ರಾಜ್ಯದಲ್ಲಿನ ಶಿಕ್ಷಣ ತಜ್ಞರು, ಪಾಲಕರು, ಮಕ್ಕಳು ಪರೀಕ್ಷೆ ನಡೆಸುವುದು ಸೂಕ್ತ ಎನ್ನುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಉದಾಹರಣೆ ತೆಗೆದುಕೊಂಡರೆ ಶೇಕಡ 80 ರಷ್ಟು ಪಾಲಕರು, ಮಕ್ಕಳು ಶಿಕ್ಷಣ ಇಲಾಖೆ ಅಧಿಕಾರಿಗಳ ಬಳಿ ಸಹಮತ ವ್ಯಕ್ತಪಡಿಸಿದ್ದಾರೆ. ಇದೇ ಅಭಿಪ್ರಾಯ ಇತರ ಜಿಲ್ಲೆಗಳ ಜನರದ್ದೂ ಆಗಿರುತ್ತದೆ. ಹಾಗಾಗಿ ರಾಜ್ಯ ಸರ್ಕಾರ ಪಿಯು ಪರೀಕ್ಷೆ ನಡೆಸಲು ಮುಂದಾಗಬೇಕು ಎಂದು ಹೇಳಿದರು.