<p><strong>ಮುಳಬಾಗಿಲು:</strong> ಒಂದೇ ವೇದಿಕೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಾಮರಸ್ಯಕ್ಕೆ ಸಾಕ್ಷಿಯಾಯಿತು ನಂಗಲಿ ಗ್ರಾಮ.</p>.<p>ಮುಳಬಾಗಿಲು ತಾಲ್ಲೂಕಿನ ನಂಗಲಿಯ ನವ ಜವಾನ್ ಕಮಿಟಿ ಹಾಗೂ ನಂಗಲಿ ಯುವಕರ ಕಮಿಟಿ ವತಿಯಿಂದ ಏರ್ಪಡಿಸಿದ್ದ ಹಿಂದೂ ಮುಸ್ಲಿಂ ಧರ್ಮಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಐದು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.</p>.<p>ಎರಡು ಧರ್ಮದವರು ಒಂದೇ ವೇದಿಕೆಯಲ್ಲಿ ತಮ್ಮ ತಮ್ಮ ಸಂಪ್ರದಾಯ, ಆಚರಣೆಗಳ ಮೂಲಕ ವಿವಾಹವಾದರು. ನಂಗಲಿಯ ನವ ಜವಾನ್ ಸಮಿತಿ ನಾಲ್ಕು ವರ್ಷಗಳಿಂದ ಈದ್ ಮಿಲಾದ್ ಹಬ್ಬವಾದ ಎರಡನೇ ಸಾಮೂಹಿಕ ವಿವಾಹವನ್ನು ಆಚರಿಸುತ್ತಿದ್ದೆ. ಈ ಬಾರಿ ಮೂರು ಹಿಂದೂ ಜೋಡಿ, ಎರಡು ಮುಸ್ಲಿಂ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟ ದಂಪತಿಗಳನ್ನು ಎಲ್ಲರೂ ಆಶೀರ್ವಾದಿಸಿದರು.</p>.<p>ಹಿಂದೂ ಧರ್ಮದ ಅರ್ಚಕರು ಮಂತ್ರ ಹೇಳಿ ಶಾಸ್ತ್ರಗಳನ್ನು ಪೂರೈಸಿದರೆ, ಮುಸ್ಲಿಂ ಧರ್ಮಾಧಿಕಾರಿ ಮುಸ್ಲಿಂ ಸಂಪ್ರದಾಯದಂತೆ ಮದುವೆ ಮಾಡಿಸಿದರು.</p>.<p>ನವ ಜೋಡಿಗಳಿಗೆ ನವ ಜವಾನ್ ಸಮಿತಿಯ ವತಿಯಿಂದ ಬಂಗಾರದ ಮಾಂಗಲ್ಯ, ಮೂಗುತಿ, ಓಲೆ, ಮಂಚ, ಬೀರು, ಹಾಸಿಗೆ, ಪಾತ್ರೆ –ಸಾಮಾನು ಮನೆಗೆ ಅಗತ್ಯವಿರುವ ವಸ್ತುಗಳನ್ನು ವಿತರಿಸಿದರು.</p>.<p>ಈ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಎನ್.ಸಿ.ಶ್ರೀಧರ್ ಮಾತನಾಡಿ, ಭಾರತ ಸರ್ವಧರ್ಮ ಸಮನ್ವಯ ದೇಶವಾಗಿದ್ದು, ಕುವೆಂಪು ಅವರ ವಿಶ್ವ ಮಾನವ ಸಂದೇಶಕ್ಕೆ ಒಂದೇ ವೇದಿಕೆಯಲ್ಲಿ ನಡೆದ ಹಿಂದೂ ಮುಸ್ಲಿಂ ವಿವಾಹಗಳು ಆದರ್ಶವಾಗಿವೆ. ಎಲ್ಲರೂ ಸಹೋದರರಂತೆ ಬದುಕಬೇಕು ಎಂದು ಹೇಳಿದರು.</p>.<p>ಅಕ್ಮಲ್ ಬೇಗ್, ಎನ್.ಸಿ.ಶ್ರೀಧರ್, ಸತೀಶ್ ಕುಮಾರ್, ಹುಸೇನ್, ನಿರಂಜನ್, ಕೆ.ತ್ಯಾಗರಾಜ್ ಹಾಗೂ ನವ ಜವಾನ್ ಸಮಿತಿಯ ಸದಸ್ಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಬಾಗಿಲು:</strong> ಒಂದೇ ವೇದಿಕೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಾಮರಸ್ಯಕ್ಕೆ ಸಾಕ್ಷಿಯಾಯಿತು ನಂಗಲಿ ಗ್ರಾಮ.</p>.<p>ಮುಳಬಾಗಿಲು ತಾಲ್ಲೂಕಿನ ನಂಗಲಿಯ ನವ ಜವಾನ್ ಕಮಿಟಿ ಹಾಗೂ ನಂಗಲಿ ಯುವಕರ ಕಮಿಟಿ ವತಿಯಿಂದ ಏರ್ಪಡಿಸಿದ್ದ ಹಿಂದೂ ಮುಸ್ಲಿಂ ಧರ್ಮಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಐದು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.</p>.<p>ಎರಡು ಧರ್ಮದವರು ಒಂದೇ ವೇದಿಕೆಯಲ್ಲಿ ತಮ್ಮ ತಮ್ಮ ಸಂಪ್ರದಾಯ, ಆಚರಣೆಗಳ ಮೂಲಕ ವಿವಾಹವಾದರು. ನಂಗಲಿಯ ನವ ಜವಾನ್ ಸಮಿತಿ ನಾಲ್ಕು ವರ್ಷಗಳಿಂದ ಈದ್ ಮಿಲಾದ್ ಹಬ್ಬವಾದ ಎರಡನೇ ಸಾಮೂಹಿಕ ವಿವಾಹವನ್ನು ಆಚರಿಸುತ್ತಿದ್ದೆ. ಈ ಬಾರಿ ಮೂರು ಹಿಂದೂ ಜೋಡಿ, ಎರಡು ಮುಸ್ಲಿಂ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟ ದಂಪತಿಗಳನ್ನು ಎಲ್ಲರೂ ಆಶೀರ್ವಾದಿಸಿದರು.</p>.<p>ಹಿಂದೂ ಧರ್ಮದ ಅರ್ಚಕರು ಮಂತ್ರ ಹೇಳಿ ಶಾಸ್ತ್ರಗಳನ್ನು ಪೂರೈಸಿದರೆ, ಮುಸ್ಲಿಂ ಧರ್ಮಾಧಿಕಾರಿ ಮುಸ್ಲಿಂ ಸಂಪ್ರದಾಯದಂತೆ ಮದುವೆ ಮಾಡಿಸಿದರು.</p>.<p>ನವ ಜೋಡಿಗಳಿಗೆ ನವ ಜವಾನ್ ಸಮಿತಿಯ ವತಿಯಿಂದ ಬಂಗಾರದ ಮಾಂಗಲ್ಯ, ಮೂಗುತಿ, ಓಲೆ, ಮಂಚ, ಬೀರು, ಹಾಸಿಗೆ, ಪಾತ್ರೆ –ಸಾಮಾನು ಮನೆಗೆ ಅಗತ್ಯವಿರುವ ವಸ್ತುಗಳನ್ನು ವಿತರಿಸಿದರು.</p>.<p>ಈ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಎನ್.ಸಿ.ಶ್ರೀಧರ್ ಮಾತನಾಡಿ, ಭಾರತ ಸರ್ವಧರ್ಮ ಸಮನ್ವಯ ದೇಶವಾಗಿದ್ದು, ಕುವೆಂಪು ಅವರ ವಿಶ್ವ ಮಾನವ ಸಂದೇಶಕ್ಕೆ ಒಂದೇ ವೇದಿಕೆಯಲ್ಲಿ ನಡೆದ ಹಿಂದೂ ಮುಸ್ಲಿಂ ವಿವಾಹಗಳು ಆದರ್ಶವಾಗಿವೆ. ಎಲ್ಲರೂ ಸಹೋದರರಂತೆ ಬದುಕಬೇಕು ಎಂದು ಹೇಳಿದರು.</p>.<p>ಅಕ್ಮಲ್ ಬೇಗ್, ಎನ್.ಸಿ.ಶ್ರೀಧರ್, ಸತೀಶ್ ಕುಮಾರ್, ಹುಸೇನ್, ನಿರಂಜನ್, ಕೆ.ತ್ಯಾಗರಾಜ್ ಹಾಗೂ ನವ ಜವಾನ್ ಸಮಿತಿಯ ಸದಸ್ಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>