<p><strong>ಮೈಸೂರು</strong>: ಸಾರ್ವಜನಿಕರ ಉದ್ದೇಶಕ್ಕೆ ನಗರದ ವಿವಿಧ ಬಡಾವಣೆಗಳಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಂಚಿಕೆ ಮಾಡಲಿರುವ 300ಕ್ಕೂ ಅಧಿಕ ನಾಗರಿಕ ಸೌಕರ್ಯ ನಿವೇಶನ (ಸಿ.ಎ) ಕೋರಿ ಸೆ.25ರಿಂದ ಅ.30ರವರೆಗೆ ಸಂಘ, ಸಂಸ್ಥೆಗಳು ಅರ್ಜಿ ಸಲ್ಲಿಸಬಹುದು ಎಂದು ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್ ತಿಳಿಸಿದರು.</p>.<p>‘24 ಆದ್ಯತಾ ಕ್ಷೇತಗಳಿಗೆ ಸಿ.ಎ ನಿವೇಶನ ಹಂಚಿಕೆ ಮಾಡಲು ತೀರ್ಮಾನಿಸಿದ್ದು, ಪ್ರತಿ ಚದರ ಮೀಟರ್ಗೆ ₹ 2,100 ನಿಗದಿಪಡಿಸಲಾಗಿದೆ. ಸೆ.23ರಿಂದ ಅ.22ರವರೆಗೆ ಪ್ರಾಧಿಕಾರದ ಸ್ಪಂದನ ಕೌಂಟರ್ನಲ್ಲಿ ಅರ್ಜಿ ಪಡೆದು ಅಲ್ಲಿಯೇ ಸಲ್ಲಿಸಬೇಕು. ಅರ್ಜಿಗೆ ₹ 1 ಸಾವಿರ ಶುಲ್ಕ ನಿಗದಿ ಮಾಡಲಾಗಿದೆ. ನೋಂದಣಿಯಾದ ಸಹಕಾರ ಸಂಘಗಳು, ಶೈಕ್ಷಣಿಕ, ಧಾರ್ಮಿಕ ಉದ್ದೇಶಗಳಿಗಾಗಿ ಸ್ಥಾಪನೆಯಾದ ಸಂಘಗಳು ಮತ್ತು ಸರ್ಕಾರಿ ಇಲಾಖೆಗಳು, ಟ್ರಸ್ಟ್ಗಳು ನಿವೇಶನ ಪಡೆಯಲು ಅರ್ಹವಾಗಿವೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.</p>.<p>‘ಸರ್ಕಾರಿ ಇಲಾಖೆಗಳು, ಕನ್ನಡ ಮಾಧ್ಯಮ ಶಾಲೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಂಗವಿಕಲರಕ್ಷೇಮಾಭಿವೃದ್ಧಿಗೆ ಮೀಸಲಾಗಿರುವ ಸಂಸ್ಥೆಗಳಿಗೆ ನಿವೇಶನಗಳನ್ನು ಶೇ 50 ರಷ್ಟು ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಲಾಗುತ್ತದೆ. ಪರಿಶಿಷ್ಟ ಜಾತಿ ಸಂಸ್ಥೆಗಳಿಗೆ ಶೇ 18, ಪರಿಶಿಷ್ಟ ಪಂಗಡ ಸಂಸ್ಥೆಗಳಿಗೆ ಶೇ 3 ಹಾಗೂ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಗಳಿಗೆ ಶೇ 2 ರಷ್ಟು ನಿವೇಶನವನ್ನು ಮೀಸಲಾತಿಯಡಿ ಹಂಚಿಕೆ ಮಾಡಲಾಗುತ್ತದೆ’ ಎಂದರು.</p>.<p>‘ಒಂದು ಅರ್ಜಿಯಲ್ಲೇ ಆದ್ಯತೆಯ ಮೇರೆಗೆ ಮೂರು ಸಿ.ಎ ನಿವೇಶನಗಳಿಗೆ ಕೋರಿಕೆ ಸಲ್ಲಿಸಬಹುದು. ಅವುಗಳ ಪೈಕಿ ಹೆಚ್ಚು ವಿಸ್ತೀರ್ಣದ ಸಿ.ಎ ನಿವೇಶನಕ್ಕೆ ಪ್ರಾರಂಭಿಕ ಠೇವಣಿ ಮತ್ತು ನೋಂದಣಿ ಶುಲ್ಕ ಮಾತ್ರ ಪಾವತಿಸಬೇಕಾಗಿರುತ್ತದೆ’ ಎಂದು ತಿಳಿಸಿದರು.</p>.<p>ಮನೆ ಸಮೀಕ್ಷೆ: ಗುಂಪು ಮನೆ ನಿರ್ಮಿಸಲು ಯೋಜನೆ ಹೊಂದಿದ್ದು, ಮನೆ ಬೇಡಿಕೆಯ ಸಮೀಕ್ಷೆಗಾಗಿ ಪ್ರಾಧಿಕಾರವು Mysuruuda ಆ್ಯಪ್ ರೂಪಿಸಿ ಸಮೀಕ್ಷೆ ನಡೆಸುತ್ತಿದೆ. ಈಗಾಗಲೇ 580 ಮಂದಿ ಮಾಹಿತಿ ನೀಡಿದ್ದಾರೆ. 380 ಮಂದಿ ಅರ್ಜಿ ಸಲ್ಲಿಸಲು ನೋಂದಣಿ ಮಾಡಿಕೊಂಡಿದ್ದಾರೆ ಎಂದು ರಾಜೀವ್ ಮಾಹಿತಿ ನೀಡಿದರು.</p>.<p>‘ಬಹುಮಹಡಿ ಗುಂಪು ವಸತಿ ಯೋಜನೆಯಡಿ 1,980 ಮನೆಗಳ ನಿರ್ಮಾಣ ಮಾಡಲಾಗುವುದು. ರಾಮಕೃಷ್ಣ ವೃತ್ತ, ವಿಜಯನಗರ ಹಾಗೂ ಸಾತಗಳ್ಳಿಯಲ್ಲಿ ವಸತಿ ಸಮುಚ್ಛಯ ನಿರ್ಮಿಸಲು ಉದ್ದೇಶಿಸಿದ್ದೇವೆ. ಈ ಯೋಜನೆಯಡಿ ಮನೆಯನ್ನು ಖರೀದಿಸ ಬಯಸುವವರು ಆ್ಯಪ್ನಲ್ಲಿ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಬಹುದು’ ಎಂದರು.</p>.<p>ಮುಡಾ ಸದಸ್ಯರಾದ ಲಿಂಗಣ್ಣ, ನವೀನ್ ಕುಮಾರ್, ಮಹದೇಶ್, ಲಕ್ಷ್ಮಿ ಹಾಗೂ ಆಯುಕ್ತ ಡಿ.ಬಿ.ನಟೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಸಾರ್ವಜನಿಕರ ಉದ್ದೇಶಕ್ಕೆ ನಗರದ ವಿವಿಧ ಬಡಾವಣೆಗಳಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಂಚಿಕೆ ಮಾಡಲಿರುವ 300ಕ್ಕೂ ಅಧಿಕ ನಾಗರಿಕ ಸೌಕರ್ಯ ನಿವೇಶನ (ಸಿ.ಎ) ಕೋರಿ ಸೆ.25ರಿಂದ ಅ.30ರವರೆಗೆ ಸಂಘ, ಸಂಸ್ಥೆಗಳು ಅರ್ಜಿ ಸಲ್ಲಿಸಬಹುದು ಎಂದು ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್ ತಿಳಿಸಿದರು.</p>.<p>‘24 ಆದ್ಯತಾ ಕ್ಷೇತಗಳಿಗೆ ಸಿ.ಎ ನಿವೇಶನ ಹಂಚಿಕೆ ಮಾಡಲು ತೀರ್ಮಾನಿಸಿದ್ದು, ಪ್ರತಿ ಚದರ ಮೀಟರ್ಗೆ ₹ 2,100 ನಿಗದಿಪಡಿಸಲಾಗಿದೆ. ಸೆ.23ರಿಂದ ಅ.22ರವರೆಗೆ ಪ್ರಾಧಿಕಾರದ ಸ್ಪಂದನ ಕೌಂಟರ್ನಲ್ಲಿ ಅರ್ಜಿ ಪಡೆದು ಅಲ್ಲಿಯೇ ಸಲ್ಲಿಸಬೇಕು. ಅರ್ಜಿಗೆ ₹ 1 ಸಾವಿರ ಶುಲ್ಕ ನಿಗದಿ ಮಾಡಲಾಗಿದೆ. ನೋಂದಣಿಯಾದ ಸಹಕಾರ ಸಂಘಗಳು, ಶೈಕ್ಷಣಿಕ, ಧಾರ್ಮಿಕ ಉದ್ದೇಶಗಳಿಗಾಗಿ ಸ್ಥಾಪನೆಯಾದ ಸಂಘಗಳು ಮತ್ತು ಸರ್ಕಾರಿ ಇಲಾಖೆಗಳು, ಟ್ರಸ್ಟ್ಗಳು ನಿವೇಶನ ಪಡೆಯಲು ಅರ್ಹವಾಗಿವೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.</p>.<p>‘ಸರ್ಕಾರಿ ಇಲಾಖೆಗಳು, ಕನ್ನಡ ಮಾಧ್ಯಮ ಶಾಲೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಂಗವಿಕಲರಕ್ಷೇಮಾಭಿವೃದ್ಧಿಗೆ ಮೀಸಲಾಗಿರುವ ಸಂಸ್ಥೆಗಳಿಗೆ ನಿವೇಶನಗಳನ್ನು ಶೇ 50 ರಷ್ಟು ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಲಾಗುತ್ತದೆ. ಪರಿಶಿಷ್ಟ ಜಾತಿ ಸಂಸ್ಥೆಗಳಿಗೆ ಶೇ 18, ಪರಿಶಿಷ್ಟ ಪಂಗಡ ಸಂಸ್ಥೆಗಳಿಗೆ ಶೇ 3 ಹಾಗೂ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಗಳಿಗೆ ಶೇ 2 ರಷ್ಟು ನಿವೇಶನವನ್ನು ಮೀಸಲಾತಿಯಡಿ ಹಂಚಿಕೆ ಮಾಡಲಾಗುತ್ತದೆ’ ಎಂದರು.</p>.<p>‘ಒಂದು ಅರ್ಜಿಯಲ್ಲೇ ಆದ್ಯತೆಯ ಮೇರೆಗೆ ಮೂರು ಸಿ.ಎ ನಿವೇಶನಗಳಿಗೆ ಕೋರಿಕೆ ಸಲ್ಲಿಸಬಹುದು. ಅವುಗಳ ಪೈಕಿ ಹೆಚ್ಚು ವಿಸ್ತೀರ್ಣದ ಸಿ.ಎ ನಿವೇಶನಕ್ಕೆ ಪ್ರಾರಂಭಿಕ ಠೇವಣಿ ಮತ್ತು ನೋಂದಣಿ ಶುಲ್ಕ ಮಾತ್ರ ಪಾವತಿಸಬೇಕಾಗಿರುತ್ತದೆ’ ಎಂದು ತಿಳಿಸಿದರು.</p>.<p>ಮನೆ ಸಮೀಕ್ಷೆ: ಗುಂಪು ಮನೆ ನಿರ್ಮಿಸಲು ಯೋಜನೆ ಹೊಂದಿದ್ದು, ಮನೆ ಬೇಡಿಕೆಯ ಸಮೀಕ್ಷೆಗಾಗಿ ಪ್ರಾಧಿಕಾರವು Mysuruuda ಆ್ಯಪ್ ರೂಪಿಸಿ ಸಮೀಕ್ಷೆ ನಡೆಸುತ್ತಿದೆ. ಈಗಾಗಲೇ 580 ಮಂದಿ ಮಾಹಿತಿ ನೀಡಿದ್ದಾರೆ. 380 ಮಂದಿ ಅರ್ಜಿ ಸಲ್ಲಿಸಲು ನೋಂದಣಿ ಮಾಡಿಕೊಂಡಿದ್ದಾರೆ ಎಂದು ರಾಜೀವ್ ಮಾಹಿತಿ ನೀಡಿದರು.</p>.<p>‘ಬಹುಮಹಡಿ ಗುಂಪು ವಸತಿ ಯೋಜನೆಯಡಿ 1,980 ಮನೆಗಳ ನಿರ್ಮಾಣ ಮಾಡಲಾಗುವುದು. ರಾಮಕೃಷ್ಣ ವೃತ್ತ, ವಿಜಯನಗರ ಹಾಗೂ ಸಾತಗಳ್ಳಿಯಲ್ಲಿ ವಸತಿ ಸಮುಚ್ಛಯ ನಿರ್ಮಿಸಲು ಉದ್ದೇಶಿಸಿದ್ದೇವೆ. ಈ ಯೋಜನೆಯಡಿ ಮನೆಯನ್ನು ಖರೀದಿಸ ಬಯಸುವವರು ಆ್ಯಪ್ನಲ್ಲಿ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಬಹುದು’ ಎಂದರು.</p>.<p>ಮುಡಾ ಸದಸ್ಯರಾದ ಲಿಂಗಣ್ಣ, ನವೀನ್ ಕುಮಾರ್, ಮಹದೇಶ್, ಲಕ್ಷ್ಮಿ ಹಾಗೂ ಆಯುಕ್ತ ಡಿ.ಬಿ.ನಟೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>