<p><strong>ಭಾರತೀನಗರ</strong>: ಸಮೀಪದ ಕಾರ್ಕಹಳ್ಳಿ ಗ್ರಾಮದಲ್ಲಿ ಕಳೆದ ಭಾನುವಾರ ರಾತ್ರಿ ಚಿರತೆ 3 ಮೇಕೆಗಳನ್ನು ಹೊತ್ತೊಯ್ದಿದೆ.</p>.<p>ಗ್ರಾಮದ ಬೋರೇಗೌಡ ಎಂಬುವವರ ಮನೆ ಬಳಿಯ ಮೇಕೆ ಕೊಪ್ಪಲಿನೊಳಗೆ ನುಗ್ಗಿದ ಚಿರತೆ ಮೇಕೆಯೊಂದನ್ನು ಹಿಡಿದು ತಿನ್ನುತ್ತಿದ್ದು, ಮನೆಯವರು ಮನೆಯಿಂದ ಹೊರಗೆ ಬಂದು ನೋಡಲಾಗಿ ಮೇಕೆ ಅರಚಿಕೊಳ್ಳುತ್ತಿದ್ದವು.</p>.<p>ಸ್ವಲ್ಪ ಸಮಯ ಬಿಟ್ಟು ಮತ್ತೆ ಬಂದ ಚಿರತೆ ಮತ್ತೊಂದು ಮೇಕೆಯನ್ನು ಮಾಲೀಕರ ಕಣ್ಣೆದುರಿಗೇ ಹೊತೊಯ್ದಿದ್ದು, ಮುಂಜಾನೆ 3 ಗಂಟೆ ವೇಳೆಗೆ ಚಿರತೆ ಮತ್ತೊಂದು ಮೇಕೆಯನ್ನು ಹೊತ್ತೊಯ್ಯಲು ಪ್ರಯತ್ನಿಸಿದೆ. ಸ್ಥಳಿಯರ ಸಹಕಾರದಿಂದ ಚಿರತೆಯನ್ನು ಓಡಿಸಲು ಪ್ರಯತ್ನ ಪಟ್ಟರು. ಆ ವೇಳೆಗಾಗಲೇ ಚಿರತೆ ಮೇಕೆಯನ್ನು ಕೊಂದು ಓಡಿ ಹೋಯಿತೆಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದರು.</p>.<p>ಹೆಚ್ಚಾಗಿ ವಲಸೆ ಬಂದಿರುವ ಚಿರತೆಗಳು: ಇಲ್ಲಿಯ ಅಣ್ಣೂರು ಗ್ರಾಮಕ್ಕೆ 6 ಕ್ಕಿಂತಲೂ ಹೆಚ್ಚು ಚಿರತೆಗಳು ವಲಸೆ ಬಂದಿದ್ದು, ಆಹಾರಕ್ಕಾಗಿ ಸಮೀಪದ ಮೆಣಸಗೆರೆ, ಕಾರ್ಕಹಳ್ಳಿ, ಬಸವೇಶ್ವರನಗರದಲ್ಲಿ ಮೇಕೆಗಳು, ನಾಯಿಗಳನ್ನು ಹಿಡಿದು ಕೊಂದು ಹಾಕಿವೆ. ಅರಣ್ಯ ಇಲಾಖೆಯ ಸಿಬ್ಬಂದಿ ಈ ಬಗ್ಗೆ ಗಮನಹರಿಸದಿದ್ದು, ಜನರು ಹೊಲ, ಗದ್ದೆಗಳಿಗೆ ಹೋಗಲು ಹೆದರುವಂತಾಗಿದೆ. ಈ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಗಳನ್ನು ಸೆರೆಹಿಡಿಯಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾರತೀನಗರ</strong>: ಸಮೀಪದ ಕಾರ್ಕಹಳ್ಳಿ ಗ್ರಾಮದಲ್ಲಿ ಕಳೆದ ಭಾನುವಾರ ರಾತ್ರಿ ಚಿರತೆ 3 ಮೇಕೆಗಳನ್ನು ಹೊತ್ತೊಯ್ದಿದೆ.</p>.<p>ಗ್ರಾಮದ ಬೋರೇಗೌಡ ಎಂಬುವವರ ಮನೆ ಬಳಿಯ ಮೇಕೆ ಕೊಪ್ಪಲಿನೊಳಗೆ ನುಗ್ಗಿದ ಚಿರತೆ ಮೇಕೆಯೊಂದನ್ನು ಹಿಡಿದು ತಿನ್ನುತ್ತಿದ್ದು, ಮನೆಯವರು ಮನೆಯಿಂದ ಹೊರಗೆ ಬಂದು ನೋಡಲಾಗಿ ಮೇಕೆ ಅರಚಿಕೊಳ್ಳುತ್ತಿದ್ದವು.</p>.<p>ಸ್ವಲ್ಪ ಸಮಯ ಬಿಟ್ಟು ಮತ್ತೆ ಬಂದ ಚಿರತೆ ಮತ್ತೊಂದು ಮೇಕೆಯನ್ನು ಮಾಲೀಕರ ಕಣ್ಣೆದುರಿಗೇ ಹೊತೊಯ್ದಿದ್ದು, ಮುಂಜಾನೆ 3 ಗಂಟೆ ವೇಳೆಗೆ ಚಿರತೆ ಮತ್ತೊಂದು ಮೇಕೆಯನ್ನು ಹೊತ್ತೊಯ್ಯಲು ಪ್ರಯತ್ನಿಸಿದೆ. ಸ್ಥಳಿಯರ ಸಹಕಾರದಿಂದ ಚಿರತೆಯನ್ನು ಓಡಿಸಲು ಪ್ರಯತ್ನ ಪಟ್ಟರು. ಆ ವೇಳೆಗಾಗಲೇ ಚಿರತೆ ಮೇಕೆಯನ್ನು ಕೊಂದು ಓಡಿ ಹೋಯಿತೆಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದರು.</p>.<p>ಹೆಚ್ಚಾಗಿ ವಲಸೆ ಬಂದಿರುವ ಚಿರತೆಗಳು: ಇಲ್ಲಿಯ ಅಣ್ಣೂರು ಗ್ರಾಮಕ್ಕೆ 6 ಕ್ಕಿಂತಲೂ ಹೆಚ್ಚು ಚಿರತೆಗಳು ವಲಸೆ ಬಂದಿದ್ದು, ಆಹಾರಕ್ಕಾಗಿ ಸಮೀಪದ ಮೆಣಸಗೆರೆ, ಕಾರ್ಕಹಳ್ಳಿ, ಬಸವೇಶ್ವರನಗರದಲ್ಲಿ ಮೇಕೆಗಳು, ನಾಯಿಗಳನ್ನು ಹಿಡಿದು ಕೊಂದು ಹಾಕಿವೆ. ಅರಣ್ಯ ಇಲಾಖೆಯ ಸಿಬ್ಬಂದಿ ಈ ಬಗ್ಗೆ ಗಮನಹರಿಸದಿದ್ದು, ಜನರು ಹೊಲ, ಗದ್ದೆಗಳಿಗೆ ಹೋಗಲು ಹೆದರುವಂತಾಗಿದೆ. ಈ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಗಳನ್ನು ಸೆರೆಹಿಡಿಯಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>