ಮಂಡ್ಯ: ‘ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದು ತಪ್ಪಲ್ಲ, ವಿಡಿಯೊ ಮಾಡಿದ್ದೂ ತಪ್ಪಲ್ಲ, ಆದರೆ, ಹಾದಿಬೀದಿಯಲ್ಲಿ ಸಿಕ್ಕ ಪೆನ್ಡ್ರೈವ್ ಹಂಚಿದ್ದೇ ತಪ್ಪೆಂದು ಹೇಳುವ ಮೂಲಕ ಜೆಡಿಎಸ್, ಬಿಜೆಪಿ ಮುಖಂಡರು, ಪ್ರಜ್ವಲ್ ರೇವಣ್ಣ ಮಾಡಿದ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಶುಕ್ರವಾರ ದೂರಿದರು.