<p><strong>ಕೆಜಿಎಫ್:</strong> ಮಳೆಗಾಲದಲ್ಲಿ ದಿಗುವರಾಗಡಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಗೆ ತೊಂದರೆ ಆಗುವ ರಾಜಕಾಲುವೆಯ ಕಾಮಗಾರಿ ದುರಸ್ಥಿಯನ್ನು ಶಾಸಕಿ ಎಂ.ರೂಪಕಲಾ ಶನಿವಾರ ವೀಕ್ಷಿಸಿದರು.</p>.<p>ಊರಿಗಾಂಪೇಟೆಯ ಸ್ಮಶಾನದ ಬಳಿಯಿಂದ ದಿಗುವರಾಗಡಹಳ್ಳಿ ಮೂಲಕ ಸಮೀಪದ ಕೆರೆಗೆಳಿಗೆ ಹಾದು ಹೋಗುತ್ತಿದ್ದ ರಾಜಕಾಲುವೆ ಇತ್ತೀಚಿನ ದಿನಗಳಲ್ಲಿ ಒತ್ತುವರಿಯಾಗಿತ್ತು. ಮಳೆಯ ನೀರು ಮತ್ತು ಅದರೊಳಗೆ ಮಿಶ್ರವಾದ ತ್ಯಾಜ್ಯ ನೀರು ರೈತರ ಜಮೀನಿಗೆ ನುಗ್ಗುತ್ತಿತ್ತು. ಈ ಹಿನ್ನೆಲೆಯಲ್ಲಿ ದಿಗುರವರಾಗಡಹಳ್ಳಿ ಮತ್ತು ಸುತ್ತಮುತ್ತ ಜಮೀನುಳ್ಳ ರೈತರು ದೂರು ನೀಡಿದ್ದರು.</p>.<p>ಈ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ರಾಜಕಾಲುವೆ ನಿರ್ಮಾಣ ಮಾಡಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡಿದ ಶಾಸಕಿಗೆ ನಗರಸಭೆ ಆಯುಕ್ತ ಮಂಜುನಾಥ್ ಮಾಹಿತಿ ನೀಡಿದರು. ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಸ್ಥಾಯಿ ಸಮಿತಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ನಗರಸಭೆ ಸದಸ್ಯ ಕರುಣಾಕರನ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಜಿಎಫ್:</strong> ಮಳೆಗಾಲದಲ್ಲಿ ದಿಗುವರಾಗಡಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಗೆ ತೊಂದರೆ ಆಗುವ ರಾಜಕಾಲುವೆಯ ಕಾಮಗಾರಿ ದುರಸ್ಥಿಯನ್ನು ಶಾಸಕಿ ಎಂ.ರೂಪಕಲಾ ಶನಿವಾರ ವೀಕ್ಷಿಸಿದರು.</p>.<p>ಊರಿಗಾಂಪೇಟೆಯ ಸ್ಮಶಾನದ ಬಳಿಯಿಂದ ದಿಗುವರಾಗಡಹಳ್ಳಿ ಮೂಲಕ ಸಮೀಪದ ಕೆರೆಗೆಳಿಗೆ ಹಾದು ಹೋಗುತ್ತಿದ್ದ ರಾಜಕಾಲುವೆ ಇತ್ತೀಚಿನ ದಿನಗಳಲ್ಲಿ ಒತ್ತುವರಿಯಾಗಿತ್ತು. ಮಳೆಯ ನೀರು ಮತ್ತು ಅದರೊಳಗೆ ಮಿಶ್ರವಾದ ತ್ಯಾಜ್ಯ ನೀರು ರೈತರ ಜಮೀನಿಗೆ ನುಗ್ಗುತ್ತಿತ್ತು. ಈ ಹಿನ್ನೆಲೆಯಲ್ಲಿ ದಿಗುರವರಾಗಡಹಳ್ಳಿ ಮತ್ತು ಸುತ್ತಮುತ್ತ ಜಮೀನುಳ್ಳ ರೈತರು ದೂರು ನೀಡಿದ್ದರು.</p>.<p>ಈ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ರಾಜಕಾಲುವೆ ನಿರ್ಮಾಣ ಮಾಡಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡಿದ ಶಾಸಕಿಗೆ ನಗರಸಭೆ ಆಯುಕ್ತ ಮಂಜುನಾಥ್ ಮಾಹಿತಿ ನೀಡಿದರು. ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಸ್ಥಾಯಿ ಸಮಿತಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ನಗರಸಭೆ ಸದಸ್ಯ ಕರುಣಾಕರನ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>