ಸರಗೂರು: ಚಿರತೆ ದಾಳಿಗೆ ಕುರಿ ಬಲಿ
ಸರಗೂರು: ಇಲ್ಲಿನ 11ನೇ ವಾರ್ಡ್ನ ಬಿಡಗಲು ಡಾ. ಬಿ.ಆರ್.ಅಂಬೇಡ್ಕರ್ ಬೀದಿಯ ಕೊಟ್ಟಿಗೆಯಲ್ಲಿದ್ದ ಕುರಿಯನ್ನು ಬುಧವಾರ ರಾತ್ರಿ ಚಿರತೆ ಎಳೆದುಕೊಂಡು ಹೋಗಿ ತಿಂದುಹಾಕಿದೆ.
ಬಿಳಿತಾಯಮ್ಮ ಅವರ ಕೊಟ್ಟಿಗೆಯಲ್ಲಿ ಸುಮಾರು 15 ಕುರಿಗಳು ಇದ್ದವು. ಅದರಲ್ಲಿ ಒಂದು ಕುರಿಯನ್ನು ಚಿರತೆ ಎಳೆದುಕೊಂಡು ಹೋಗಿದೆ.
‘ಈ ಭಾಗದಲ್ಲಿ ಒಂದು ವಾರದಿಂದ ಚಿರತೆ ತಿರುಗಾಡುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಬಿಜೆಪಿ ತಾಲ್ಲೂಕು ಘಟಕದ ಕಾರ್ಯದರ್ಶಿ ರಾಜು, ಶಿವಣ್ಣ ಆರೋಪಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.