ಬೆಳಕವಾಡಿ: ಸಮೀಪದ ಜವನಗಹಳ್ಳಿಯಲ್ಲಿ ಮಂಗಳವಾರ ಬೆಳಗಿನ ಜಾವ ಮೇಕೆಯ ಮೇಲೆ ಚಿರತೆಯೊಂದು ದಾಳಿ ಮಾಡಿ ಕೊಂದು ಹಾಕಿದೆ.
ಗ್ರಾಮದ ಮಣಿ ಎಂಬುವರು ದೇವರ ಸೇವೆಗೆಂದು ಸಾಕಿ, ಮನೆಯ ಮುಂಭಾಗ ಕಟ್ಟಿದ್ದ ಮೇಕೆಯ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ. ಇದರಿಂದ ಸುಮಾರು ₹ 20 ಸಾವಿರ ನಷ್ಟವಾಗಿದೆ.
‘ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿರುವುದರಿಂದ ಜನರಲ್ಲಿ ಆತಂಕ ನಿರ್ಮಾಣವಾಗಿದೆ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಚಿರತೆ ಸೆರೆಗೆ ಮುಂದಾಗಬೇಕು’ ಎಂದು ಗ್ರಾಮದ ಮಹದೇವ್, ಬಸವರಾಜು, ನಂದೀಶ್, ಮಣಿ ಒತ್ತಾಯಿಸಿದ್ದಾರೆ.