<p><strong>ಮೈಸೂರು</strong>: ಮೈಸೂರಿನ ಪ್ರಜ್ಞಾವಂತ ಜನರು ರಾಮಕೃಷ್ಣ ಆಶ್ರಮದ ವಿವೇಕ ಸ್ಮಾರಕ ನಿರ್ಮಾಣ ಯೋಜನೆಯ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು. ಹೆಚ್ಚು ಹೆಚ್ಚು ಜನರು ಮುಂದೆ ಬಂದು ಧ್ವನಿ ಎತ್ತಿ ಈ ಮಹತ್ಕಾರ್ಯವನ್ನು ಬೆಂಬಲಿಸಬೇಕು ಎಂದು ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಕರೆ ನೀಡಿದ್ದಾರೆ.</p>.<p>ಇವರ ಹೇಳಿಕೆಗೆ ಹಂ.ಪ.ನಾಗರಾಜಯ್ಯ, ಸಿ.ಪಿ.ಕೃಷ್ಣಕುಮಾರ್, ಚಿದಾನಂದಗೌಡ, ಭೈರವಮೂರ್ತಿ ಸಹ ದನಿಗೂಡಿಸಿದ್ದಾರೆ.</p>.<p>ವಿವೇಕಾನಂದ ಅವರು ತಂಗಿದ್ದ ಸ್ಥಳದಲ್ಲಿ ಈ ಯೋಜನೆ ಸಾಕಾರಗೊಂಡು ಸಾವಿರಾರು ಯುವಕರ ಭವಿಷ್ಯ ರೂಪುಗೊಳ್ಳುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.</p>.<p>ಹೈಕೋರ್ಟ್ ಸಹ ರಾಮಕೃಷ್ಣ ಆಶ್ರಮದ ಪರವಾಗಿ ತೀರ್ಪು ನೀಡಿರುವುದು ಸ್ವಾಗತಾರ್ಹ ಹಾಗೂ ಔಚಿತ್ಯಪೂರ್ಣವೂ ಆಗಿದೆ. ಆದಾಗ್ಯೂ, ಸ್ಮಾರಕ ವಿರೋಧಿಗಳು ಮತ್ತೆ ಮತ್ತೆ ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲ ಎಂದು ಅವರು ಟೀಕಿಸಿದ್ದಾರೆ.</p>.<p>ಕೋವಿಡ್ ಸಂಕಷ್ಟದಲ್ಲೂ, ಲಾಕ್ಡೌನ್ ಮಧ್ಯೆದಲ್ಲಿ ಚಿಕ್ಕಮಕ್ಕಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವುದು ಅನುಚಿತ ಎಂದು ಅವರು ಖಂಡಿಸಿದ್ದಾರೆ.</p>.<p>ಲಕ್ಷ್ಮೀಪುರಂ ಕನ್ನಡ ಶಾಲೆಯನ್ನು ಸಂಗೀತ ವಿಶ್ವವಿದ್ಯಾಲಯಕ್ಕೆ ಬಿಟ್ಟುಕೊಟ್ಟಾಗ, ಇಟ್ಟಿಗೆಗೂಡಿನ ಕನ್ನಡ ಶಾಲೆ ಮುಚ್ಚಿದಾಗ ಮಾತನಾಡದ ಇವರು ಎನ್ಟಿಎಂ ಶಾಲೆ ವಿಚಾರದಲ್ಲಿ ದನಿ ಎತ್ತುತ್ತಿದ್ದಾರೆ. ಭಾರತೀಯ ಸಂಸ್ಕೃತಿಗೆ ಪೂರಕವಾದ ಕೆಲಸಗಳಿಗೆಲ್ಲ ಕಲ್ಲು ಹಾಕುವುದೇ ಇವರ ಮಾನಸಿಕ ಸ್ಥಿತಿಯಾಗಿದೆ ಎಂದು ಅವರು ಹರಿಹಾಯ್ದಿದ್ದಾರೆ.</p>.<p>ಕನ್ನಡ ಶಾಲೆ ಮುಚ್ಚಿ ಹೋಗುತ್ತದೆ ಎಂಬುದು ಸುಳ್ಳು. ಈಗ ಇಲ್ಲಿರುವ ಶಾಲೆಯನ್ನು ದೇವರಾಜ ಶಾಲೆಯಲ್ಲಿ ವಿಲೀನಗೊಳಿಸಲಾಗುತ್ತದೆ. ದೇವರಾಜ ಶಾಲೆಗೆ ರಾಮಕೃಷ್ಣಾಶ್ರಮವು ಎಲ್ಲ ನೆರವನ್ನೂ ನೀಡಲಿದೆ. ಈ ಶಾಲೆಯು ಮಾದರಿ ಶಾಲೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.<p>ಸ್ವಾಮಿ ವಿವೇಕಾನಂದ ಅವರು ಮಕ್ಕಳು ಮತ್ತು ಯುವಜನತೆಗೆ ಉಜ್ವಲ ಆದರ್ಶವಾಗಿದ್ದಾರೆ. ಆದರೆ, ಇಂತಹ ಪ್ರತಿಭಟನೆಗಳು ಮಕ್ಕಳ ಮನಸ್ಸಿನಲ್ಲಿ ಸ್ವಾಮಿ ವಿವೇಕಾನಂದ ಕುರಿತು ತಪ್ಪು ಅಭಿಪ್ರಾಯ ಮೂಡಿಸುತ್ತವೆ ಎಂದು ಅವರ ಕಳವಳ ವ್ಯಕ್ತಪಡಿಸಿದ್ದಾರೆ.</p>.<p>ಇವರ ಜಂಟಿ ಹೇಳಿಕೆಯನ್ನು ಶ್ರೀ ರಾಮಕೃಷ್ಣ ಆಶ್ರಮವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಮೈಸೂರಿನ ಪ್ರಜ್ಞಾವಂತ ಜನರು ರಾಮಕೃಷ್ಣ ಆಶ್ರಮದ ವಿವೇಕ ಸ್ಮಾರಕ ನಿರ್ಮಾಣ ಯೋಜನೆಯ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು. ಹೆಚ್ಚು ಹೆಚ್ಚು ಜನರು ಮುಂದೆ ಬಂದು ಧ್ವನಿ ಎತ್ತಿ ಈ ಮಹತ್ಕಾರ್ಯವನ್ನು ಬೆಂಬಲಿಸಬೇಕು ಎಂದು ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಕರೆ ನೀಡಿದ್ದಾರೆ.</p>.<p>ಇವರ ಹೇಳಿಕೆಗೆ ಹಂ.ಪ.ನಾಗರಾಜಯ್ಯ, ಸಿ.ಪಿ.ಕೃಷ್ಣಕುಮಾರ್, ಚಿದಾನಂದಗೌಡ, ಭೈರವಮೂರ್ತಿ ಸಹ ದನಿಗೂಡಿಸಿದ್ದಾರೆ.</p>.<p>ವಿವೇಕಾನಂದ ಅವರು ತಂಗಿದ್ದ ಸ್ಥಳದಲ್ಲಿ ಈ ಯೋಜನೆ ಸಾಕಾರಗೊಂಡು ಸಾವಿರಾರು ಯುವಕರ ಭವಿಷ್ಯ ರೂಪುಗೊಳ್ಳುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.</p>.<p>ಹೈಕೋರ್ಟ್ ಸಹ ರಾಮಕೃಷ್ಣ ಆಶ್ರಮದ ಪರವಾಗಿ ತೀರ್ಪು ನೀಡಿರುವುದು ಸ್ವಾಗತಾರ್ಹ ಹಾಗೂ ಔಚಿತ್ಯಪೂರ್ಣವೂ ಆಗಿದೆ. ಆದಾಗ್ಯೂ, ಸ್ಮಾರಕ ವಿರೋಧಿಗಳು ಮತ್ತೆ ಮತ್ತೆ ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲ ಎಂದು ಅವರು ಟೀಕಿಸಿದ್ದಾರೆ.</p>.<p>ಕೋವಿಡ್ ಸಂಕಷ್ಟದಲ್ಲೂ, ಲಾಕ್ಡೌನ್ ಮಧ್ಯೆದಲ್ಲಿ ಚಿಕ್ಕಮಕ್ಕಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವುದು ಅನುಚಿತ ಎಂದು ಅವರು ಖಂಡಿಸಿದ್ದಾರೆ.</p>.<p>ಲಕ್ಷ್ಮೀಪುರಂ ಕನ್ನಡ ಶಾಲೆಯನ್ನು ಸಂಗೀತ ವಿಶ್ವವಿದ್ಯಾಲಯಕ್ಕೆ ಬಿಟ್ಟುಕೊಟ್ಟಾಗ, ಇಟ್ಟಿಗೆಗೂಡಿನ ಕನ್ನಡ ಶಾಲೆ ಮುಚ್ಚಿದಾಗ ಮಾತನಾಡದ ಇವರು ಎನ್ಟಿಎಂ ಶಾಲೆ ವಿಚಾರದಲ್ಲಿ ದನಿ ಎತ್ತುತ್ತಿದ್ದಾರೆ. ಭಾರತೀಯ ಸಂಸ್ಕೃತಿಗೆ ಪೂರಕವಾದ ಕೆಲಸಗಳಿಗೆಲ್ಲ ಕಲ್ಲು ಹಾಕುವುದೇ ಇವರ ಮಾನಸಿಕ ಸ್ಥಿತಿಯಾಗಿದೆ ಎಂದು ಅವರು ಹರಿಹಾಯ್ದಿದ್ದಾರೆ.</p>.<p>ಕನ್ನಡ ಶಾಲೆ ಮುಚ್ಚಿ ಹೋಗುತ್ತದೆ ಎಂಬುದು ಸುಳ್ಳು. ಈಗ ಇಲ್ಲಿರುವ ಶಾಲೆಯನ್ನು ದೇವರಾಜ ಶಾಲೆಯಲ್ಲಿ ವಿಲೀನಗೊಳಿಸಲಾಗುತ್ತದೆ. ದೇವರಾಜ ಶಾಲೆಗೆ ರಾಮಕೃಷ್ಣಾಶ್ರಮವು ಎಲ್ಲ ನೆರವನ್ನೂ ನೀಡಲಿದೆ. ಈ ಶಾಲೆಯು ಮಾದರಿ ಶಾಲೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.<p>ಸ್ವಾಮಿ ವಿವೇಕಾನಂದ ಅವರು ಮಕ್ಕಳು ಮತ್ತು ಯುವಜನತೆಗೆ ಉಜ್ವಲ ಆದರ್ಶವಾಗಿದ್ದಾರೆ. ಆದರೆ, ಇಂತಹ ಪ್ರತಿಭಟನೆಗಳು ಮಕ್ಕಳ ಮನಸ್ಸಿನಲ್ಲಿ ಸ್ವಾಮಿ ವಿವೇಕಾನಂದ ಕುರಿತು ತಪ್ಪು ಅಭಿಪ್ರಾಯ ಮೂಡಿಸುತ್ತವೆ ಎಂದು ಅವರ ಕಳವಳ ವ್ಯಕ್ತಪಡಿಸಿದ್ದಾರೆ.</p>.<p>ಇವರ ಜಂಟಿ ಹೇಳಿಕೆಯನ್ನು ಶ್ರೀ ರಾಮಕೃಷ್ಣ ಆಶ್ರಮವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>