ಶೈಕ್ಷಣಿಕ ಹಂತದಲ್ಲಿ ಗೌರಿ ಕ್ರೀಡಾಪಟುವಾಗಿದ್ದರು, ಕಬಡ್ಡಿ, ಓಟದಲ್ಲಿ ಸಾಧನೆ ಮಾಡಿದ್ದರು. ಆಲಹಳ್ಳಿ ಅವರ ತವರು ಮನೆ. ಹನಿಯಂಬಾಡಿಯ ಶ್ರೀನಿವಾಸ್ ಅವರ ಕೈಹಿಡಿದ ಅವರು ಸ್ವಂತ ಉದ್ಯೋಗ ಮಾಡಲು ಪತಿಗೂ ಸ್ಫೂರ್ತಿಯಾದರು. ಗಾರೆ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಅವರಲ್ಲೂ ಕನಸುಗಳನ್ನು ಬಿತ್ತಿದರು. ಅದರ ಪರಿಣಾಮವಾಗಿ ಶ್ರೀನಿವಾಸ್– ಗೌರಿ ದಂಪತಿ ಆಸ್ಪತ್ರೆ ರಸ್ತೆಯಲ್ಲಿ ಎಳನೀರು ಮಾರಾಟ ಮಾಡುವ ಸಣ್ಣ ಉದ್ಯೋಗ ಆರಂಭಿಸಿದರು.