<p><strong>ಕೋಲಾರ</strong>: ಚೆನ್ನೈ–ಬೆಂಗಳೂರು ಎಕ್ಸ್ಪ್ರೆಸ್ ವೇ ಕಾರಿಡಾರ್ನಲ್ಲಿ ಸಂಭವಿಸಿದ ಅಪಘಾತವನ್ನೇ ಬಂಡವಾಳವಾಗಿಸಿಕೊಂಡು ಗಾಯಾಳುಗಳನ್ನು ಸಾಗಿಸಲು ಹೆಚ್ಚು ಹಣ ಪಡೆದಿರುವುದಕ್ಕೆ ಅಕ್ರೋಶ ವ್ಯಕ್ತವಾಗಿದೆ.</p>.<p>ತುರ್ತು ಸಂದರ್ಭ ಬಳಸಿಕೊಂಡು ಮನಬಂದಂತೆ ಹಣ ಕಿತ್ತುಕೊಳ್ಳುವ ದಂಧೆಯಲ್ಲಿ ತೊಡಗಿದ್ದಾರೆ ಎಂದು ಗಾಯಾಳು ಸಂಬಂಧಿಸಿಕರು ಆರೋಪಿಸಿದ್ದಾರೆ.</p>.<p>ಬಂಗಾರಪೇಟೆ ತಾಲ್ಲೂಕಿನ ಕಲ್ಕೆರೆ ಬಳಿ ಕಾರಿಡಾರ್ನಲ್ಲಿ ಸೋಮವಾರ ರಾತ್ರಿ ಟೆಂಪೊಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟು, 22 ಮಂದಿ ಗಾಯಗೊಂಡಿದ್ದರು. ವಿಷಯ ತಿಳಿದ ಕೂಡಲೇ ಬಂಗಾರಪೇಟೆಯಿಂದ 2 ಖಾಸಗಿ ಆ್ಯಂಬುಲೆನ್ಸ್, 2 ಸರ್ಕಾರಿ ಆ್ಯಂಬುಲೆನ್ಸ್ ಸ್ಥಳಕ್ಕೆ ತೆರಳಿವೆ. ಅಲ್ಲದೆ, ಟೋಲ್ಗೆ ಸಂಬಂಧಿಸಿದ 1 ಆ್ಯಂಬುಲೆನ್ಸ್ ಮತ್ತು ಬೊಲೆರೊ ವಾಹನ ಬಂದಿವೆ. ಮೃತ ದೇಹಗಳನ್ನು ಬೊಲೆರೊ ವಾಹನದಲ್ಲಿ ಹಾಕಿಕೊಂಡು ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಗೆ ತರಲಾಯಿತು.</p>.<p>ಗಾಯಗೊಂಡಿದ್ದವರನ್ನು ಮೊದಲು ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಕೆಲವರನ್ನು ಕೋಲಾರದ ಎಸ್ಎನ್ಆರ್ ಜಿಲ್ಲಾಸ್ಪತ್ರೆಗೆ ತರಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಕರೆದೊಯ್ಯಲಾಯಿತು.</p>.<p>ಬಂಗಾರಪೇಟೆಯಿಂದ 3 ಖಾಸಗಿ ಆ್ಯಂಬುಲೆನ್ಸ್ಗಳು ಎಸ್ಎನ್ಆರ್ ಆಸ್ಪತ್ರೆಗೆ ಬಂದಿದ್ದು, ಇಲ್ಲಿಂದ ಪುನಃ ಕೋಲಾರದ 3 ಆ್ಯಂಬುಲೆನ್ಸ್ಗಳಲ್ಲಿ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಗಾಯಾಳುಗಳನ್ನು ಕರೆದುಕೊಂಡು ಹೋಗಲಾಯಿತು.</p>.<p>ಬಂಗಾರಪೇಟೆಯಿಂದ ಕೋಲಾರದ ಎಸ್.ಎನ್.ಆರ್. ಜಿಲ್ಲಾಸ್ಪತ್ರೆ, ಅಲ್ಲಿಂದ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಹೋದರೂ ಖಾಸಗಿ ಆ್ಯಂಬುಲೆನ್ಸ್ ಒಂದು ವಾಹನಕ್ಕೆ ಕನಿಷ್ಠ ₹4 ಸಾವಿರ ಬಾಡಿಗೆ ಆಗುತ್ತದೆ. ಮೂರು ವಾಹನಕ್ಕೆ ₹12 ಸಾವಿರ ಬಾಡಿಗೆ ನೀಡಬೇಕಾಗುತ್ತದೆ. ಇನ್ನು ಕೋಲಾರ ನಗರದಿಂದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ 3 ವಾಹನ ತೆರಳಿದ್ದು, ಅವುಗಳಿಗೆ ತಲಾ ₹1 ಸಾವಿರ ಅಂದರೂ ₹15 ಸಾವಿರದಲ್ಲಿ ಎಲ್ಲ ವಾಹನಗಳ ಬಾಡಿಗೆ ಮುಗಿದಿರುತ್ತಿತ್ತು.</p>.<p>ಆದರೆ, ಕೆಲ ಖಾಸಗಿ ಆ್ಯಂಬುಲೆನ್ಸ್ನವರು ಮೃತಪಟ್ಟಿದ್ದವರ ಹಾಗೂ ಗಾಯಗೊಂಡಿದ್ದವರ ಸಂಬಂಧಿಕರು, ಸ್ನೇಹಿತರ ಬಳಿ ಹಣ ಪೀಕಲು ಮುಂದಾಗಿದ್ದು ಆಕ್ರೋಶ ವ್ಯಕ್ತವಾಗಿದೆ. ಬಂಗಾರಪೇಟೆ, ಕೋಲಾರ, ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಬಂದಿರುವುದಕ್ಕೆ ₹69 ಸಾವಿರ ಬಾಡಿಗೆ ಹೇಳಿರುವುದು ಗೊತ್ತಾಗಿದೆ.</p>.<p>₹40 ಸಾವಿರ ನಗದು ಪಡೆದು, ₹4 ಸಾವಿರ ಫೋನ್ ಪೇನಲ್ಲಿ ಹಾಕಿಸಿಕೊಂಡಿದ್ದಾರೆ. ಇಷ್ಟು ಸಾಲದ್ದಕ್ಕೆ ಉಳಿದ ₹ 25 ಸಾವಿರ ನೀಡುವಂತೆ ಆರ್.ಎಲ್. ಜಾಲಪ್ಪ ಆಸ್ಪತ್ರೆ ಬಳಿ ಪೀಡಿಸಿರುವುದು ತಿಳಿದುಬಂದಿದೆ.</p>.<p>ಘಟನೆ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆ ಬಳಿ ನೂರಾರು ಮಂದಿ ಬರಲಾರಂಭಿಸಿದರು. ಖಾಸಗಿ ಆ್ಯಂಬುಲೆನ್ಸ್ನವರ ಈ ವಿಚಾರ ತಿಳಿಯುತ್ತಿದ್ದಂತೆಯೇ ರೊಚ್ಚಿಗೆದ್ದ ಗಾಯಾಳುಗಳ ಸಂಬಂಧಿಕರು, ‘ನಾವೂ ಸ್ಥಳೀಯರೇ, ನಮಗೂ ಎಲ್ಲಾ ಗೊತ್ತಿದೆ. ತಮಗೆ ಸ್ವಲ್ಪವೂ ಕರುಣೆ ಎನ್ನುವುದು ಇಲ್ಲವೇ? ಇಷ್ಟ ಬಂದಂತೆ ಹಣ ವಸೂಲಿಗೆ ಇಳಿದಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ಸ್ಥಳಕ್ಕೆ ಆಗಮಿಸಿದ ಗಲ್ಪೇಟೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಮುಂದಾಗಿದ್ದಾರೆ, ಅಲ್ಲದೆ ಚಾಲಕರುಗಳು ಆ್ಯಂಬುಲೆನ್ಸ್ ಸಮೇತ ಆಸ್ಪತ್ರೆ ಬಳಿಯಿಂದ ಪರಾರಿಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ</strong>: ಚೆನ್ನೈ–ಬೆಂಗಳೂರು ಎಕ್ಸ್ಪ್ರೆಸ್ ವೇ ಕಾರಿಡಾರ್ನಲ್ಲಿ ಸಂಭವಿಸಿದ ಅಪಘಾತವನ್ನೇ ಬಂಡವಾಳವಾಗಿಸಿಕೊಂಡು ಗಾಯಾಳುಗಳನ್ನು ಸಾಗಿಸಲು ಹೆಚ್ಚು ಹಣ ಪಡೆದಿರುವುದಕ್ಕೆ ಅಕ್ರೋಶ ವ್ಯಕ್ತವಾಗಿದೆ.</p>.<p>ತುರ್ತು ಸಂದರ್ಭ ಬಳಸಿಕೊಂಡು ಮನಬಂದಂತೆ ಹಣ ಕಿತ್ತುಕೊಳ್ಳುವ ದಂಧೆಯಲ್ಲಿ ತೊಡಗಿದ್ದಾರೆ ಎಂದು ಗಾಯಾಳು ಸಂಬಂಧಿಸಿಕರು ಆರೋಪಿಸಿದ್ದಾರೆ.</p>.<p>ಬಂಗಾರಪೇಟೆ ತಾಲ್ಲೂಕಿನ ಕಲ್ಕೆರೆ ಬಳಿ ಕಾರಿಡಾರ್ನಲ್ಲಿ ಸೋಮವಾರ ರಾತ್ರಿ ಟೆಂಪೊಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟು, 22 ಮಂದಿ ಗಾಯಗೊಂಡಿದ್ದರು. ವಿಷಯ ತಿಳಿದ ಕೂಡಲೇ ಬಂಗಾರಪೇಟೆಯಿಂದ 2 ಖಾಸಗಿ ಆ್ಯಂಬುಲೆನ್ಸ್, 2 ಸರ್ಕಾರಿ ಆ್ಯಂಬುಲೆನ್ಸ್ ಸ್ಥಳಕ್ಕೆ ತೆರಳಿವೆ. ಅಲ್ಲದೆ, ಟೋಲ್ಗೆ ಸಂಬಂಧಿಸಿದ 1 ಆ್ಯಂಬುಲೆನ್ಸ್ ಮತ್ತು ಬೊಲೆರೊ ವಾಹನ ಬಂದಿವೆ. ಮೃತ ದೇಹಗಳನ್ನು ಬೊಲೆರೊ ವಾಹನದಲ್ಲಿ ಹಾಕಿಕೊಂಡು ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಗೆ ತರಲಾಯಿತು.</p>.<p>ಗಾಯಗೊಂಡಿದ್ದವರನ್ನು ಮೊದಲು ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಕೆಲವರನ್ನು ಕೋಲಾರದ ಎಸ್ಎನ್ಆರ್ ಜಿಲ್ಲಾಸ್ಪತ್ರೆಗೆ ತರಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಕರೆದೊಯ್ಯಲಾಯಿತು.</p>.<p>ಬಂಗಾರಪೇಟೆಯಿಂದ 3 ಖಾಸಗಿ ಆ್ಯಂಬುಲೆನ್ಸ್ಗಳು ಎಸ್ಎನ್ಆರ್ ಆಸ್ಪತ್ರೆಗೆ ಬಂದಿದ್ದು, ಇಲ್ಲಿಂದ ಪುನಃ ಕೋಲಾರದ 3 ಆ್ಯಂಬುಲೆನ್ಸ್ಗಳಲ್ಲಿ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಗಾಯಾಳುಗಳನ್ನು ಕರೆದುಕೊಂಡು ಹೋಗಲಾಯಿತು.</p>.<p>ಬಂಗಾರಪೇಟೆಯಿಂದ ಕೋಲಾರದ ಎಸ್.ಎನ್.ಆರ್. ಜಿಲ್ಲಾಸ್ಪತ್ರೆ, ಅಲ್ಲಿಂದ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಹೋದರೂ ಖಾಸಗಿ ಆ್ಯಂಬುಲೆನ್ಸ್ ಒಂದು ವಾಹನಕ್ಕೆ ಕನಿಷ್ಠ ₹4 ಸಾವಿರ ಬಾಡಿಗೆ ಆಗುತ್ತದೆ. ಮೂರು ವಾಹನಕ್ಕೆ ₹12 ಸಾವಿರ ಬಾಡಿಗೆ ನೀಡಬೇಕಾಗುತ್ತದೆ. ಇನ್ನು ಕೋಲಾರ ನಗರದಿಂದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ 3 ವಾಹನ ತೆರಳಿದ್ದು, ಅವುಗಳಿಗೆ ತಲಾ ₹1 ಸಾವಿರ ಅಂದರೂ ₹15 ಸಾವಿರದಲ್ಲಿ ಎಲ್ಲ ವಾಹನಗಳ ಬಾಡಿಗೆ ಮುಗಿದಿರುತ್ತಿತ್ತು.</p>.<p>ಆದರೆ, ಕೆಲ ಖಾಸಗಿ ಆ್ಯಂಬುಲೆನ್ಸ್ನವರು ಮೃತಪಟ್ಟಿದ್ದವರ ಹಾಗೂ ಗಾಯಗೊಂಡಿದ್ದವರ ಸಂಬಂಧಿಕರು, ಸ್ನೇಹಿತರ ಬಳಿ ಹಣ ಪೀಕಲು ಮುಂದಾಗಿದ್ದು ಆಕ್ರೋಶ ವ್ಯಕ್ತವಾಗಿದೆ. ಬಂಗಾರಪೇಟೆ, ಕೋಲಾರ, ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಬಂದಿರುವುದಕ್ಕೆ ₹69 ಸಾವಿರ ಬಾಡಿಗೆ ಹೇಳಿರುವುದು ಗೊತ್ತಾಗಿದೆ.</p>.<p>₹40 ಸಾವಿರ ನಗದು ಪಡೆದು, ₹4 ಸಾವಿರ ಫೋನ್ ಪೇನಲ್ಲಿ ಹಾಕಿಸಿಕೊಂಡಿದ್ದಾರೆ. ಇಷ್ಟು ಸಾಲದ್ದಕ್ಕೆ ಉಳಿದ ₹ 25 ಸಾವಿರ ನೀಡುವಂತೆ ಆರ್.ಎಲ್. ಜಾಲಪ್ಪ ಆಸ್ಪತ್ರೆ ಬಳಿ ಪೀಡಿಸಿರುವುದು ತಿಳಿದುಬಂದಿದೆ.</p>.<p>ಘಟನೆ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆ ಬಳಿ ನೂರಾರು ಮಂದಿ ಬರಲಾರಂಭಿಸಿದರು. ಖಾಸಗಿ ಆ್ಯಂಬುಲೆನ್ಸ್ನವರ ಈ ವಿಚಾರ ತಿಳಿಯುತ್ತಿದ್ದಂತೆಯೇ ರೊಚ್ಚಿಗೆದ್ದ ಗಾಯಾಳುಗಳ ಸಂಬಂಧಿಕರು, ‘ನಾವೂ ಸ್ಥಳೀಯರೇ, ನಮಗೂ ಎಲ್ಲಾ ಗೊತ್ತಿದೆ. ತಮಗೆ ಸ್ವಲ್ಪವೂ ಕರುಣೆ ಎನ್ನುವುದು ಇಲ್ಲವೇ? ಇಷ್ಟ ಬಂದಂತೆ ಹಣ ವಸೂಲಿಗೆ ಇಳಿದಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ಸ್ಥಳಕ್ಕೆ ಆಗಮಿಸಿದ ಗಲ್ಪೇಟೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಮುಂದಾಗಿದ್ದಾರೆ, ಅಲ್ಲದೆ ಚಾಲಕರುಗಳು ಆ್ಯಂಬುಲೆನ್ಸ್ ಸಮೇತ ಆಸ್ಪತ್ರೆ ಬಳಿಯಿಂದ ಪರಾರಿಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>