ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ (ಎಎಸ್ಐ) ಅಡಿಯಲ್ಲಿ ಬರುವ ಪಟ್ಟಣದಲ್ಲಿರುವ ಸ್ಮಾರಕಗಳಿಗೂ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಟಿಪ್ಪು ಬೇಸಿಗೆ ಅರಮನೆ, ಗುಂಬಸ್, ಕರ್ನಲ್ ಬೇಯ್ಲಿ ಡಂಜನ್, ಇನ್ಮಾನ್ಸ್ ಡಂಜನ್, ಟಿಪ್ಪು ಮಡಿದ ಸ್ಥಳ ಸೇರಿದಂತೆ 10 ಸ್ಮಾರಕಗಳಿದ್ದು, ಪ್ರವಾಸಿಗರ ವೀಕ್ಷಣೆಗೆ ಅವಕಾಶ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.