ಈ ಕಥಾವಸ್ತುವಿನೊಳಗೆ ದೇವ, ದಾನವರು, ಪ್ರಾಣಿಗಳು ಬರುತ್ತಾರೆ. ಬ್ರಹ್ಮ, ವಿಷ್ಣು, ಈಶ್ವರ, ಪಾರ್ವತಿ, ಗಣಪತಿ, ಸಿಂಧೂರ, ನಂದಿ ಹೀಗೆ ಒಟ್ಟು 24 ಕಲಾಕೃತಿಗಳು ಇರಲಿವೆ. ಇವೆಲ್ಲವೂ ಮಹಾ ಗಣಪತಿಗೆ ಸಿಂಧೂರ ಎಂಬ ಹೆಸರು ಏಕೆ ಬಂತು ಎಂಬ ಕಥೆಯನ್ನು ಸೊಗಸಾಗಿ ಕಟ್ಟಿಕೊಡಲಿದೆ ಎಂದು ಸಮಿತಿ ಅಧ್ಯಕ್ಷ ಎಂ.ಜಿ.ಚಂದ್ರು ‘ಪ್ರಜಾವಾಣಿ’ಗೆ ತಿಳಿಸಿದರು.