<p><strong>ಗಂಗಾವತಿ:</strong> ತಾಲ್ಲೂಕಿನ ಚಿಕ್ಕರಾಂಪುರ ಸಮೀಪದ ಅಂಜನಾದ್ರಿ ಬೆಟ್ಟದಲ್ಲಿ ಗುರುವಾರ ಅಂಜನಾದ್ರಿ ಪರಿಸರ ಕೃಷಿ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸೇವಾ ಸಂಸ್ಥೆಯಿಂದ ಸ್ವಚ್ಛತಾ ಕಾರ್ಯಗಾರ ಜರುಗಿತು.</p>.<p>ಅಂಜನಾದ್ರಿ ಬೆಟ್ಟದ ಕೆಳಭಾಗದಲ್ಲಿನ ಟಿಫಿನ್, ಕಬ್ಬಿನರಸ, ತೆಂಗಿನಕಾಯಿ, ಬಟ್ಟೆ, ಬಟಾಣಿ, ಹಣ್ಣು, ಗೊಂಬೆ ಸೇರಿ ಇತರೆ ಸಣ್ಣಪುಟ್ಟ ವ್ಯಾಪಾರಸ್ಥರು ಬೆಳಿಗ್ಗೆಯಿಂದ ಅಪರಾಹ್ನದ ದವರಗೆ ಅಂಜನಾದ್ರಿ ಬೆಟ್ಟದ ಕೆಳಭಾಗದಿಂದ ಮೇಲ್ಭಾಗದವರೆಗೆ ಸ್ವಚ್ಛಗೊಳಿಸಿದರು.</p>.<p>ಸ್ವಚ್ಚತೆಯ ಭಾಗವಾಗಿ ಬಹುತೇಕ ಪ್ಲಾಸ್ಟಿಕ್ ಬಾಟಲ್, ಗುಟ್ಕಾ, ಹಳೆಯ ಚಪ್ಪಲಿ, ಪ್ಲಾಸ್ಟಿಕ್ ಪೇಪರ್ ಸಂಗ್ರಹವಾಗಿದ್ದು, ಅಂದಾಜು 100 ಕೆ.ಜಿ.ಯಷ್ಟು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗಿದೆ. ಈ ತ್ಯಾಜ್ಯವನ್ನು ಅಂಜನಾದ್ರಿ ದೇವಸ್ಥಾನದ ಮತ್ತು ಆನೆಗೊಂದಿ ಗ್ರಾ.ಪಂನ ಕಸ ವಿಲೇವಾರಿ ವಾಹನದಲ್ಲಿ, ತ್ಯಾಜ್ಯ ವಿಲೇವಾರಿ ಮಾಡಲಾಯಿತು.</p>.<p>ಅಂಜನಾದ್ರಿ ಪರಿಸರ ಕೃಷಿ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಶಾಂತ ರಾಜನಾಳ ಮಾತನಾಡಿ, ‘ಅಂಜನಾದ್ರಿಗೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದು, ದೇವಸ್ಥಾನದ ಬಳಿ ಜಾಗೃತಿ ಕೊರತೆಯ ಕಾರಣ ಬೆಟ್ಟದಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬೀಳುತ್ತಿದೆ’ ಎಂದು ಹೇಳಿದರು.</p>.<p>‘ಜಿಲ್ಲಾಡಳಿತ, ದೇವಸ್ಥಾನ ಸಮಿತಿ ಕೂಡಲೇ ಎಚ್ಚೆತ್ತುಕೊಂಡು ಪಾದಗಟ್ಟೆ ಬಳಿಯೇ ಪ್ಲಾಸ್ಟಿಕ್ ಬಾಟಲ್, ಪೇಪರ್, ಚಪ್ಪಲಿ, ಗುಟ್ಕಾ ಒಯ್ಯುವುದು ನಿರ್ಬಂಧಿಸಿ, ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದು ಹೇಳಿದರು.</p>.<p>ಸೇವಾ ಸಂಸ್ಥೆಯ ಉಪಾಧ್ಯಕ್ಷ ಬಾಳಪ್ಪ, ಕಾರ್ಯದರ್ಶಿ ದೊಡ್ಡಬಸಪ್ಪ, ಆಂಜನೇಯಗೌಡ, ಮಂಜುನಾಥ ಚಿಕ್ಕರಾಂಪುರ, ನಾಗರಾಜ ಎಂ., ನಿಂಗಜ್ಜ, ರಾಮನಾಯಕ, ಹನುಮವ್ವ ಸೇರಿ ಅಂಜನಾದ್ರಿ ಕೆಳಭಾಗದ ಸಣ್ಣಪುಟ್ಟ ಅಂಗಡಿಗಳ ವ್ಯಾಪಾರಸ್ಥರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ:</strong> ತಾಲ್ಲೂಕಿನ ಚಿಕ್ಕರಾಂಪುರ ಸಮೀಪದ ಅಂಜನಾದ್ರಿ ಬೆಟ್ಟದಲ್ಲಿ ಗುರುವಾರ ಅಂಜನಾದ್ರಿ ಪರಿಸರ ಕೃಷಿ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸೇವಾ ಸಂಸ್ಥೆಯಿಂದ ಸ್ವಚ್ಛತಾ ಕಾರ್ಯಗಾರ ಜರುಗಿತು.</p>.<p>ಅಂಜನಾದ್ರಿ ಬೆಟ್ಟದ ಕೆಳಭಾಗದಲ್ಲಿನ ಟಿಫಿನ್, ಕಬ್ಬಿನರಸ, ತೆಂಗಿನಕಾಯಿ, ಬಟ್ಟೆ, ಬಟಾಣಿ, ಹಣ್ಣು, ಗೊಂಬೆ ಸೇರಿ ಇತರೆ ಸಣ್ಣಪುಟ್ಟ ವ್ಯಾಪಾರಸ್ಥರು ಬೆಳಿಗ್ಗೆಯಿಂದ ಅಪರಾಹ್ನದ ದವರಗೆ ಅಂಜನಾದ್ರಿ ಬೆಟ್ಟದ ಕೆಳಭಾಗದಿಂದ ಮೇಲ್ಭಾಗದವರೆಗೆ ಸ್ವಚ್ಛಗೊಳಿಸಿದರು.</p>.<p>ಸ್ವಚ್ಚತೆಯ ಭಾಗವಾಗಿ ಬಹುತೇಕ ಪ್ಲಾಸ್ಟಿಕ್ ಬಾಟಲ್, ಗುಟ್ಕಾ, ಹಳೆಯ ಚಪ್ಪಲಿ, ಪ್ಲಾಸ್ಟಿಕ್ ಪೇಪರ್ ಸಂಗ್ರಹವಾಗಿದ್ದು, ಅಂದಾಜು 100 ಕೆ.ಜಿ.ಯಷ್ಟು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗಿದೆ. ಈ ತ್ಯಾಜ್ಯವನ್ನು ಅಂಜನಾದ್ರಿ ದೇವಸ್ಥಾನದ ಮತ್ತು ಆನೆಗೊಂದಿ ಗ್ರಾ.ಪಂನ ಕಸ ವಿಲೇವಾರಿ ವಾಹನದಲ್ಲಿ, ತ್ಯಾಜ್ಯ ವಿಲೇವಾರಿ ಮಾಡಲಾಯಿತು.</p>.<p>ಅಂಜನಾದ್ರಿ ಪರಿಸರ ಕೃಷಿ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಶಾಂತ ರಾಜನಾಳ ಮಾತನಾಡಿ, ‘ಅಂಜನಾದ್ರಿಗೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದು, ದೇವಸ್ಥಾನದ ಬಳಿ ಜಾಗೃತಿ ಕೊರತೆಯ ಕಾರಣ ಬೆಟ್ಟದಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬೀಳುತ್ತಿದೆ’ ಎಂದು ಹೇಳಿದರು.</p>.<p>‘ಜಿಲ್ಲಾಡಳಿತ, ದೇವಸ್ಥಾನ ಸಮಿತಿ ಕೂಡಲೇ ಎಚ್ಚೆತ್ತುಕೊಂಡು ಪಾದಗಟ್ಟೆ ಬಳಿಯೇ ಪ್ಲಾಸ್ಟಿಕ್ ಬಾಟಲ್, ಪೇಪರ್, ಚಪ್ಪಲಿ, ಗುಟ್ಕಾ ಒಯ್ಯುವುದು ನಿರ್ಬಂಧಿಸಿ, ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದು ಹೇಳಿದರು.</p>.<p>ಸೇವಾ ಸಂಸ್ಥೆಯ ಉಪಾಧ್ಯಕ್ಷ ಬಾಳಪ್ಪ, ಕಾರ್ಯದರ್ಶಿ ದೊಡ್ಡಬಸಪ್ಪ, ಆಂಜನೇಯಗೌಡ, ಮಂಜುನಾಥ ಚಿಕ್ಕರಾಂಪುರ, ನಾಗರಾಜ ಎಂ., ನಿಂಗಜ್ಜ, ರಾಮನಾಯಕ, ಹನುಮವ್ವ ಸೇರಿ ಅಂಜನಾದ್ರಿ ಕೆಳಭಾಗದ ಸಣ್ಣಪುಟ್ಟ ಅಂಗಡಿಗಳ ವ್ಯಾಪಾರಸ್ಥರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>