<p><strong>ಮುಳಬಾಗಿಲು:</strong> ರಸ್ತೆ ಇಲ್ಲದ ಈ ಗ್ರಾಮಕ್ಕೆ ರಸ್ತೆ, ಅತಿಕ್ರಮಿಸಿಕೊಳ್ಳಲಾದ ಸ್ಮಶಾನದ ಜಾಗ ತೆರವು, ಆಧಾರ್ ಕಾರ್ಡ್ ಮಾಡಿಸಿಕೊಳ್ಳದವರಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇಲ್ಲದವರಿಗೆ ರೇಷನ್ ಕಾರ್ಡ್ ಇದೇನು ಅಚ್ಚರಿ ಎನ್ನಬೇಡಿ. ತಾಲ್ಲೂಕಿನ ದುಗ್ಗಸಂದ್ರ ಹೋಬಳಿ ನಾಚಹಳ್ಳಿ ಗ್ರಾಮಕ್ಕೆ ಸಿಕ್ಕಭಾಗ್ಯ ಅಷ್ಟು ಇಷ್ಟಲ್ಲ.</p>.<p>ಫೆ.19ರಂದು ನಾಚಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಮಾಡಲಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ.</p>.<p>ಗ್ರಾಮಸ್ಥರು ಇದುವರೆಗೂ ತಿಳಿಯದ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಹಾಗೂ ಇತರೆ ಇಲಾಖೆಗಳ ಎಲ್ಲ ಯೋಜನೆಗಳನ್ನು ಅಧಿಕಾರಿಗಳು ನಾಚಹಳ್ಳಿ ಗ್ರಾಮಕ್ಕೆ ನೀಡಲು ಮುಂದಾಗಿದ್ದಾರೆ. ಜಿಲ್ಲಾಧಿಕಾರಿ ವಾಸ್ತವ್ಯದ ಕಾರಣ ಗ್ರಾಮಸ್ಥರಿಗೆ ಇದೀಗ ಅನುಕೂಲಗಳು ಲಭ್ಯವಾಗುತ್ತಿದೆ.</p>.<p>ಜಿಲ್ಲಾಧಿಕಾರಿ ವಾಸ್ತವ್ಯವನ್ನು ಹೆಚ್ಚು ಗ್ರಾಮಗಳಿಗೆ ವಿಸ್ತರಿಸಿದರೆ ಅಲ್ಲಿನ ಗ್ರಾಮಸ್ಥರ ಬದುಕು ಹಸನಾಗಬಹುದು ಎನ್ನುತ್ತಾರೆ ತಾಲ್ಲೂಕು ಹಸಿರು ಸೇನೆ ಅಧ್ಯಕ್ಷ ಯಲವಹಳ್ಳಿ ಪ್ರಭಾಕರ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಬಾಗಿಲು:</strong> ರಸ್ತೆ ಇಲ್ಲದ ಈ ಗ್ರಾಮಕ್ಕೆ ರಸ್ತೆ, ಅತಿಕ್ರಮಿಸಿಕೊಳ್ಳಲಾದ ಸ್ಮಶಾನದ ಜಾಗ ತೆರವು, ಆಧಾರ್ ಕಾರ್ಡ್ ಮಾಡಿಸಿಕೊಳ್ಳದವರಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇಲ್ಲದವರಿಗೆ ರೇಷನ್ ಕಾರ್ಡ್ ಇದೇನು ಅಚ್ಚರಿ ಎನ್ನಬೇಡಿ. ತಾಲ್ಲೂಕಿನ ದುಗ್ಗಸಂದ್ರ ಹೋಬಳಿ ನಾಚಹಳ್ಳಿ ಗ್ರಾಮಕ್ಕೆ ಸಿಕ್ಕಭಾಗ್ಯ ಅಷ್ಟು ಇಷ್ಟಲ್ಲ.</p>.<p>ಫೆ.19ರಂದು ನಾಚಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಮಾಡಲಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ.</p>.<p>ಗ್ರಾಮಸ್ಥರು ಇದುವರೆಗೂ ತಿಳಿಯದ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಹಾಗೂ ಇತರೆ ಇಲಾಖೆಗಳ ಎಲ್ಲ ಯೋಜನೆಗಳನ್ನು ಅಧಿಕಾರಿಗಳು ನಾಚಹಳ್ಳಿ ಗ್ರಾಮಕ್ಕೆ ನೀಡಲು ಮುಂದಾಗಿದ್ದಾರೆ. ಜಿಲ್ಲಾಧಿಕಾರಿ ವಾಸ್ತವ್ಯದ ಕಾರಣ ಗ್ರಾಮಸ್ಥರಿಗೆ ಇದೀಗ ಅನುಕೂಲಗಳು ಲಭ್ಯವಾಗುತ್ತಿದೆ.</p>.<p>ಜಿಲ್ಲಾಧಿಕಾರಿ ವಾಸ್ತವ್ಯವನ್ನು ಹೆಚ್ಚು ಗ್ರಾಮಗಳಿಗೆ ವಿಸ್ತರಿಸಿದರೆ ಅಲ್ಲಿನ ಗ್ರಾಮಸ್ಥರ ಬದುಕು ಹಸನಾಗಬಹುದು ಎನ್ನುತ್ತಾರೆ ತಾಲ್ಲೂಕು ಹಸಿರು ಸೇನೆ ಅಧ್ಯಕ್ಷ ಯಲವಹಳ್ಳಿ ಪ್ರಭಾಕರ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>