<p><strong>ಕೋಲಾರ</strong>: ನಿವೇಶನಕ್ಕೆ ಇ–ಖಾತೆ ಮಾಡಿಕೊಡಲು ಹಣ ಪಡೆಯುತ್ತಿದ್ದ ಮುಳಬಾಗಿಲು ನಗರಸಭೆ ಕಚೇರಿ ನೌಕರರೊಬ್ಬರು ಸೋಮವಾರ ಜಿಲ್ಲಾ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.</p>.<p>ಎಸ್ಡಿಎ ಪ್ರಶಾಂತ್ ಟ್ರ್ಯಾಪ್ ಆದ ನೌಕರ. ಇವರ ಮೇಲೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.</p>.<p>‘ನೆರ್ನಹಳ್ಳಿಯ ಜಯರಾಂ ಎಂಬುವರು ದೂರು ನೀಡಿದ್ದರು. 30x40 ಅಳತೆಯ ನಿವೇಶನದ ದಿಕ್ಕನ್ನು ಬದಲು ಮಾಡಲು ನೌಕರ ₹6 ಸಾವಿರ ಲಂಚ ಕೇಳಿದ್ದರು. ಅದರಂತೆ ₹5 ಸಾವಿರ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ’ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ. </p>.<p>ಜಿಲ್ಲಾ ಲೋಕಾಯುಕ್ತ ನೂತನ ಎಸ್ಪಿ ಆಂಥೋಣಿ ಜಾನ್ ಹಾಗೂ ಡಿವೈಎಸ್ಪಿ ಸುಧೀರ್ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಆಂಜನಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಸಿಬ್ಬಂದಿ ವಾಸುದೇವ್, ಅಜಯ್, ದೇವ್, ಮಂಜಪ್ಪ, ನಾಗವೇಣಿ, ಶೋಭಾ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ</strong>: ನಿವೇಶನಕ್ಕೆ ಇ–ಖಾತೆ ಮಾಡಿಕೊಡಲು ಹಣ ಪಡೆಯುತ್ತಿದ್ದ ಮುಳಬಾಗಿಲು ನಗರಸಭೆ ಕಚೇರಿ ನೌಕರರೊಬ್ಬರು ಸೋಮವಾರ ಜಿಲ್ಲಾ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.</p>.<p>ಎಸ್ಡಿಎ ಪ್ರಶಾಂತ್ ಟ್ರ್ಯಾಪ್ ಆದ ನೌಕರ. ಇವರ ಮೇಲೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.</p>.<p>‘ನೆರ್ನಹಳ್ಳಿಯ ಜಯರಾಂ ಎಂಬುವರು ದೂರು ನೀಡಿದ್ದರು. 30x40 ಅಳತೆಯ ನಿವೇಶನದ ದಿಕ್ಕನ್ನು ಬದಲು ಮಾಡಲು ನೌಕರ ₹6 ಸಾವಿರ ಲಂಚ ಕೇಳಿದ್ದರು. ಅದರಂತೆ ₹5 ಸಾವಿರ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ’ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ. </p>.<p>ಜಿಲ್ಲಾ ಲೋಕಾಯುಕ್ತ ನೂತನ ಎಸ್ಪಿ ಆಂಥೋಣಿ ಜಾನ್ ಹಾಗೂ ಡಿವೈಎಸ್ಪಿ ಸುಧೀರ್ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಆಂಜನಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಸಿಬ್ಬಂದಿ ವಾಸುದೇವ್, ಅಜಯ್, ದೇವ್, ಮಂಜಪ್ಪ, ನಾಗವೇಣಿ, ಶೋಭಾ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>