ತಕ್ಷಣವೇ ಎಚ್ಚೆತ್ತ ಬಿ.ಸಿ.ಪಾಟೀಲ ‘ರಾಜ್ಯದ ಉತ್ತರ ಭಾಗದಲ್ಲಿ ಮಳೆಯಿಂದಾಗಿರುವ ಹಾನಿಯ ಸರ್ವೆ ಶುಕ್ರವಾರದಿಂದ ಆರಂಭವಾಗಿದೆ. ನಷ್ಟದ ಪ್ರಮಾಣವನ್ನು ತಿಳಿಸಲಾಗುವುದು. ಎರಡು ತಿಂಗಳ ಹಿಂದೆ ಆಗಿರುವ ಹಾನಿಯ ಮಾಹಿತಿಯನ್ನು ಶೀಘ್ರದಲ್ಲೇ ಪಡೆದುಕೊಳ್ಳುವೆ’ ಎಂದು ತಡವರಿಸಿಕೊಂಡೇ ಹೇಳಿದ ಸಚಿವರು, ಬೆಳೆ ಸಮೀಕ್ಷೆಯ ವಿವರ ನೀಡಿ ಮತ್ತೊಂದು ಸಭೆಯಿದೆ ಎಂದು ಸ್ಥಳದಿಂದ ಕಾಲ್ಕಿತ್ತರು.