತೋಳೂರುಶೆಟ್ಟಳ್ಳಿಯ ಸಿ.ಕೆ.ಶಿವಕುಮಾರ್, ಮಾಚಯ್ಯ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>