‘ನವಲಿ ಬಳಿಯ ಸಮನಾಂತರ ಜಲಾಶಯ ನಿರ್ಮಾಣವು ಆಂಧ್ರ, ತೆಲಂಗಾಣ, ಕರ್ನಾಟಕದ ನಡುವಿನ ವಿಷಯ. ಬರೀ ಬಜೆಟ್ನಲ್ಲಿ ಅನುದಾನ ಘೋಷಿಸಿದರೆ ಸಾಲದು. ಕಾರ್ಯರೂಪಕ್ಕೆ ಬರಲು ಮೊದಲು ನಡೆಸಬೇಕಾದ ಕಾರ್ಯವೇ ನಡೆದಿಲ್ಲ. ಹಿಂದಿನ ಶಾಸಕರಿಗೆ ಇದರ ಬಗ್ಗೆ ಕಾಳಜಿಯೇ ಇರಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 18 ರಿಂದ 20 ಸ್ಥಾನದಲ್ಲಿ ಕಾಂಗ್ರೆಸ್ ಗೆಲ್ಲುವುದು ಖಚಿತ. ಕನಕಗಿರಿ, ಕಾರಟಗಿ ಭಾಗಕ್ಕೆ ದಿನದ 24 ಗಂಟೆಯೂ ನದಿಯ ಸಂಪರ್ಕದ ಮಾರ್ಗದಿಂದ ನೀರು ಪೂರೈಸುವ ಯೋಜನೆಗೆ ಶೀಘ್ರವೇ ಚಾಲನೆ ದೊರೆಯಲಿದೆ’ ಎಂದು ಸಚಿವರು ಹೇಳಿದರು.