ಅಂಜನಾದ್ರಿ ಬೆಟ್ಟ: ಕೋಟಿ ಕೋಟಿ ಆದಾಯ ಬಂದರೂ ಸೌಲಭ್ಯಕ್ಕೆ ಬರ
ವಿಜಯ ಎನ್.
Published : 3 ಫೆಬ್ರುವರಿ 2025, 7:48 IST
Last Updated : 3 ಫೆಬ್ರುವರಿ 2025, 7:48 IST
ಫಾಲೋ ಮಾಡಿ
Comments
ಅಂಜನಾದ್ರಿಯಿಂದ ಮೂರ್ನಾಲ್ಕು ಕಿ.ಮೀ. ದೂರದಲ್ಲಿರುವ ಆನೆಗೊಂದಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ
ಅಂಜನಾದ್ರಿ ಬೆಟ್ಟ ಏರುವಾಗ ಜನರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಂಡಿಲ್ಲ. ಈಗಲಾದರೂ ತುರ್ತು ಚಿಕಿತ್ಸಾ ಘಟಕ ಆರಂಭಿಸಲಿ.
ಶರೀಫ್ ಪಟ್ವಾರಿ ಸಾಣಾಪುರ ಗ್ರಾಮದ ನಿವಾಸಿ
ಆನೆಗೊಂದಿ ಪ್ರಾಥಮಿಕ ಆರೋಗ್ಯ ಕೇಂದ್ರ ನೆಪಕ್ಕೆ ಮಾತ್ರ ಇದೆ. ಇಲ್ಲಿ ಯಾವ ಚಿಕಿತ್ಸೆ ಸಿಗುವುದಿಲ್ಲ. ತುರ್ತು ಚಿಕಿತ್ಸೆಗೆ ಯಾವ ಸೌಲಭ್ಯಗಳಿಲ್ಲ. ನುರಿತ ಸಿಬ್ಬಂದಿ ಕೂಡ ಇಲ್ಲ.
ರಾಜ ಅಚ್ಚೊಳಿ ಆನೆಗೊಂದಿ ಗ್ರಾಮದ ನಿವಾಸಿ
ಅಂಜನಾದ್ರಿಯಲ್ಲಿ ತುರ್ತು ಚಿಕಿತ್ಸೆ ಸೌಲಭ್ಯವಿಲ್ಲದೆ ಹೆಚ್ಚಿನ ಸಂಖ್ಯೆಯ ಭಕ್ತರು ಮೃತಪಡುತ್ತಿದ್ದು ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ ಅಂಜನಾದ್ರಿ ಬಳಿಯೇ ರಸ್ತೆ ತಡೆದು ಪ್ರತಿಭಟಿಸುವೆ.
ಹುಲಿಗೆಮ್ಮ ಹೊನ್ನಪ್ಪ ನಾಯಕ ಅಧ್ಯಕ್ಷೆ ಆನೆಗೊಂದಿ ಗ್ರಾ.ಪಂ
ಬೆಟ್ಟ ಏರಿಳಿಯುವಾಗ ಸಾವಿನ ಘಟನೆಗಳು ನಡೆಯುತ್ತಿವೆ. ಈ ಕುರಿತು ಜಿಲ್ಲಾಧಿಕಾರಿಗೆ ಮಾಹಿತಿ ನೀಡುವೆ. ಆದಷ್ಟು ಬೇಗನೆ ಬೆಟ್ಟದ ಕೆಳಭಾಗದಲ್ಲಿ ತುರ್ತು ಚಿಕಿತ್ಸಾ ಘಟಕ ನುರಿತ ವೈದ್ಯರನ್ನು ನೇಮಿಸಲು ಕ್ರಮ ವಹಿಸುವೆ.
ಎಂ.ಎಚ್. ಪ್ರಕಾಶರಾವ್ ಕಾರ್ಯನಿರ್ವಾಹಕ ಅಧಿಕಾರಿ ಅಂಜನಾದ್ರಿ ದೇವಸ್ಥಾನ