ಮೈಸೂರು: ‘ದೀಪ ಹಚ್ಚುವುದರ ಹಿಂದೆ ವೈಜ್ಞಾನಿಕ ಕಾರಣವಿದೆ. ವೈರಸ್ಗಳು ಎಲ್ಲೇ ಇದ್ದರೂ ದೀಪದ ಬೆಳಕಿನ ಬಳಿ ಬಂದು, ಶಾಖ ತಡೆಯಲಾರದೆ ಸಾಯುತ್ತವೆ’ ಎಂದು ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಶನಿವಾರ ಇಲ್ಲಿ ಹೇಳಿದರು.
ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷ ದೀಪ ಹಚ್ಚಲು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದರಿಂದ ರಾಮದಾಸ್ ಮೈಸೂರು ನಗರದಲ್ಲಿ ಮೈಕ್ ಹಿಡಿದು ಪ್ರಚಾರದಲ್ಲಿ ತೊಡಗಿದ್ದಾರೆ.
ದಸರಾ ವಸ್ತು ಪ್ರದರ್ಶನದ ಮಾರುಕಟ್ಟೆಯಲ್ಲಿ ಮೇಣದ ಬತ್ತಿ ಮತ್ತು ಮಾಸ್ಕ್ಗಳನ್ನು ವಿತರಣೆ ಮಾಡಿದರು. ಈ ವೇಳೆ ಜನರು ಗುಂಪಾಗಿ ಬಂದು, ಮುಗಿಬಿದ್ದ ಘಟನೆಯೂ ನಡೆಯಿತು.