ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಮಂಡ್ಯ | ಮೂಲ ಸೌಕರ್ಯಗಳ ಕೊರತೆ: ಸರ್ಕಾರಿ ಕಚೇರಿಗಳಿಗೆ ಬೇಕಿದೆ ಚಿಕಿತ್ಸೆ

Published : 18 ಡಿಸೆಂಬರ್ 2023, 6:41 IST
Last Updated : 18 ಡಿಸೆಂಬರ್ 2023, 6:41 IST
ಫಾಲೋ ಮಾಡಿ
Comments
ಜಿಲ್ಲಾಧಿಕಾರಿ ಕಚೇರಿಗೆ ರ್‍ಯಾಂಪ್‌ ಬಳಸಿ ಅಂಗವಿಕಲರೊಬ್ಬರನ್ನು ಕರೆದೊಯ್ಯುತ್ತಿರುವುದು
ಜಿಲ್ಲಾಧಿಕಾರಿ ಕಚೇರಿಗೆ ರ್‍ಯಾಂಪ್‌ ಬಳಸಿ ಅಂಗವಿಕಲರೊಬ್ಬರನ್ನು ಕರೆದೊಯ್ಯುತ್ತಿರುವುದು
ಜಿಲ್ಲಾಧಿಕಾರಿ ಕಚೇರಿ ಒಳಗಿನ ಆವರಣದಲ್ಲಿ ಸ್ವಚ್ಛತೆಯ ಕೊರತೆ
ಜಿಲ್ಲಾಧಿಕಾರಿ ಕಚೇರಿ ಒಳಗಿನ ಆವರಣದಲ್ಲಿ ಸ್ವಚ್ಛತೆಯ ಕೊರತೆ
ಶ್ರೀರಂಗಪಟ್ಟಣ ತಾಲ್ಲೂಕು ಆಡಳಿತ ಸೌಧದೊಳಗೆ ಕೆಟ್ಟು ನಿಂತ ನೀರಿನ ಫಿಲ್ಟರ್‌
ಶ್ರೀರಂಗಪಟ್ಟಣ ತಾಲ್ಲೂಕು ಆಡಳಿತ ಸೌಧದೊಳಗೆ ಕೆಟ್ಟು ನಿಂತ ನೀರಿನ ಫಿಲ್ಟರ್‌
ಕಂದಾಯ ಅದಾಲತ್ ಪಿಂಚಿಣಿ ಅದಾಲತ್ ಜನತಾ ದರ್ಶನದಂತಹ ಕಾರ್ಯಕ್ರಮಗಳು ಸರಿಯಾಗಿ ನಡೆಯುತ್ತಿಲ್ಲ. ಕೆ.ಆರ್. ಪೇಟೆ ಪುರಸಭೆಯಲ್ಲಿ ಜನರು ಕೊಟ್ಟ ಮನವಿಗಳನ್ನು ಶೀಘ್ರ ವಿಲೇವಾರಿ ಮಾಡುತ್ತಿಲ್ಲ.
ಮಂಜುನಾಥ್‌ ಪುರಸಭೆ ಸದಸ್ಯ ಕೆ.ಆರ್. ಪೇಟೆ
ಜನಸ್ನೇಹಿ ಆಗಬೇಕಾದ ಸರ್ಕಾರಿ ಇಲಾಖೆಗಳು ಜನರಿಂದ ದೂರ ಸರಿದು ಕಾರ್ಯ ನಿರ್ವಹಿಸುತ್ತಿವೆ. ಜನಸಾಮಾನ್ಯರ ಸಮಸ್ಯೆ ನಿವಾರಣೆಗಾಗಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ಮುಂದೆ ಅಂಗಲಾಚಿ ಕೇಳಿಕೊಳ್ಳುವ ಪರಿಸ್ಥಿತಿ ಹೆಚ್ಚಾಗಿದೆ
ಬಸವೇಗೌಡ ಅಧ್ಯಕ್ಷ ನಾಗರೀಕ ಹಿತರಕ್ಷಣಾ ವೇದಿಕೆ ಕೆ.ಆರ್. ಪೇಟೆ
ಶ್ರೀರಂಗಪಟ್ಟಣ ಮಿನಿ ವಿಧಾನಸೌಧದ ಎರಡನೇ‌ ಮಹಡಿಯಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಇದ್ದು ಅಂಗವಿಕಲರು ವೃದ್ದರಿಗೆ ಹತ್ತಿ ಇಳಿಯಲು ಕಷ್ಟವಾಗಿದೆ. ಈ ಕಚೇರಿಯನ್ನು ಕೆಳಕ್ಕೆ ಸ್ಥಳಾಂತರಿಸಬೇಕು. ಸಾರ್ವಜನಿಕರಿಗೆ ಶೌಚಾಲಯ ಕುಡಿಯುವ‌ ನೀರಿನ ವ್ಯವಸ್ಥೆ ಮಾಡಬೇಕು
ಅಪ್ಪಾಜಿ ಗ್ರಾ.ಪಂ. ಸದಸ್ಯ ಕೆ.ಶೆಟ್ಟಹಳ್ಳಿ ಶ್ರೀರಂಗಪಟ್ಟಣ ತಾಲ್ಲೂಕು
ಸರ್ಕಾರಿ ಕಚೇರಿಗಳನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಜಾರಿಗೆ ತಂದರೂ ಇನ್ನೂ ಕೆಲ ಸುಧಾರಣೆಯಾಗಬೇಕು. ಮಹಿಳೆಯರಿಗೆ ತ್ವರಿತಗತಿಯಲ್ಲಿ ಸೇವೆ ಸಿಗುವಂತಾಗಬೇಕು
ನಂದಿನಿ ಮಳವಳ್ಳಿ
ತಾಲ್ಲೂಕು ಕಚೇರಿಯಲ್ಲಿನ ಕಡತಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಕಚೇರಿಯಲ್ಲಿ ಸಾರ್ವಜನಿಕರ ಯಾವುದೇ ಅರ್ಜಿಗಳು ಬಾಕಿ ಉಳಿಯದಂತೆ ಕ್ರಮ ವಹಿಸಿದ್ದೇವೆ. ತಾಲ್ಲೂಕು ಆಡಳಿತ ಸೌಧ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿದೆ
ಜಿ.ಎಸ್‌. ಶ್ರೇಯಸ್ ತಹಶೀಲ್ದಾರ್ ಪಾಂಡವಪುರ
ಅರ್ಜಿ ಸ್ವೀಕಾರ ವಿಲೇವಾರಿ ವ್ಯವಸ್ಥೆ
ಜಿಲ್ಲಾಧಿಕಾರಿ ಜಿಲ್ಲಾ ಪಂಚಾಯಿತಿ ಲೋಕಾಯುಕ್ತ ಕಚೇರಿ ಸೇರಿದಂತೆ ಪ್ರಮುಖ ಕಚೇರಿಗಳಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗೂ ಅದರ ವಿಲೇವಾರಿಗೆ ಪ್ರತ್ಯೇಕ ವಿಭಾಗಗಳು ಕಾರ್ಯ ನಿರ್ವಹಿಸುತ್ತಿವೆ. ಸಾರ್ವಜನಿಕರು ತಮ್ಮ ಯಾವುದೇ ಕುಂದುಕೊರತೆ ಸ್ವರೂಪದ ದೂರುಗಳು ಇನ್ನಿತರೆ ವಿಷಯಗಳ ಬಗೆಗಿನ ಅಹವಾಲುಗಳನ್ನು ಇಲ್ಲಿ ಸಲ್ಲಿಸಬಹುದು. ಜಿ.ಪಂ. ಭವನದ ಆರಂಭದಲ್ಲಿಯೇ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ಪ್ರಾಧಿಕಾರದ ಕಚೇರಿಯೂ ಇದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗಳೂ ಇವೆ. ಅಲ್ಲಿಯೂ ಅಹವಾಲು ಸಲ್ಲಿಕೆಗೆ ಅವಕಾಶ ಇದೆ. ಬಹುತೇಕ ತಾಲ್ಲೂಕು ಕೇಂದ್ರಗಳಲ್ಲಿ ಅರ್ಜಿ ಸ್ವೀಕಾರದ ಕುರಿತು ಜನರ ದೂರುಗಳಿವೆ. ಸಕಾಲ ಯೋಜನೆ ಜಾರಿಯಲ್ಲಿ ಇದ್ದರೂ ಸಕಾಲಕ್ಕೆ ಸೇವೆಗಳು ಸಿಗುತ್ತಿಲ್ಲ. ಅಧಿಕಾರಿಗಳು ಮತ್ತು ಸಿಬ್ಬಂದಿ ತ್ವರಿತವಾಗಿ ಸ್ಪಂದಿಸುವುದಿಲ್ಲ ಎನ್ನುವುದು ಜನರ ದೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT