ಈ ಮೊದಲು ಮುಷ್ಕರ ನಡೆಸಲು 14 ದಿನಗಳ ಮುಂಚಿತವಾಗಿ ನೋಟಿಸ್ ನೀಡಬಹುದಿತ್ತು. ಈಗ 60 ದಿನಗಳಿಗೆ ಮುಂಚೆ ನೀಡಬೇಕಿದೆ. ಜತೆಗೆ, ಸಂಧಾನ ಅಧಿಕಾರಿಯ ಮುಂದೆ, ಕೈಗಾರಿಕಾ ರಾಜ್ಯ ಪರಿಹಾರ ಮಂಡಳಿ, ರಾಷ್ಟ್ರೀಯ ಕೈಗಾರಿಕಾ ವ್ಯಾಜ್ಯ ಪರಿಹಾರ ಮಂಡಳಿಗಳಲ್ಲಿ ವಿಚಾರಣೆ ನಡೆಸುವ ವೇಳೆ ಮುಷ್ಕರ ನಡೆಸುವಂತಿಲ್ಲ ಎಂದು ಮಾರ್ಪಾಡಿಸಲಾಗಿದೆ. ಇದರಿಂದ ಕಾರ್ಮಿಕರಿಗೆ ನ್ಯಾಯ ಸಿಗುವ ಸಾಧ್ಯತೆ ತೀರ ಕಡಿಮೆಯಾಗಿದೆ ಮತ್ತು ವಿಳಂಬವಾಗಿದೆ ಎಂದು ಹೇಳಿದರು.