<p><strong>ಮೈಸೂರು: </strong>ಇಲ್ಲಿನ ಶ್ರೀರಾಂಪುರ ನಿವಾಸಿ ಜಯಮ್ಮ ಎಂಬುವವರು ಮೃತಪಟ್ಟ ಬಳಿಕ ಅವರ ಹೆಬ್ಬೆರಳಿನ ಮುದ್ರೆಯನ್ನು ಸಂಬಂಧಿಕರು ಕೆಲ ಕಾಗದ ಪತ್ರಗಳಿಗೆ ಹಾಕಿಕೊಳ್ಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.</p>.<p>ಜಯಮ್ಮ ಅವರ ಅಕ್ಕನ ಮಗ ಸುರೇಶ್ ಎಂಬಾತನ ವಿರುದ್ಧ ಇಲ್ಲಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420, 467, 511 ಅನ್ವಯ ಭಾನುವಾರ ಪ್ರಕರಣ ದಾಖಲಾಗಿದೆ.</p>.<p>‘ಜಯಮ್ಮ ಅವರಿಗೆ ಮಕ್ಕಳಿರಲಿಲ್ಲ. ಇವರ ಪತಿ ಬಹಳ ಹಿಂದೆಯೇ ಮೃತಪಟ್ಟಿದ್ದರು. ಇವರಿಗೆ ಮನೆ ಹಾಗೂ ಜಮೀನು ಸೇರಿದಂತೆ ಸ್ವಲ್ಪ ಆಸ್ತಿ ಇತ್ತು. ಸಂಬಂಧಿಕರು ನೋಡಿಕೊಳ್ಳದೇ ಇದ್ದುದ್ದರಿಂದ ಇವರು ಒಂಟಿಯಾಗಿ ಜೀವಿಸುತ್ತಿದ್ದು. ಅನಾರೋಗ್ಯದಿಂದ ನ.17ರಂದು ಜಯಮ್ಮ ಮೃತಪಟ್ಟ ಬಳಿಕ ಸುಮಾರು 7ರಿಂದ 8 ಕಾಗದ ಪತ್ರಗಳಿಗೆ ಹೆಬ್ಬೆರಳಿನ ಮುದ್ರೆಯನ್ನು ಸುರೇಶ್ ಹಾಕಿಕೊಳ್ಳುತ್ತಿದ್ದ. ಇದನ್ನು ವಿಡಿಯೊ ಮಾಡಿಕೊಂಡ ಸಂಬಂಧಿಕರೊಬ್ಬರು ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>‘ಮೃತ ಜಯಮ್ಮ ಅವರಿಗೆ ಪಿತ್ರಾರ್ಜಿತ ಆಸ್ತಿ ಇತ್ತು. ಆಸ್ತಿ ವಿವಾದವನ್ನು ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಬೇಕೇ ವಿನಹಾ ಶವದ ಹೆಬ್ಬೆಟ್ಟು ಹಾಕಿಕೊಳ್ಳುವುದು ಕಾನೂನು ಪ್ರಕಾರ ತಪ್ಪು, ಮಾತ್ರವಲ್ಲ ತೀರಾ ಅಮಾನವೀಯ. ಘಟನೆ ನಡೆದು ಸಾಕಷ್ಟು ದಿನಗಳಾದರೂ ನನ್ನನ್ನು ಈ ಸನ್ನಿವೇಶ ಕಾಡುತ್ತಿತ್ತು’ ಎಂದು ಸಂಬಂಧಿಕರೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಇಲ್ಲಿನ ಶ್ರೀರಾಂಪುರ ನಿವಾಸಿ ಜಯಮ್ಮ ಎಂಬುವವರು ಮೃತಪಟ್ಟ ಬಳಿಕ ಅವರ ಹೆಬ್ಬೆರಳಿನ ಮುದ್ರೆಯನ್ನು ಸಂಬಂಧಿಕರು ಕೆಲ ಕಾಗದ ಪತ್ರಗಳಿಗೆ ಹಾಕಿಕೊಳ್ಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.</p>.<p>ಜಯಮ್ಮ ಅವರ ಅಕ್ಕನ ಮಗ ಸುರೇಶ್ ಎಂಬಾತನ ವಿರುದ್ಧ ಇಲ್ಲಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420, 467, 511 ಅನ್ವಯ ಭಾನುವಾರ ಪ್ರಕರಣ ದಾಖಲಾಗಿದೆ.</p>.<p>‘ಜಯಮ್ಮ ಅವರಿಗೆ ಮಕ್ಕಳಿರಲಿಲ್ಲ. ಇವರ ಪತಿ ಬಹಳ ಹಿಂದೆಯೇ ಮೃತಪಟ್ಟಿದ್ದರು. ಇವರಿಗೆ ಮನೆ ಹಾಗೂ ಜಮೀನು ಸೇರಿದಂತೆ ಸ್ವಲ್ಪ ಆಸ್ತಿ ಇತ್ತು. ಸಂಬಂಧಿಕರು ನೋಡಿಕೊಳ್ಳದೇ ಇದ್ದುದ್ದರಿಂದ ಇವರು ಒಂಟಿಯಾಗಿ ಜೀವಿಸುತ್ತಿದ್ದು. ಅನಾರೋಗ್ಯದಿಂದ ನ.17ರಂದು ಜಯಮ್ಮ ಮೃತಪಟ್ಟ ಬಳಿಕ ಸುಮಾರು 7ರಿಂದ 8 ಕಾಗದ ಪತ್ರಗಳಿಗೆ ಹೆಬ್ಬೆರಳಿನ ಮುದ್ರೆಯನ್ನು ಸುರೇಶ್ ಹಾಕಿಕೊಳ್ಳುತ್ತಿದ್ದ. ಇದನ್ನು ವಿಡಿಯೊ ಮಾಡಿಕೊಂಡ ಸಂಬಂಧಿಕರೊಬ್ಬರು ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>‘ಮೃತ ಜಯಮ್ಮ ಅವರಿಗೆ ಪಿತ್ರಾರ್ಜಿತ ಆಸ್ತಿ ಇತ್ತು. ಆಸ್ತಿ ವಿವಾದವನ್ನು ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಬೇಕೇ ವಿನಹಾ ಶವದ ಹೆಬ್ಬೆಟ್ಟು ಹಾಕಿಕೊಳ್ಳುವುದು ಕಾನೂನು ಪ್ರಕಾರ ತಪ್ಪು, ಮಾತ್ರವಲ್ಲ ತೀರಾ ಅಮಾನವೀಯ. ಘಟನೆ ನಡೆದು ಸಾಕಷ್ಟು ದಿನಗಳಾದರೂ ನನ್ನನ್ನು ಈ ಸನ್ನಿವೇಶ ಕಾಡುತ್ತಿತ್ತು’ ಎಂದು ಸಂಬಂಧಿಕರೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>