<p><strong>ಕೋಲಾರ:</strong> ‘ಸಮಾಜದಲ್ಲಿ ಅಗುತ್ತಿರುವ ಬದಲಾವಣೆಗೆ ತಕ್ಕಂತೆಗುಣಾತ್ಮಕ ಶಿಕ್ಷಣ ಜಾರಿಯಾಗಬೇಕಾಗಿದೆ’ ಎಂದು ಸಾಹಿತಿ ಡಾ.ಕೆ.ವೈ.ನಾರಾಯಣಸ್ವಾಮಿ ತಿಳಿಸಿದರು.</p>.<p>18ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ನಡೆದ ‘ಸಿ.ಎಂ.ಗೋವಿಂದರೆಡ್ಡಿ ಬಹುಮುಖದ ಬದುಕು’ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿ, ‘ಸಾಹಿತಿ ಮತ್ತು ಮನುಷ್ಯನ ಬದುಕು ಬೇರೆ ಬೇರೆಯಾಗಿ ಕಾಣುವಂತಾಗಿದ್ದು, ಈ ಎರಡರ ದೃಷ್ಟಿಕೋನ ಸಮರ್ಪಕವಾಗಿಲ್ಲದ ಕಾರಣ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ’ ಎಂದು ವಿಷಾದಿಸಿದರು.</p>.<p>‘ಸಾಹಿತಿಯಾಗುವವರಿಗೆ ಶಿಕ್ಷಣ, ಆರೋಗ್ಯ ಹಾಗೂ ಆಹಾರದ ಭದ್ರತೆ ಬೇಕಾಗಿದೆ. ಸಮಾನತೆಯ ರಾಷ್ಟ್ರೀಕರಣವನ್ನು ಜಾರಿ ಮಾಡಿದಾಗ ಪ್ರಜಾಪ್ರಭುತ್ವಕ್ಕೆ ಪರಿಪೂರ್ಣ ಅರ್ಥ ಕಲ್ಪಿಸಲು ಸಾಧ್ಯ’ ಎಂದು ತಿಳಿಸಿದರು.</p>.<p>‘ಬರಹ ಸಾಹಿತ್ಯದ ಕೃತಿಗಳಲ್ಲಿ ಆತ್ಮಚಾರಿತಾತ್ಮಕ ವಿಷಯಗಳು ಕಂಡುಬರುವುದು ಸಾಧ್ಯ. ಪ್ರಕೃತಿಯೂ ಸೃಷ್ಟಿಸಿರುವುದನ್ನು ಮರುಕಳುಹಿಸುವ ವಿಧಾನದಂತೆ ಗೋವಿಂದರೆಡ್ಡಿ ತಮ್ಮ ಕೃತಿಗಳಲ್ಲಿ ಪ್ರದರ್ಶಸಿದ್ದಾರೆ. ಅನುಕರಣೀಯ ಪ್ರತಿಭೆಯನ್ನು ಅನಾವರಣ ಮಾಡಿರುವುದನ್ನು ಕಾಣಬಹುದು’ ಎಂದು ವಿವರಿಸಿದರು.</p>.<p>‘ಗೋವಿಂದರೆಡ್ಡಿಯೂ ಕಾಲಕ್ಕೆ ತಕ್ಕಂತೆ ಮಕ್ಕಳಿಗೆ ಬೇಕಾದಂತಹ ವಿಜ್ಞಾನ ಸಾಹಿತ್ಯವನ್ನು ಅರಿವು ಮೂಡಿಸುವ ನಿಟ್ಟಿನಲ್ಲಿ ರಚಿಸಿದ್ದು, ಸರ್ಕಾರ ಜಾರಿಗೆ ತಂದಿರುವ ಕಲಿ ನಲಿ ಯೋಜನೆಯಿಂದ ರೂಪುಗೊಂಡಿರುವ ಕವಿಯಾಗಿದ್ದಾರೆ. ಇವರನ್ನು ಸರ್ಕಾರದ ಕವಿ ಎಂದು ಕರೆಯಬಹುದು’ ಎಂದು ಬಣ್ಣಿಸಿದರು.</p>.<p>ಸಾಹಿತಿ ಟಿ.ಯಲ್ಲಪ್ಪ ಸಮ್ಮೇಳನಾಧ್ಯಕ್ಷ ಗದ್ಯಲೋಕ ವಿಷಯ ಮಂಡಿಸಿ ಮಾತನಾಡಿ, ‘ವಾಸ್ತವ ಜಗತ್ತಿನಲ್ಲಿ ಮಕ್ಕಳು ಪೋಷಕರ ಒತ್ತಡದ ಬದುಕಿನಲ್ಲಿ ತೃಪ್ತಿಯಿಲ್ಲದೆ, ತಮ್ಮದೆ ಅದ ಸ್ವಾತಂತ್ರ್ಯದ ಇಚ್ಚಾಲೋಕದಲ್ಲಿ ಆನಂದಪಡಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.</p>.<p>‘ಮಕ್ಕಳ ಅವಶ್ಯಕತೆಗಳನ್ನು ಕಾಲಕಾಲಕ್ಕೆ ಪೂರೈಕೆ ಮಾಡದಿದ್ದರೆ ದಾರಿ ತಪ್ಪಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಗೋವಿಂದ ರೆಡ್ಡಿಯವರು ರಚಿಸಿರುವ ಮಕ್ಕಳ ಪುಸ್ತಕಗಳಲ್ಲಿ ಪೋಷಕರಿಗೆ ಎಚ್ಚರಿಸಿದ್ದಾರೆ’ ಎಂದು ಹೇಳಿದರು.</p>.<p>ಸಾಹಿತಿ ಸರ್ವೇಶ ಬಂಟಹಳ್ಳಿ ಮಾತನಾಡಿ, ‘ಪ್ರತಿಯೊಬ್ಬರಲ್ಲೂ ಗ್ರಾಮೀಣ ಪ್ರತಿಭೆ ಅಡಗಿರುತ್ತದೆ. ಗೋವಿಂದರೆಡ್ಡಿಯವರು ರಚಿಸಿರುವ ಶೇ.90ರಷ್ಟು ಕೃತಿಗಳು ಮಕ್ಕಳ ಸಾಹಿತ್ಯಕ್ಕೆ ಸಂಬಂಧಪಟ್ಟಿವೆ.ಗ್ರಹಣಗಳ ಬಗ್ಗೆ ಮೂಡನಂಬಿಕೆಗಳ ಪ್ರಶ್ನೆಗಳನ್ನು ಮನಸ್ಸಿನಲ್ಲಿ ಇಟ್ಟಿಕೊಂಡಿದ್ದಾರೆ. ಮಕ್ಕಳನ್ನು ತಿದಿದ್ದರೆ ಸಮಾಜ ಸರಿಹೋಗುತ್ತದೆ ಎಂಬ ಸಾಹಿತ್ಯ ರಚನೆಗೆ ಒತ್ತು ನೀಡಿದ್ದಾರೆಎಂದು ವಿವರಿಸಿದರು.</p>.<p>ಸಾಹಿತಿ ಪ್ರೊ.ಕೃಷ್ಣ ಮೂರ್ತಿ ಬಿಳಿಗೆರೆ ಸಮ್ಮೇಳನಾಧ್ಯಕ್ಷರ ರಂಗ ಲೋಕ ಕುರಿತು ವಿಷಯ ಮಂಡಿಸಿದರು.<br />ಸಮ್ಮೇಳನಾಧ್ಯಕ್ಷ ಸಿ.ಎಂ.ಗೋವಿಂದರೆಡ್ಡಿ, ಸಹ ಪ್ರಾಧ್ಯಾಪಕರಾದ ಆರ್.ಅನಂತಮೂರ್ತಿ, ಮೀನಾಕುಮಾರಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> ‘ಸಮಾಜದಲ್ಲಿ ಅಗುತ್ತಿರುವ ಬದಲಾವಣೆಗೆ ತಕ್ಕಂತೆಗುಣಾತ್ಮಕ ಶಿಕ್ಷಣ ಜಾರಿಯಾಗಬೇಕಾಗಿದೆ’ ಎಂದು ಸಾಹಿತಿ ಡಾ.ಕೆ.ವೈ.ನಾರಾಯಣಸ್ವಾಮಿ ತಿಳಿಸಿದರು.</p>.<p>18ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ನಡೆದ ‘ಸಿ.ಎಂ.ಗೋವಿಂದರೆಡ್ಡಿ ಬಹುಮುಖದ ಬದುಕು’ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿ, ‘ಸಾಹಿತಿ ಮತ್ತು ಮನುಷ್ಯನ ಬದುಕು ಬೇರೆ ಬೇರೆಯಾಗಿ ಕಾಣುವಂತಾಗಿದ್ದು, ಈ ಎರಡರ ದೃಷ್ಟಿಕೋನ ಸಮರ್ಪಕವಾಗಿಲ್ಲದ ಕಾರಣ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ’ ಎಂದು ವಿಷಾದಿಸಿದರು.</p>.<p>‘ಸಾಹಿತಿಯಾಗುವವರಿಗೆ ಶಿಕ್ಷಣ, ಆರೋಗ್ಯ ಹಾಗೂ ಆಹಾರದ ಭದ್ರತೆ ಬೇಕಾಗಿದೆ. ಸಮಾನತೆಯ ರಾಷ್ಟ್ರೀಕರಣವನ್ನು ಜಾರಿ ಮಾಡಿದಾಗ ಪ್ರಜಾಪ್ರಭುತ್ವಕ್ಕೆ ಪರಿಪೂರ್ಣ ಅರ್ಥ ಕಲ್ಪಿಸಲು ಸಾಧ್ಯ’ ಎಂದು ತಿಳಿಸಿದರು.</p>.<p>‘ಬರಹ ಸಾಹಿತ್ಯದ ಕೃತಿಗಳಲ್ಲಿ ಆತ್ಮಚಾರಿತಾತ್ಮಕ ವಿಷಯಗಳು ಕಂಡುಬರುವುದು ಸಾಧ್ಯ. ಪ್ರಕೃತಿಯೂ ಸೃಷ್ಟಿಸಿರುವುದನ್ನು ಮರುಕಳುಹಿಸುವ ವಿಧಾನದಂತೆ ಗೋವಿಂದರೆಡ್ಡಿ ತಮ್ಮ ಕೃತಿಗಳಲ್ಲಿ ಪ್ರದರ್ಶಸಿದ್ದಾರೆ. ಅನುಕರಣೀಯ ಪ್ರತಿಭೆಯನ್ನು ಅನಾವರಣ ಮಾಡಿರುವುದನ್ನು ಕಾಣಬಹುದು’ ಎಂದು ವಿವರಿಸಿದರು.</p>.<p>‘ಗೋವಿಂದರೆಡ್ಡಿಯೂ ಕಾಲಕ್ಕೆ ತಕ್ಕಂತೆ ಮಕ್ಕಳಿಗೆ ಬೇಕಾದಂತಹ ವಿಜ್ಞಾನ ಸಾಹಿತ್ಯವನ್ನು ಅರಿವು ಮೂಡಿಸುವ ನಿಟ್ಟಿನಲ್ಲಿ ರಚಿಸಿದ್ದು, ಸರ್ಕಾರ ಜಾರಿಗೆ ತಂದಿರುವ ಕಲಿ ನಲಿ ಯೋಜನೆಯಿಂದ ರೂಪುಗೊಂಡಿರುವ ಕವಿಯಾಗಿದ್ದಾರೆ. ಇವರನ್ನು ಸರ್ಕಾರದ ಕವಿ ಎಂದು ಕರೆಯಬಹುದು’ ಎಂದು ಬಣ್ಣಿಸಿದರು.</p>.<p>ಸಾಹಿತಿ ಟಿ.ಯಲ್ಲಪ್ಪ ಸಮ್ಮೇಳನಾಧ್ಯಕ್ಷ ಗದ್ಯಲೋಕ ವಿಷಯ ಮಂಡಿಸಿ ಮಾತನಾಡಿ, ‘ವಾಸ್ತವ ಜಗತ್ತಿನಲ್ಲಿ ಮಕ್ಕಳು ಪೋಷಕರ ಒತ್ತಡದ ಬದುಕಿನಲ್ಲಿ ತೃಪ್ತಿಯಿಲ್ಲದೆ, ತಮ್ಮದೆ ಅದ ಸ್ವಾತಂತ್ರ್ಯದ ಇಚ್ಚಾಲೋಕದಲ್ಲಿ ಆನಂದಪಡಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.</p>.<p>‘ಮಕ್ಕಳ ಅವಶ್ಯಕತೆಗಳನ್ನು ಕಾಲಕಾಲಕ್ಕೆ ಪೂರೈಕೆ ಮಾಡದಿದ್ದರೆ ದಾರಿ ತಪ್ಪಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಗೋವಿಂದ ರೆಡ್ಡಿಯವರು ರಚಿಸಿರುವ ಮಕ್ಕಳ ಪುಸ್ತಕಗಳಲ್ಲಿ ಪೋಷಕರಿಗೆ ಎಚ್ಚರಿಸಿದ್ದಾರೆ’ ಎಂದು ಹೇಳಿದರು.</p>.<p>ಸಾಹಿತಿ ಸರ್ವೇಶ ಬಂಟಹಳ್ಳಿ ಮಾತನಾಡಿ, ‘ಪ್ರತಿಯೊಬ್ಬರಲ್ಲೂ ಗ್ರಾಮೀಣ ಪ್ರತಿಭೆ ಅಡಗಿರುತ್ತದೆ. ಗೋವಿಂದರೆಡ್ಡಿಯವರು ರಚಿಸಿರುವ ಶೇ.90ರಷ್ಟು ಕೃತಿಗಳು ಮಕ್ಕಳ ಸಾಹಿತ್ಯಕ್ಕೆ ಸಂಬಂಧಪಟ್ಟಿವೆ.ಗ್ರಹಣಗಳ ಬಗ್ಗೆ ಮೂಡನಂಬಿಕೆಗಳ ಪ್ರಶ್ನೆಗಳನ್ನು ಮನಸ್ಸಿನಲ್ಲಿ ಇಟ್ಟಿಕೊಂಡಿದ್ದಾರೆ. ಮಕ್ಕಳನ್ನು ತಿದಿದ್ದರೆ ಸಮಾಜ ಸರಿಹೋಗುತ್ತದೆ ಎಂಬ ಸಾಹಿತ್ಯ ರಚನೆಗೆ ಒತ್ತು ನೀಡಿದ್ದಾರೆಎಂದು ವಿವರಿಸಿದರು.</p>.<p>ಸಾಹಿತಿ ಪ್ರೊ.ಕೃಷ್ಣ ಮೂರ್ತಿ ಬಿಳಿಗೆರೆ ಸಮ್ಮೇಳನಾಧ್ಯಕ್ಷರ ರಂಗ ಲೋಕ ಕುರಿತು ವಿಷಯ ಮಂಡಿಸಿದರು.<br />ಸಮ್ಮೇಳನಾಧ್ಯಕ್ಷ ಸಿ.ಎಂ.ಗೋವಿಂದರೆಡ್ಡಿ, ಸಹ ಪ್ರಾಧ್ಯಾಪಕರಾದ ಆರ್.ಅನಂತಮೂರ್ತಿ, ಮೀನಾಕುಮಾರಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>