<p><strong>ಮಡಿಕೇರಿ:</strong> ‘ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪಾಲಂಗಾಲ ಸಮೀಪದ ದಟ್ಟ ಅರಣ್ಯದೊಳಗೆ ಭೂಕುಸಿತ ಸಂಭವಿಸಿದೆ’ ಎಂಬ ವಿಡಿಯೊಗಳು ಶುಕ್ರವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ಆತಂಕ ಸೃಷ್ಟಿಸಿತ್ತು. ಆದರೆ, ‘ಇದು ದೊಡ್ಡ ಪ್ರಮಾಣದ ಭೂಕುಸಿತ ಅಲ್ಲ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.</p>.<p>‘ಈ ಪ್ರದೇಶ ಅರಣ್ಯ ವ್ಯಾಪ್ತಿಯ ಹೊರಗಿದ್ದು, ಅಲ್ಲಿ ಗುಡ್ಡದ ಮೇಲಿಂದ ರಭಸವಾಗಿ ನೀರು ಹರಿದು ಕೆಲವೊಂದು ಮರಗಳನ್ನು ಕೊಚ್ಚಿಕೊಂಡು ಬಂದಿದೆ’ ಎಂದು ವಿರಾಜಪೇಟೆ ವಿಭಾಗದ ಡಿಸಿಎಫ್ ಜಗನ್ನಾಥ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಮೇಲ್ನೋಟಕ್ಕೆ ಭೂಕುಸಿತದಂತೆ ಕಾಣುತ್ತದೆ. ಸುಮಾರು 1 ಕಿ.ಮೀ ದೂರದ ಸರ್ಕಾರಿ ಭೂಮಿಯಲ್ಲಿ ರಭಸವಾಗಿ ನೀರು ಹರಿದಿದೆ. ನೀರಿನೊಂದಿಗೆ ಮಣ್ಣು, ಕಲ್ಲು, ಮರ, ಗಿಡ ಕೊಚ್ಚಿಕೊಂಡು ಬಂದಿವೆ. ಆತಂಕಪಡುವ ಅಗತ್ಯವಿಲ್ಲ’ ಎಂದು ಸ್ಥಳಕ್ಕೆ ತೆರಳಿದ್ದ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.</p>.<p>ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಮಳೆ ಇಳಿಕೆಯಾಗಿದೆ. ಸಂಪಾಜೆಯಲ್ಲಿ 5 ಸೆಂ.ಮೀ, ಮಡಿಕೇರಿ 2.3, ಭಾಗಮಂಡಲದಲ್ಲಿ 2.2 ಸೆಂ.ಮೀನಷ್ಟು ಮಳೆ ಸುರಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ‘ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪಾಲಂಗಾಲ ಸಮೀಪದ ದಟ್ಟ ಅರಣ್ಯದೊಳಗೆ ಭೂಕುಸಿತ ಸಂಭವಿಸಿದೆ’ ಎಂಬ ವಿಡಿಯೊಗಳು ಶುಕ್ರವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ಆತಂಕ ಸೃಷ್ಟಿಸಿತ್ತು. ಆದರೆ, ‘ಇದು ದೊಡ್ಡ ಪ್ರಮಾಣದ ಭೂಕುಸಿತ ಅಲ್ಲ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.</p>.<p>‘ಈ ಪ್ರದೇಶ ಅರಣ್ಯ ವ್ಯಾಪ್ತಿಯ ಹೊರಗಿದ್ದು, ಅಲ್ಲಿ ಗುಡ್ಡದ ಮೇಲಿಂದ ರಭಸವಾಗಿ ನೀರು ಹರಿದು ಕೆಲವೊಂದು ಮರಗಳನ್ನು ಕೊಚ್ಚಿಕೊಂಡು ಬಂದಿದೆ’ ಎಂದು ವಿರಾಜಪೇಟೆ ವಿಭಾಗದ ಡಿಸಿಎಫ್ ಜಗನ್ನಾಥ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಮೇಲ್ನೋಟಕ್ಕೆ ಭೂಕುಸಿತದಂತೆ ಕಾಣುತ್ತದೆ. ಸುಮಾರು 1 ಕಿ.ಮೀ ದೂರದ ಸರ್ಕಾರಿ ಭೂಮಿಯಲ್ಲಿ ರಭಸವಾಗಿ ನೀರು ಹರಿದಿದೆ. ನೀರಿನೊಂದಿಗೆ ಮಣ್ಣು, ಕಲ್ಲು, ಮರ, ಗಿಡ ಕೊಚ್ಚಿಕೊಂಡು ಬಂದಿವೆ. ಆತಂಕಪಡುವ ಅಗತ್ಯವಿಲ್ಲ’ ಎಂದು ಸ್ಥಳಕ್ಕೆ ತೆರಳಿದ್ದ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.</p>.<p>ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಮಳೆ ಇಳಿಕೆಯಾಗಿದೆ. ಸಂಪಾಜೆಯಲ್ಲಿ 5 ಸೆಂ.ಮೀ, ಮಡಿಕೇರಿ 2.3, ಭಾಗಮಂಡಲದಲ್ಲಿ 2.2 ಸೆಂ.ಮೀನಷ್ಟು ಮಳೆ ಸುರಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>