ಅಂಜನಾದ್ರಿ: ನಿಂಗಜ್ಜ ಸ್ವಾಮೀಜಿ ಉರುಳು ಸೇವೆ

ಅಂಜನಾದ್ರಿ (ಗಂಗಾವತಿ): ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇಗುಲದ 575 ಮೆಟ್ಟಿಲುಗಳ ಮೇಲೆ ಧಾರವಾಡದ ಮೈಲಾರ ನಿಂಗಜ್ಜ ಸ್ವಾಮೀಜಿ ಶನಿವಾರ ಉರುಳು ಸೇವೆ ಮಾಡಿದರು.
ಭಕ್ತರ ನೆರವಿನಿಂದ ಉರುಳು ಸೇವೆ ಮಾಡಿಕೊಂಡು ಅಂಜನಾದ್ರಿ ಬೆಟ್ಟ ತಲುಪಿದ ನಿಂಗಜ್ಜ ಸ್ವಾಮೀಜಿ ಅವರು ಆಂಜನೇಯ ಸ್ವಾಮಿ ದರ್ಶನ ಪಡೆದರು.
ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಮುಖಂಡ ಸಂತೋಷ ಕೆಲೋಜಿ, ಅನ್ನಪೂರ್ಣ ಸಿಂಗ್ ಹಾಗೂ ಶ್ರೀನಿವಾಸರೆಡ್ಡಿ, ಹಾಗೂ ಮೂರ್ತಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.